
ಸಾಹಿತಿ ಎ.ಕೆ. ರಾಮೇಶ್ವರ ಅವರ ಕೃತಿ-ಕಲ್ಯಾಣ ಸಂಪತ್ತು. 12ನೇ ಶತಮಾನದ ನಡೆ-ನುಡಿ ಸಮನ್ವಯಗೊಳಿಸಿದ ವಚನಗಳು ನಮ್ಮ ಮನದ ಕತ್ತಲೆಯ ಬಾಳಿಗೆ ಬೆಳಕು ಕೊಡುವ ಕಳೆಯುವ ದಿವ್ಯ ಔಷಧಿ ಗಳಾಗಿವೆ. ಇಂತಹ ಕೆಲವೊಂದು ವಚನಗಳಿಗೆ ಹಿರಿಯ ಅನುಭಾವಿ ಸಾಹಿತಿ ಎ.ಕೆ. ರಾಮೇಶ್ವರ್ ಅವರು ಕಲ್ಯಾಣ ಸಂಪತ್ತು ಎಂಬ ಕೃತಿಯಲ್ಲಿ ಸರಳವಾಗಿ ವಿಶ್ಲೇಷಿಸಿದ್ದಾರೆ. ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಸಿದ್ದರಾಮೇಶ್ವರ, ಅಕ್ಕಮಹಾದೇವಿ ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ ದೇವರ ದಾಸಿಮಯ್ಯ, ಷಣ್ಮುಖ ಶಿವಯೋಗಿಗಳು ಈ ಎಲ್ಲ ಶರಣರ ವಚನಗಳ ಅಂತರಾಳವನ್ನು ವಿವರಿಸಿದ್ದಾರೆ.
©2025 Book Brahma Private Limited.