ಪುಟ್ಟನ ಮನ

Author : ಕೆ.ವಿ. ತಿರುಮಲೇಶ್‌

Pages 90

₹ 110.00




Year of Publication: 2022
Published by: ವಸಂತ ಪ್ರಕಾಶನ
Address: # 360, 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011.
Phone: 080-40917099 / 7892106719

Synopsys

ಹೊಸ ಕಾಲದ ಮಕ್ಕಳಿಗೆ ಹೊಸ ಸಂವೇದನೆಯನ್ನು ರಚಿಸುವ ಉದ್ದೇಶದಿಂದ ಎಚ್.ಎಸ್. ವೆಂಕಟೇಶಮೂರ್ತಿಯವರ ಸಂಪಾದಕ್ವದಲ್ಲಿ ಹುಟ್ಟಿದ ಕೃತಿ ಕೆ.ವಿ. ತಿರುಮಲೇಶ್ ಅವರ ‘ಪುಟ್ಟನ ಮನ’ ಕವನಸಂಕಲನ. ಭೂತಗಳು, ಗುಮ್ಮಗಳು, ಯಕ್ಷಿಗಳು, ಏನೇನೋ ಅತಿಮಾನುಷ ಶಕ್ತಿಗಳು ನಮ್ಮ ಕಣ್ಣಿಗೆ ಕಂಡೂ ಕಾಣದಂತೆ ಅಲ್ಲಿ ಓಡಾಡುತ್ತಿದ್ದುವು. ಇನ್ನು ನನ್ನ ಹುಲ್ಲು ಹೊದೆಸಿದ ಮಣ್ಣಿನ ಮನೆ, ಹಟ್ಟಿ, ಕೊಟ್ಟಿಗೆಗಳು, ಅಂಗಳ, ತೋಟ, ಕಾಡುಗಳು, ಕೆರೆ ತೊರೆ ತೋಡುಗಳು, ಹಾಸುಪಾರೆಗಳು, ಮುಳಿಗುಡ್ಡೆಗಳು, ಮನೆಯವರು, ನೆರೆಯವರು, ಬದಲಾಗುತ್ತಿರುವ ಋತುಮಾನಗಳು, ಆಳುಕಾಳುಗಳು, ಪೂಜೆ ಪುರಸ್ಕಾರಗಳು, ಉತ್ಸವಗಳು, ಜಾತ್ರೆಗಳು, ಸಂತೆಗಳು, ಮದುವೆ ಮುಂಜಿಗಳು, ತಿಥಿ ಶ್ರಾದ್ಧಗಳು, ರೋಗ ರುಜಿನಗಳು, ಸಾವು ನೋವುಗಳು, ಕನಸು ನೆನಸುಗಳು, ತಿರುಗುತ್ತಿರುವ ಕಾಲಚಕ್ರ, ತಾಳೆ ಬಾಳೆ ತೆಂಗು ಕಂಗುಗಳು, ಪಶು ಪಕ್ಷಿ ಹಕ್ಕಿ ಪ್ರಾಣಿಗಳು, ಭಿಕ್ಷುಕರು ಇವೆಲ್ಲವೂ ಇಲ್ಲಿನ ಕವನ ವಸ್ತುಗಳಾಗಿದೆ.

About the Author

ಕೆ.ವಿ. ತಿರುಮಲೇಶ್‌
(12 September 1940 - 30 January 2023)

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...

READ MORE

Related Books