ನಡೆ ನುಡಿ ಸಿದ್ಧಾಂತ

Author : ರಂಜಾನ್ ದರ್ಗಾ

Pages 96

₹ 23.00




Year of Publication: 2010

Synopsys

ಲೇಖಕ ರಂಜಾನ್ ದರ್ಗಾ ಅವರು ಬರೆದ ಕೃತಿ-ನಡೆ ನುಡಿ ಸಿದ್ಧಾಂತ. ಶರಣರ ಜೀವಾಳವೇ-ನಡೆ ನುಡಿ-ಎರಡೂ ಒಂದಾಗಿಸುವುದು. ಅಂತರಂಗ-ಬಹಿರಂಗದಲ್ಲಿ ಯಾವುದೇ ವ್ಯತ್ಯಾಸ ಇರಕೂಡದು. ಇದ್ದರೆ ಅಂತಹ ವ್ಯಕ್ತಿತ್ವ ದೇವರಿಗೆ ಮೆಚ್ಚುಗೆಯಾಗದು ಎಂಬ ದೃಢ ಎಚ್ಚರಿಕೆಯ ಬದುಕು ಶರಣರದ್ದು, ನಡೆ-ನುಡಿಯ ಸಿದ್ಧಾಂತವನ್ನು ಜೀವನದ ಉಸಿರಾಗಿಸಿಕೊಂಡ ಶರಣರ ಪ್ರಾಂಜಲ ಬದುಕು, ನಿರ್ಮಲ ಮನಸ್ಸಿನ ಸ್ವರೂಪ, ಭಕ್ತಿ ಭಾವದ ತನ್ಮಯತೆ, ಪರರ ತೃಪ್ತಿಯಲ್ಲೇ ಸಂತೃಪ್ತಿ ಕಾಣುವ ಅಲೌಕಿಕ ಮನಸ್ಸು ಇಂತಹ ವಿಚಾರಗಳ ವಿಶ್ಲೇಷಣೆ ಈ ಕೃತಿ.

About the Author

ರಂಜಾನ್ ದರ್ಗಾ

ಲೇಖಕ ರಂಜಾನ್ ದರ್ಗಾ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ಗ್ರಾಮದವರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಪ್ರಗತೀಪರ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ, ಬಸವಣ್ಣನವರ ದೇವರು, ಬಸವ ಧರ್ಮದ ವಿಶ್ವ ಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ರಂಜಾನ್ ದರ್ಗಾ ಅವರಿಗೆ ಸಂದಿವೆ. ...

READ MORE

Related Books