ಕಲ್ಯಾಣ ಸಂಪತ್ತು

Author : ಎ.ಕೆ.ರಾಮೇಶ್ವರ

Pages 112

₹ 100.00




Year of Publication: 2019
Published by: ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್
Address: ಪಾಳಾ, ಕಲಬುರಗಿ ತಾಲೂಕು ಹಾಗೂ ಜಿಲ್ಲೆ
Phone: 9731555117

Synopsys

ಸಾಹಿತಿ ಎ.ಕೆ. ರಾಮೇಶ್ವರ ಅವರ ಕೃತಿ-ಕಲ್ಯಾಣ ಸಂಪತ್ತು. 12ನೇ ಶತಮಾನದ ನಡೆ-ನುಡಿ ಸಮನ್ವಯಗೊಳಿಸಿದ ವಚನಗಳು ನಮ್ಮ ಮನದ ಕತ್ತಲೆಯ ಬಾಳಿಗೆ ಬೆಳಕು ಕೊಡುವ ಕಳೆಯುವ ದಿವ್ಯ ಔಷಧಿ ಗಳಾಗಿವೆ.  ಇಂತಹ ಕೆಲವೊಂದು ವಚನಗಳಿಗೆ ಹಿರಿಯ ಅನುಭಾವಿ ಸಾಹಿತಿ ಎ.ಕೆ. ರಾಮೇಶ್ವರ್ ಅವರು ಕಲ್ಯಾಣ ಸಂಪತ್ತು ಎಂಬ ಕೃತಿಯಲ್ಲಿ ಸರಳವಾಗಿ ವಿಶ್ಲೇಷಿಸಿದ್ದಾರೆ. ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಸಿದ್ದರಾಮೇಶ್ವರ, ಅಕ್ಕಮಹಾದೇವಿ ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ ದೇವರ ದಾಸಿಮಯ್ಯ, ಷಣ್ಮುಖ ಶಿವಯೋಗಿಗಳು ಈ ಎಲ್ಲ ಶರಣರ ವಚನಗಳ ಅಂತರಾಳವನ್ನು ವಿವರಿಸಿದ್ದಾರೆ. 

About the Author

ಎ.ಕೆ.ರಾಮೇಶ್ವರ
(02 May 1934)

ಎ.ಕೆ.ರಾಮೇಶ್ವರ ಮಕ್ಕಳ ಸಾಹಿತಿಗಳಲ್ಲಿ ಪ್ರಮುಖರು. ಮಕ್ಕಳಿಗಾಗಿಯೇ ಹಲವಾರು ಕೃತಿಗಳನ್ನು ರಚಿಸಿದ ಕೀರ್ತಿ ಇವರದು. 1934 ಮೇ 2ರಂದು ವಿಜಯಪುರ  ಜಿಲ್ಲೆಯ ದದಾಮಟ್ಟಿ ತಾಲ್ಲೂಕಿನಲ್ಲಿ ಹುಟ್ಟಿದ ಎ.ಕೆ.ರಾಮೇಶ್ವರ ಅವರು ಗುಲಬರ್ಗಾ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಬಂದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಮೇಶ್ವರ ಅವರು ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾದವರು.  ಮಕ್ಕಳಿಗಾಗಿ ಸುಮಾರು ಹತ್ತು ಗ್ರಂಥಗಳನ್ನು ರಚಿಸಿರುವ ಇವರು ಜಾನಪದ ಕ್ಷೇತ್ರದಲ್ಲೂ ಗಮನಾರ್ಹ ಕೆಲಸ ಮಾಡಿದ್ದಾರೆ. ಸರಳ ಜೀವನ ನಡೆಸುವ ಎ.ಕೆ.ರಾಮೇಶ್ವರ ಅವರು ಹಳ್ಳಿಗಳತ್ತ ಆಕರ್ಷಿತರಾಗಿ ಜನಪದರ ಕಲೆ,ಸಾಹಿತ್ಯ, ಸಂಪ್ರದಾಯಗಳನ್ನೆಲ್ಲ ತೆರೆದ ಕಣ್ಣಿನಿಂದ ಕಂಡವರು.  ...

READ MORE

Related Books