ಬೊಂಬಾಯಿ ಮಿಠಾಯಿ

Author : ವಿಶಾಲಾ ಆರಾಧ್ಯ

Pages 56

₹ 60.00




Year of Publication: 2019
Published by: ಅಲ್ಲಮ ಪ್ರಕಾಶನ
Address: ಬೆಂಗಳೂರು- 560099
Phone: 9886464711

Synopsys

‘ಬೊಂಬಾಯಿ ಮಿಠಾಯಿ’ ಕವಿ, ಕತೆಗಾರ್ತಿ ವಿಶಾಲಾ ಆರಾಧ್ಯ ಅವರು ರಚಿಸಿರುವ ಮಕ್ಕಳ ಕವಿತೆಗಳೆಗಳ ಸಂಕಲನ. ಈ ಕೃತಿಗೆ ಡಾ. ಬೈರಮಂಗಲ ರಾಮೇಗೌಡ ಅವರು ಬೆನ್ನುಡಿ ಬರೆದು ‘ಸರಳ ಪ್ರಾಸ ಮತ್ತು ಲಯಗಳಿಂದ ಕೂಡಿದ ಮಾತುಗಳನ್ನು ಮಕ್ಕಳು ಬೆರಗಿನಿಂದ ಆಲಿಸುವುದು, ಅಂಥವುಗಳನ್ನು ಅನುಕರಣೆ ಮಾಡುವುದರಲ್ಲಿ ಸಂತೋಷವನ್ನು ಅನುಭವಿಸುವುದು, ಕಾವ್ಯಮಯವಾದ ಸಾಲುಗಳನ್ನು ಮಕ್ಕಳ ಬಹುಕಾಲದವರೆಗೆ ನೆನಪಿನಲ್ಲಿ ಉಳಿಸಿಕೊಳ್ಳುವುದು. ಇವೆಲ್ಲಾ ಮಕ್ಕಳ ಪದ್ಯಗಳನ್ನು ಬರೆಯಲು ವಿಶಾಲಾ ಅರಿಗೆ ಪ್ರೇರಣೆ ಒದಗಿಸಿರಬಹುದು. ಈ ಸಂಕಲನದ ಎಲ್ಲಾ ಪದ್ಯಗಳು ಶೀರ್ಘಿಕೆಯಂತೆ ಸವಿಯಾಗಿ ಕರಗುವ ಗುಣವನ್ನು ಹೊಂದಿರುವುದರಿಂದ ಮಕ್ಕಳನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ. ಈ ಸಂಕಲನದಲ್ಲಿ ಮುಂಜಾವು, ಈ ನಾಡು ನಮ್ಮದು, ಸುಮ ಬಾಲೆ, ನಮ್ಮ ಹಡೆದವ್ವ, ಆಶಾವಾದ, ನಾವು ಅಚಲರು, ಜ್ಞಾನಗಂಗಾ, ಗಿಳಿವಿಂಡು, ಕೋಗಿಲೆ, ತಾರೆಗಳ ತಾರೆ, ಪ್ರೀತಿಯ ಶಾಲೆ, ಟಾಮಿ ಮತ್ತು ನಾನು, ನನ್ನ ಹಕ್ಕಿ, ಮಿನುಗು ತಾರೆ, ನಾವು ಗೆಳೆಯರು, ಬುದ್ಧಿವಂತ ನರಿ(ಕಥಗವನ), ಚಿಗರೆ ಮರಿ, ರಜೆಯ ಮಜಾ, ನನ್ನಮ್ಮ, ಸಣ್ಣಿರುವೆ, ಪಾತರಗಿತ್ತಿ, ಅಆಇಈ ಅಕ್ಷರಮಾಲೆ, ನಾನು ಮತ್ತು ಜಿಮ್ಮಿ, ಅಮ್ಮನ ಸೀರೆ ಆಕಾಶ, ಬೊಂಬಾಯಿ ಮಿಠಾಯಿ, ಸುಳಿಗಾಳಿ, ಶಾಲೆ ಶುರು, ನನ್ನ ಪುಸ್ತಕ ಪ್ರೀತಿ, ತರಕಾರಿ ಅರಿ, ವಿನಂತಿ, ತಂದೆ-ತಾಯಿ ದೇವರು, ವರ್ಣಮಾಲೆ, ಪ್ರವಾಸ, ಮಗು-ನಗು, ಕ್ಕೊ ಕ್ಕೊ ಕೋಳಿ, ಕುಂಟುಬಿಲ್ಲೆ, ರಾಷ್ಟ್ರಪ್ರೇಮ, ನನ್ನ ನೆರಳು, ಅಮ್ಮನಿಗಿಷ್ಟ, ಹಾಗೂ ಈ ನಾಡು ಎಂಬ 40 ಕವನಗಳು ಸಂಕಲನಗೊಂಡಿವೆ.

About the Author

ವಿಶಾಲಾ ಆರಾಧ್ಯ

ಕವಯತ್ರಿ ವಿಶಾಲಾ ಆರಾಧ್ಯ ಅವರು ಬೆಂಗಳೂರು ಜಿ. ಆನೇಕಲ್ ತಾಲ್ಲೂಕಿನ ರಾಜಾಪುರದವರು. ಎಂ.ಎ. ಕನ್ನಡ ಸ್ನಾತಕೋತ್ತರ ಪದವೀಧರರು. ಶಿಕ್ಷಕ ತರಬೇತಿ ಪೂರ್ಣಗೊಳಿಸಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಭ್ಯಾಸಿಗಳು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ತಮ್ಮ ಉತ್ತಮ ಸೇವೆಯಿಂದಾಗಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಶಿಕ್ಷಕ ರತ್ನ ಪ್ರಶಸ್ತಿ, ಕನ್ನಡ ನಿಧಿ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ, ಆದರ್ಶ ಅಧ್ಯಾಪಕಿ ಪ್ರಶಸ್ತಿ, ಆದರ್ಶ ಮಹಿಳಾ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ಕವನ ಕತೆಗಳನ್ನು ಬರೆವ ಅವರು ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ. ಮಕ್ಕಳಿಗಾಗಿ ...

READ MORE

Related Books