ಶರಣ ಸಾಹಿತ್ಯದಲ್ಲಿ ಅರ್ಥ ವ್ಯವಸ್ಥೆ

Author : ಪ್ರೇಮಾ ಅಪಚಂದ

Pages 108

₹ 85.00




Year of Publication: 2020
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕಿ ಡಾ. ಪ್ರೇಮಾ ಅಪಚಂದ ಅವರ ಕೃತಿ- ಶರಣ ಸಾಹಿತ್ಯದಲ್ಲಿ ಅರ್ಥವ್ಯವಸ್ಥೆ. ಅರ್ಥಶಾಸ್ತ್ರದ ಪರಿಕಲ್ಪನೆಗಳಾದ ಕೃಷಿ,ಸ್ವಯಂ ಉದ್ಯೋಗ,ಉತ್ಪಾದನೆ,ವಿತರಣೆ, ಆದಾಯ,ಅನುಭೋಗ, ಉಳಿತಾಯ, ಇತ್ಯಾದಿ ಅಂಶಗಳನ್ನು ಮಂಡಿಸಿದ್ದಾರೆ. ಜೊತೆಗೆ ಶರಣರ ವಚನಗಳಲ್ಲಿ ಬಂಡವಾಳಶಾಹಿ ಮತ್ತು ಸಮಾಜವಾದ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಉತ್ಪಾದನಾ ಸಿದ್ಧಾಂತದಲ್ಲಿ ಕಾಯಕವು ಮಹತ್ವದ ಪಾತ್ರವಹಿಸುತ್ತದೆ 'ಕಾಯಕವೇ ಕೈಲಾಸ 'ಎಂಬ ಶರಣರ ಸಿದ್ಧಾಂತವನ್ನು ಅರ್ಥಶಾಸ್ತ್ರ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಿದ್ದಾರೆ. ಸಮಾಜದಲ್ಲಿ ಆರ್ಥಿಕ ಸಮಾನತೆ ಮತ್ತು ಸಮಾಜದ ಏಳಿಗೆಗೆ ಭದ್ರಬುನಾದಿ ನೀಡುತ್ತದೆ ಎಂದು ಲೇಖಕಿ ವಿವರಿಸಿದ್ದಾರೆ. ಪ್ರಸ್ತುತ ಆಧುನಿಕ ಅರ್ಥವ್ಯವಸ್ಥೆ ಮತ್ತು ಶರಣರ ಆಶಯ ಎಂಬ ಶೀರ್ಷಿಕೆಯಲ್ಲಿ ಶರಣರ ಆರ್ಥಿಕ ಚಿಂತನೆಗಳನ್ನು ಸಂಗ್ರಹ ಮಾಡಿದ್ದಾರೆ. ಹಣ ಬದುಕಿನ ಅವಿಭಾಜ್ಯ ಅಂಗ ಅದನ್ನು ಅಲ್ಲಗಳೆದು ಸಂಪತ್ತಿನ ಸಂಗ್ರಹವನ್ನು ಸಮಾಜದ ಅಭಿವೃದ್ಧಿಗೆ ತೊಡಗಿಸಿದಲ್ಲಿ ದೇಶದ ಕಲ್ಯಾಣ ಸಾಧ್ಯವೆಂಬ ಅರ್ಥಶಾಸ್ತ್ರದ ತತ್ವ ಸಿದ್ಧಾಂತವನ್ನು ಸ್ಪಷ್ಟವಾಗಿ ವಿಶ್ಲೇಷಿಸಿದ್ದಾರೆ.

About the Author

ಪ್ರೇಮಾ ಅಪಚಂದ
(24 July 1981)

ಡಾ.ಪ್ರೇಮಾ ಅಪಚಂದ ಅವರು ಮೂಲತಃ ಕಲಬುರಗಿಯವರು. ತಂದೆ- ರಾಜೇಂದ್ರಪ್ಪ ಅಪಚಂದ. ತಾಯಿ- ತಿಪ್ಪಮ್ಮಾ ಅಪಚಂದ. ಪ್ರೌಢಶಿಕ್ಷಣವನ್ನು ಕಲಬುರಗಿಯ ಆದರ್ಶನಗರದ ಸರ್ಕಾರಿ ಪ್ರೌಢಶಾಲೆಯಲ್ಲೂ, ಪದವಿಪೂರ್ವ ಶಿಕ್ಷಣವನ್ನು ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲೂ, ಬಿ.ಎ ಪದವಿಯನ್ನು ಸರ್ಕಾರಿ ಪದವಿ ಕಾಲೇಜಿನಲ್ಲೂ ಹಾಗೂ ಕನ್ನಡ ಸ್ನಾತಕೋತ್ತರ ಪದವಿಯನ್ನು ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು. ಡಾ. ಪ್ರೇಮಾ ಅವರು ಸಮಾಜದ ಪುರುಷ ಪ್ರಧಾನ ಒಳವಿನ್ಯಾಸಗಳು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿವೆ ಎಂಬ ಅಂಶಗಳನ್ನು ಇಟ್ಟುಕೊಂಡು ಹೈದ್ರಾಬಾದ ಕರ್ನಾಟಕ ಮಹಿಳಾ ಕಾವ್ಯ ವಿಷಯವಾಗಿ ಮಹಾಪ್ರಬಂಧವನ್ನು ಮಂಡಿಸಿ ಕಲಬುರಗಿ ವಿಶ್ವಾವಿದ್ಯಾಲಯದಿಂದ 2011 ರಲ್ಲಿ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ಚಿತ್ತಾಪೂರ ನಾಗಾವಿ ಪದವಿಪೂರ್ವ ...

READ MORE

Related Books