ವಚನ ಬೆಳಕು

Author : ಕಾಶೀನಾಥ ಅಂಬಲಗೆ

Pages 56

₹ 20.00




Year of Publication: 2017
Published by: ಪ್ರಗತಿ ಪ್ರಕಾಶನ
Address: #39, ಬೇವು ಬೆಲ್ಲ, ಜಯನಗರ, ಕುಸುನೂರು ರಸ್ತೆ, ಕಲಬುರಗಿ

Synopsys

ತಮ್ಮ ಪುತ್ರ ರಾಚಣ್ಣ ನವರ (2017 ಜು. 2) ಮದುವೆ ಸಂದರ್ಭದಲ್ಲಿ ಬರುವ ಅತಿಥಿಗಳಿಗೆ ವಚನಗಳ ಪುಸ್ತಕ ನೀಡುವ ಸಂಕಲ್ಪದೊಂದಿಗೆ ಕಾಶೀನಾಥ ಅಂಬಲಗೆ ಅವರು ವಚನಗಳನ್ನು ಆಯ್ದು 56 ಪುಟದ ಈ ಕಿರು ಹೊತ್ತಿಗೆ ಪ್ರಕಟಿಸಿದ್ದೇ ’ವಚನ ಬೆಳಕು’ ಕೃತಿ. ವಚನಗಳ ಪ್ರಸಾರ ಹಾಗೂ ಪ್ರಚಾರ ಎರಡಕ್ಕೂ ತಮ್ಮ ಮಗನ ಮದುವೆ ಸಂದರ್ಭವೇ ಬಳಸಿಕೊಂಡಿದ್ದು ಕೃತಿ ಸಂಪಾದಕರ ವಚನಗಳ ಒಲವಿಗೆ ದ್ಯೋತಕವಾಗಿದೆ.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Related Books