ಮಕ್ಕಳ ಸಾಹಿತ್ಯ 2012-2013

Author : ಕೆ. ಶಿವಲಿಂಗಪ್ಪ ಹಂದಿಹಾಳು

₹ 225.00




Year of Publication: 2021
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಬೆಂಗಳೂರು

Synopsys

’ಮಕ್ಕಳ ಸಾಹಿತ್ಯ 2012-2013’ ಕೃತಿಯು ಕೆ. ಶಿವಲಿಂಗಪ್ಪ ಹಂದಿಹಾಳು ಅವರು ಮಕ್ಕಳ ಸಾಹಿತ್ಯ ವಿಶೇಷವಾಗಿ ಕವನಗಳನ್ನು ಸಂಪಾದಿಸಿದ ಕೃತಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿ ಪ್ರಸ್ತುತ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕವಿತೆ, ಕಥೆ, ಕಾದಂಬರಿ, ಪ್ರಬಂಧ, ಆತ್ಮಕಥೆ ಬರೆಯುವ ಲೇಖಕರಿಗೂ ಕೊರತೆಯಿಲ್ಲ. ಆದರೆ, ಮಕ್ಕಳಿಗಾಗಿ ಬರೆಯುವವರ ಸಂಖ್ಯೆ ಬಹಳ ಕಡಿಮೆ. ಇದು ಕನ್ನಡ ಸಾಹಿತ್ಯದ ಸಮಗ್ರ ಬೆಳವಣಿಗೆಗೆ ಅಂಟಿದ ಮೋಸ. ವಸ್ತು, ಭಾಷೆ, ನಿರೂಪಣಾ ತಂತ್ರಗಳ ದೃಷ್ಟಿಯಿಂದ, ಮಕ್ಕಳ ಸಾಹಿತ್ಯಕ್ಕೆ ಹೊಸ ಹೊಸ ಪ್ರಯೋಗಗಳ ಅಗತ್ಯವಿದೆ. ಆಧುನಿಕ ಮಾಹಿತಿ ತಂತ್ರಜ್ಞಾನದ ನಾಗಾಲೋಟದ ಈ ದಿನಗಳಲ್ಲಿ ಮಕ್ಕಳಿಗೆ ಎಂತಹ ಸಾಹಿತ್ಯ ಬೇಕು ಎಂಬುದನ್ನು ಹಾಗೂ ಮಕ್ಕಳ ಮನಸ್ಸನ್ನು ಆಕರ್ಷಿಸುವ, ಆ ಮೂಲಕ ಮಗುವಿನ ಮನಸ್ಸನ್ನು ವಿಕಸನಗೊಳಿಸುವ ವಸ್ತು ವಿಷಯಗಳನ್ನು ಮತ್ತು ನಿರೂಪಣಾ ವಿಧಾನವನ್ನು ಮಕ್ಕಳ ಸಾಹಿತಿಗಳು ಕರಗತಗೊಳಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ, ಈ ಸಂಕಲನವು ಹಿರಿಯ ಹಾಗೂ ಕಿರಿಯ ಸಾಹಿತಿಗಳ ಮಕ್ಕಳ ಕತೆ-ಕವನಗಳನ್ನು ಒಳಗೊಂಡಿದ್ದು, ಹಳೆ-ಹೊಸ ಪ್ರವಾಹಗಳ ಸಮೃದ್ದ ಮಕ್ಕಳ ಸಾಹಿತ್ಯ ವಾಹಿನಿಯ ಪರಿಚಯ ಮಾಡಿ ಕೊಡುತ್ತದೆ' ಎಂದು ಪ್ರಸ್ತಾಪಿಸಲಾಗಿದೆ.

About the Author

ಕೆ. ಶಿವಲಿಂಗಪ್ಪ ಹಂದಿಹಾಳು
(01 June 1983)

ಮಕ್ಕಳ ಸಾಹಿತಿ ಕೆ. ಶಿವಲಿಂಗಪ್ಪ ಹಂದಿಹಾಳು ಅವರು ಬಳ್ಳಾರಿ ಜಿಲ್ಲೆಯ ಹಂದಿಹಾಳು ಗ್ರಾಮದವರು. ವಿದ್ಯಾಭ್ಯಾಸ ಎಂ.ಎ., ಬಿ.ಇಡಿ (ಪಿ.ಹೆಚ್.ಡಿ).,ಎನ್.ಇ.ಟಿ.(ಕನ್ನಡ) ಪದವೀಧರರು. ಪ್ರಸ್ತುತ ಸ. ಹಿ. ಪ್ರಾ. ಶಾಲೆ ಹಂದಿಹಾಳ ಗ್ರಾಮದ ಶಾಲೆಯಲ್ಲಿ ಸಹ ಶಿಕ್ಷಕರು. ಬಳಪ (ಮಕ್ಕಳ ಮಾಸ ಪತ್ರಿಕೆ) ಸ್ಥಾಪಕ ಸಂಪಾದಕರಾಗಿ, ಕನಕ ಅಧ್ಯಯನ ಸಂಶೋಧನಾ ಸಂಸ್ಥೆಯಿಂದ ಹೊರತರುತ್ತಿರುವ ತತ್ವಪದಗಳ ಸಂಪುಟ ಸಂಪಾದನಾ ಕಾರ್ಯದಲ್ಲಿ ಬಳ್ಳಾರಿ ಜಿಲ್ಲೆಯ ಕ್ಷೇತ್ರ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೃತಿಗಳು: ನಾನು ಮತ್ತು ಕನ್ನಡಕ (ಕವನ ಸಂಕಲನ), ಎಳೆಬಿಸಿಲು (ಮಕ್ಕಳ ಸಾಹಿತ್ಯ ಸಂಪದ), ಶಾವೋಲಿನ್  (ಇಂಗ್ಲಿಷ್ ಮೂಲ ಮಕ್ಕಳ ಕತೆಗಳು), ಆನಂದಾವಲೋಕನ (ಭಾರತೀಯ ಮಕ್ಕಳ ಸಾಹಿತ್ಯ ಕುರಿತು), ಬಳ್ಳಾರಿಯ ಬೆಡಗು (ಪ್ರಾಥಿನಿಧಿಕ ಕತಾ ಸಂಕಲನ), ದಿ ಯಂಗ್ ಸೈಂಟಿಸ್ಟ್, (ಮಕ್ಕಳ ಕಾದಂಬರಿ) ...

READ MORE

Related Books