ಉಂಡಾಡಿ ಗುಂಡ

Author : ಸಮುದ್ರವಳ್ಳಿ ವಾಸು

Pages 72

₹ 80.00




Published by: ಯದುನಂದನ ಪ್ರಕಾಶನ
Address: 1, ನೆಲಮಹಡಿ, ಓಬಳಾಪುರ ಅಂಚೆ, ಬಾಗೂರು ಹೋಬಳಿ, ಬಿ.ಹೊನ್ನೇಹಳ್ಳಿ ಗ್ರಾಮ, ಚನ್ನರಾಯಪಟ್ಟಣ ತಾಲ್ಲೂಕು -573111
Phone: 9449311298

Synopsys

ಲೇಖಕ ಸಮುದ್ರವಳ್ಳಿ ವಾಸು ಅವರ ಮಕ್ಕಳ ಕವನಗಳ ಸಂಕಲನ ‘ಉಂಡಾಡಿ ಗುಂಡ ’. ಈ ಸಂಕಲನದಲ್ಲಿ 35 ಮಕ್ಕಳ ಕವನಗಳಿವೆ. ಸಾಹಿತಿ ಎಂ.ಡಿ.ಚಂದ್ರೇಗೌಡನಾರಮ್ನಳ್ಳಿ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಹಣ್ಣುಗಳನು ನಾವು ತಿನ್ನೋಣ, ನಮ್ಮ ಮನೆಯ ಪಾಪು, ಗಿರೀಶ್ ಕಾರ್ನಾಡ್, ಕುವೆಂಪು ನಮನ, ಕಳ್ಳಬೆಕ್ಕು, ಪೋಲೀಸಣ್ಣ, ಜ್ಞಾನದ ಅರಿಯಣ್ಣ, ಬೇಂದ್ರೆತಾತ, ಪರೀಕ್ಷೆ ನಮಗೆ ಯಾಕಮ್ಮ? ಹೀಗೆ ಅನೇಕ ಕವಿತೆಗಳಿವೆ.

About the Author

ಸಮುದ್ರವಳ್ಳಿ ವಾಸು
(10 July 1982)

ಸಮುದ್ರವಳ್ಳಿ ವಾಸು ಅವರು ಮೂಲತಃ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ವಾಟೆಹೊಳೆ ಬಳಿಯ ಸಮುದ್ರವಳ್ಳಿಯವರು. ತಂದೆ ಕೃಷ್ಣಗೌಡ, ತಾಯಿ ಕಮಲಮ್ಮ. ಪಿಯುಸಿವರೆಗೆ ಓದು. ವಿದ್ಯುತ್ ಇಲಾಖೆಯಲ್ಲಿ ವೃತ್ತಿ ಪ್ರಾರಂಭಿಸಿ, ಸದ್ಯ, ಕೆ.ಹೊಸಕೋಟೆ ವಿದ್ಯಾತ್ ಇಲಾಖೆಯಲ್ಲಿ ಲೈನ್ ಮ್ಯಾನ್ ಆಗಿ  (ಮಾರ್ಗದಾಳು) ಕೆಲಸ ಮಾಡುತ್ತಿದ್ದಾರೆ. ಲೇಖನ, ಕಥೆ, ನಾಟಕ, ಕವಿತೆ, ವಿಮರ್ಶೆ, ಚುಟುಕು ಇತ್ಯಾದಿ  ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ.  ಕೃತಿಗಳು: ಸಿಹಿ ಮುತ್ತು (ಚುಟುಕು ಸಂಕಲನ), 'ಯಡವಟ್ಟು ವಾಸು (ಹಾಸ್ಯ ಸಂಕಲನ), ಮಕ್ಕಳ ಕಿರು ನಾಟಕಗಳು (ನಾಟಕ), ಹುಚ್ಚುಡ್ಡಿ (ಕಥಾ ಸಂಕಲನ), ಢಣ ಢಣ ...

READ MORE

Related Books