ಪುಟ್ಟಗೌರಿ

Author : ಜಯಲಕ್ಷ್ಮಿ ಎನ್.ಎಸ್ ಕೋಳಗುಂದ

Pages 78

₹ 80.00




Year of Publication: 2020
Published by: ಗೋಮಿನಿ ಪ್ರಕಾಶನ
Address: ಶ್ರೀ ವೀರಭದ್ರ ಸ್ವಾಮಿ ನಿಲಯ, 1ನೇ ಮುಖ್ಯರಸ್ತೆ,3ನೇ ಅಡ್ಡರಸ್ತೆ, ವಿಶ್ವಣ್ಣ ಲೇಔಟ್, ಶಾಂತಿನಗರ, ತುಮಕೂರು-572102
Phone: 9986692342

Synopsys

‘ಪುಟ್ಟಗೌರಿ’ ಲೇಖಕಿ ಜಯಲಕ್ಷ್ಮೀ ಎನ್.ಎಸ್. ಕೋಳಗುಂದ ಅವರು ರಚಿಸಿರುವ ಮಕ್ಕಳ ಕವಿತೆಗಳ ಸಂಕಲನ. ಲೇಖಕ ನಾ. ದಾಮೋದರ ಶೆಟ್ಟಿ ಅವರು ಮುನ್ನುಡಿ ಬರೆದು. ‘ಮಕ್ಕಳ ಸಾಹಿತ್ಯ ರಚನೆ ಮಾಡುವಾಗ ಮಕ್ಕಳ ಜೊತೆಗಿನ ನಿರಂತರ ಒಡನಾಟ, ಅವರು ಬಲುಬೇಗ ಗ್ರಹಿಸಬಲ್ಲ ಪದಗುಚ್ಛಗಳ ಅರಿವು, ಅವರ ಮನಸ್ಸಿನ ಆಳ-ಅಗಲದ ಜ್ಞಾನ ಇತ್ಯಾದಿ ಪರಿಜ್ಞಾನ ಕವಿಯಾದವರಿಗೆ ದಟ್ಟವಾಗಿರಬೇಕು. ಮಕ್ಕಳ ಬಗೆಗೆ ತೀವ್ರತಮ ಕುತೂಹಲವೂ ಇರಬೇಕು. ಅವರನ್ನು ಬಲುಬೇಗ ನಾಟಬಲ್ಲ ಸರಳ ಪದಕೋಶದ ಗಹನ ಅರಿವಿರಬೇಕು. ಇವು ಯಾವುದರಿಂದ ಹೊರತಾದರೂ ಮಕ್ಕಳ ಕವನ ರಚನೆ ಕಷ್ಟಕರ’ ಎನ್ನುತ್ತಾರೆ.

‘ಜಯಲಕ್ಷ್ಮೀ ಎನ್.ಎಸ್. ಕೋಳಗುಂದ ಅವರು ಮಕ್ಕಳ ಶಾಲಾ ಶಿಕ್ಷಕಿ. ಕವಿ ಹೃದಯವುಳ್ಳವರೂ ಆಗಿರುವುದರಿಂದ ಮಕ್ಕಳ ಮನಸ್ಸನ್ನು ಅರಿಯುವುದು ಅವರಿಗೆ ಸಾಧ್ಯವಾಗಿದೆ. ‘ತಾಯೊಡಲ ತಲ್ಲಣ’ ಎಂಬ ಕವನ ಸಂಕಲನದ ಮೂಲಕ ಕವಯತ್ರಿಯಾಗಿ ಸಮಾಜಮುಖಿಯಾದ ಜಯಲಕ್ಷ್ಮಿಯವರು, ಈ ಕೃತಿಯ ಮೂಲಕ ಮಕ್ಕಳ ಕವಿತೆಗಳಲ್ಲೂ ಪ್ರಯೋಗ ಮಾಡಿದ್ದಾರೆ, ಮಕ್ಕಳ ಕವಿತೆಗಳೆಂಬ ವಿಶಾಲ ತಳಹದಿಯ ಮೇಲೆ ದೇಶ ಭಕ್ತಿಗೀತೆಗಳನ್ನು, ಭಕ್ತಿಗೀತೆಗಳನ್ನು ಕೂಡಾ ಪೋಣಿಸಿ ಕೊಟ್ಟಿದ್ದಾರೆ. ಹೆಚ್ಚಿನ ಕವಿತೆಗಳೂ ಮಕ್ಕಳ ಮಟ್ಟಕ್ಕೆ ಏರಿವೆ ಎಂಬುದು ಗಮನಾರ್ಹ. ಮೇಲ್ನೋಟಕ್ಕೆ ಗೋಚರಿಸುವ ಸಂಗತಿಯೆಂದರೆ ಇಲ್ಲಿನ ಪ್ರತಿಕವಿತೆಯೂ ಕಂಠಮೂಲಿ. ಹಾಡುವುದಕ್ಕೆಅನುಯೋಜ್ಯವಾಗುವ ದಾಟಿಗಳಲ್ಲಿ ರೂಪು ಪಡೆದಿವೆ ಎಂದೂ ಲೇಖಕ ದಾಮೋದರ ಶೆಟ್ಟಿ ಪ್ರಶಂಸಿಸಿದ್ದಾರೆ..

About the Author

ಜಯಲಕ್ಷ್ಮಿ ಎನ್.ಎಸ್ ಕೋಳಗುಂದ

ಲೇಖಕಿ ಜಯಲಕ್ಷ್ಮಿ ಎನ್.ಎಸ್ ಕೋಳಗುಂದ ಅವರು ಮೂಲತಃ ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಕೋಳಗುಂದ ಗ್ರಾಮದವರು. 1979 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಜನಿಸಿದ ಅವರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ನಿಡಘಟ್ಟದಲ್ಲಿ ಪೂರೈಸಿದರು. ತಂದೆ- ಶಂಕರಪ್ಪ, ತಾಯಿ- ಸುಶೀಲಮ್ಮ. ಅರಸೀಕೆರೆಯ ಶ್ರೀ ಸಿದ್ದೇಶ್ವರ ಪ. ಪೂ ಕಾಲೇಜಿನಲ್ಲಿ ಪ.ಪೂ. ಶಿಕ್ಷಣ ಪಡೆದು, ಮಂಗಳೂರಿನ ಕಪಿತಾನಿಯೋ ವಿದ್ಯಾ ಸಂಸ್ಥೆಯಲ್ಲಿ ವೃತ್ತಿ ಶಿಕ್ಷಣ ಪಡೆದರು. ನಂತರ 2002ರ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು. 2012-13ನೇ ಸಾಲಿನ ...

READ MORE

Related Books