ಬೀಸಿದರೆ ಉದುರಬೇಕು ನನ್ನತ್ರ ಹೂ ಹಣ್ಣು ನಕ್ಷತ್ರ...!

Author : ಕೆ.ವಿ. ತಿರುಮಲೇಶ್‌

Pages 160

₹ 150.00




Year of Publication: 2022
Published by: ಅಭಿನವ ಪ್ರಕಾಶನ
Address: : # 17, 18 - 2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ಪಿ.ಎಫ್., ಬಡಾವಣೆ, ವಿಜಯನಗರ, ಬೆಂಗಳೂರು-560040
Phone: 09448804905

Synopsys

ಖ್ಯಾತ ಕವಿ-ವಿಮರ್ಶಕ-ಲೇಖಕ ಡಾ. ಕೆ.ವಿ. ತಿರುಮಲೇಶ್ ಅವರ ಮಕ್ಕಳ ಕವನ ಸಂಕಲನ- ಬೀಸಿದರೆ ಉದುರಬೇಕು ನನ್ನತ್ರ ಹೂ ಹಣ್ಣು ನಕ್ಷತ್ರ. ಮಕ್ಕಳ ಕಲ್ಪನಾ ಲೋಕವೇ ಅದ್ಭುತ. ಅದು ತನ್ನಿಚ್ಛೆಯಂತೆ ಕ್ಷಣಾರ್ಧದಲ್ಲಿ ಆಗಿಬಿಡಬೇಕು ಎಂಬಷ್ಟು ಆತುರ, ಕುತೂಹಲ. ತಪ್ಪಿದರೆ, ತಾನಾಗೇ ಪ್ರಯೋಗಕ್ಕೆ ಇಳಿದು ಬಿಡುತ್ತದೆ. ಈ ಮಧ್ಯೆ, ಸಂಭವಿಸುವ ಅನಾಹುತಗಳು-ಅಪಾಯಗಳನ್ನು ಅದು ಲೆಕ್ಕಿಸುವುದೇ ಇಲ್ಲ.ದೂರದ ನಕ್ಷತ್ರಗಳನ್ನು ಹಿಡಿಯಬೇಕು ಎಂದು ಕೈಚಾಚುತ್ತದೆ. ಅವು ಸಿಗಲೇ ಬೇಕು ಎಂದು ಹಠ ತೊಡುತ್ತದೆ. ಇಲ್ಲದಿದ್ದರೆ ಅಳುತ್ತದೆ. ಮಕ್ಕಳ ಮನೋಜಗತ್ತಿನ ಈ ಪರಿಯ ಸೊಬಗನ್ನು ಅನುಭವಿಸುತ್ತಾ, ಕಲ್ಲಿಸಿಕೊಳ್ಳುತ್ತಾ ಬರೆದ ಕವನಗಳು, ಸರಳ ಭಾಷೆ ಹಾಗೂ ಅದ್ಭುತ ಕಲ್ಪನೆಗಳಿಂದ ಓದುಗರ ಗಮನ ಸೆಳೆಯುತ್ತವೆ.

About the Author

ಕೆ.ವಿ. ತಿರುಮಲೇಶ್‌
(12 September 1940 - 30 January 2023)

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...

READ MORE

Related Books