ಅಕ್ಷರ ಸ್ಪಂದನ

Author : ಭಾಗ್ಯಲಕ್ಷ್ಮಿ. ಸು. ಅಮೃತಾಪುರ.

Pages 96

₹ 50.00




Year of Publication: 2010
Published by: ಚಿದಂಬರ ಪ್ರಕಾಶನ
Address: ಭಾಗ್ಯಲಕ್ಷ್ಮಿ. ಸು. ಅಮೃತಾಪುರ.." ನನಸು" ನಂ.22 . ಚೈತನ್ಯ ಬಡಾವಣೆ. 8 ನೇ ಹಂತ. ಜೆ.ಪಿ. ನಗರ. ಬೆಂಗಳೂರು..560076.
Phone: 9448727327

Synopsys

ಅಕ್ಷರ ಸ್ಪಂದನ-ಭಾಗ್ಯಲಕ್ಷ್ಮಿ ಸು. ಅಮೃತಾಪುರ ಅವರು ಮಕ್ಕಳಿಗಾಗಿ ಬರೆದ ಕವಿತೆಗಳ ಸಂಕಲನ. ಲೇಖಕಿ ವೃತ್ತಿಯಿಂದ ಶಿಕ್ಷಕಿಯಾಗಿದ್ದು, ತಮ್ಮ ವೃತ್ತಿ ಅನುಭವವನ್ನು ಇಲ್ಲಿ ಮಕ್ಕಳ ಕಾವ್ಯವಾಗಿಸಿದ್ದಾರೆ. ಇವು ಖುಷಿಯಿಂದ ಹಾಡಬಹುದು.

ಉದಾ...ಢ ಅಕ್ಷರಕ್ಕೆ" ಢಂ ಢಂ ಪಟಾಕಿ ..ಹೊಡಿಬೇಡ ಧಡಾಕಿ..ಗಾಳಿಯೆಲ್ಲ ಕೆಡತ್ತೆ. ಆರೋಗ್ಯನೂ ಹಾಳಾಗತ್ತೆ" ಹೀಗೆ ಮಕ್ಕಳು ಇಷ್ಟ ಪಡುವ ನವಿಲು.,ಹೂವು, ಹಣ್ಣು. ಹಬ್ಬ. ಮೀನು. ಆನೆ ಕೋಳಿ ಮೊಲ ಬೆಕ್ಕು. ....ಎಲ್ಲವನ್ನೂ ಸರಳವಾಗಿ ಹೇಳಲಾಗಿದೆ. ಚಿತ್ರವೆಲ್ಲವನ್ನೂ ಸ್ವತಃ ಲೇಖಕರೇ ಬಿಡಿಸಿದ್ನಾದಾರೆ. 1 ರಿಂ10 ಹಾಗೂ. ಕನ್ನಡದ ಅಂಕಿ" ೦ ಇಂದ ೧೦ ರ ವರೆಗೂ ಅಂಕಿಯಿಂದ ಚಿತ್ರ ಹಾಗೂ ಕವನ ಮೂಡಿದೆ. ಉದಾ...ಎರಡು ಅಂಕಿ ಬರೆದೆ...ಹಂಸ ಮಾಡಿ ನಲಿದೆ...ಏನು ಅಂದ ಎಷ್ಟು ಚಂದ ...ಬಣ್ಣ ಹಚ್ಚಿ ಕುಣಿದೆ.. ಆರು ಬರೆಯಲು ಕಲಿಯೋ ತಮ್ಮ...ಅದರಲಿ ಆನೆ ಮೂಡಿದು ತಿಮ್ಮ...ಆನೆಗೆ ಆಡಲು ಚಂಡು ಬೇಕು...ಚಂಡನು ದೂಡಲು ಸೊಂಡಿಲೆ ಸಾಕು. ಹೀಗೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಹಾಗೆ ಎಚ್ಚರವಹಿಸಲಾಗಿದೆ.

ಮಕ್ಕಳ ಸಾಹಿತಿ ಆನಂದ ಪಾಟೀಲ ಮುನ್ನುಡಿ ಬರೆದಿದ್ದು, ಕ್ಷೇತ್ರ. ಶಿಕ್ಷ್ಣಣ ಅಧಿಕಾರಿ ಡಿ. ಆರ್. ಅಮಿತ್. ಅವರು" ಹೊಸ ಆಯಾಮಕ್ಕೊಂದು ಪೂರಕ ಮಾತು" ಶೀರ್ಷಿಕೆಯೊಂದಿಗೆ ಶುಭ ಹಾರೈಸಿದ್ದಾರೆ.

About the Author

ಭಾಗ್ಯಲಕ್ಷ್ಮಿ. ಸು. ಅಮೃತಾಪುರ.
(20 August 1954)

ಭಾಗ್ಯಲಕ್ಷ್ಮಿ ಸು. ಅಮೃತಾಪುರ ನಿವೃತ್ತ ಶಿಕ್ಷಕಿ. ಮೂಲತಃ ಬೆಂಗಳೂರಿನವರು. (ಜನನ: 20-08-1954) ಅಂತ್ಯವಿರದ ಹಾಡು..( ಕವನಗಳು) ಮಿಲನ.( ಕವನಗಳು) ಅಮೃತಸಿಂಚನ. ( ದಿ. ಸು. ಅಮೃತಾಪುರ ಅವರ ಲೇಖನಗಳು..) ಸಂಪಾದಿತ ಕೃತಿ ಅಕ್ಷರ ಸ್ಪಂದನ...ಅಕ್ಷರಕ್ಕೊಂದು ಚಿತ್ರ. ಚಿತ್ರಕ್ಕೊಂದು ಕವನ.( ಅಕ್ಷರ ಕಲಿಕೆಗೆ ಸುಲಭ ಮಾರ್ಗ) ನನ್ನ ಪುಟ್ಟ ಗೊಂಬೆ(ಮಕ್ಕಳ ಕವನಗಳು) ಪ್ರಶಸ್ತಿಗಳು:  2002 ರಲ್ಲಿ ದಾವಣಗೆರೆ ಜಿಲ್ಲಾ ಅತ್ಯುತ್ತಮ ಶಿಕ್ಷಕಿ,  2011 ರಲ್ಲಿ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ., 2015ರಲ್ಲಿ  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ದಾವಣಗೆರೆ ನಗರಸಭೆ. ಬೇಂದ್ರೆ ಸಾಹಿತ್ಯ ಪ್ರಶಸ್ತಿ .ಮುಂಬೈ ...

READ MORE

Related Books