ಚೆಲುವ ಚಿಣ್ಣರು

Author : ಶಂಕರದೇವರು ಹಿರೇಮಠ

Pages 72

₹ 100.00




Year of Publication: 2018
Published by: ಶ್ರೀ ಶಾರದಾ ಪ್ರಕಾಶನ
Address: ಸಿಂಧನೂರು, ತಾ.ಸಿಂಧನೂರು, ರಾಯಚೂರು ಜಿಲ್ಲೆ

Synopsys

ಲೇಖಕ ಶಂಕರದೇವರು ಹಿರೇಮಠ ಅವರ ಮಕ್ಕಳ ಕವನಗಳ ಸಂಗ್ರಹ ಚೆಲುವ ಚಿಣ್ಣರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಚ.ನ. ಅಶೋಕ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಶ್ರೀ ಶಂಕರದೇವರು ಹಿರೇಮಠ ಸೃಜನಶೀಲ ಬರಹಗಾರರು, ಪರಿಸರ ಪ್ರೇಮಿಗಳು, ಬಹುಮುಖ ಪ್ರತಿಭೆಯುಳ್ಳ ಹಸನ್ಮುಖಿ ಶ್ರೀ ಶಂಕರದೇವರು ಹಿರೇಮಠ ಸಾಹಿತ್ಯ ಕ್ಷೇತ್ರದಲ್ಲಿ ಕಿರಿಯ ವಯಸ್ಸಿನಲ್ಲೇ ಹಿರಿಯ ಅನುಭವವನ್ನು ಕಂಡವರು. ಸಾಹಿತ್ಯದ ಒಡನಾಟವನ್ನು ಬಾಲ್ಯದಿಂದಲೇ ಬೆಸೆದುಕೊಂಡವರು, ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡುವುದರ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಸಾಧನೆ ತೋರಿದ್ದಾರೆ. ಇವರು ರಾಯಚೂರು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದು ಸಾಹಿತ್ಯ ರಚನೆಯ ಜೊತೆಗೆ ಸಂಘಟನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸಕ್ರಿಯವಾಗಿ ಮಕ್ಕಳ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ನಡೆಸುತ್ತಿದ್ದಾರೆ. ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದು ನೂರಾರು ಮುಗ್ಧ ಮನಸ್ಸುಗಳಂಗಳದಲ್ಲಿ ಸಾಹಿತ್ಯ ಸಿಂಚನವನ್ನು ಮೂಡಿಸುವ ಕೈಂಕರ್ಯದಲ್ಲಿ ಹೊರತರುತ್ತಿರುವ 'ಚೆಲುವ ಚಿಣ್ಣರು' ಕವನ ಸಂಕಲನವು ಮಕ್ಕಳ ಹಾಡಾಗಿದ್ದು ಮಕ್ಕಳ ಮುಗ್ಧ ಮನಸ್ಸಿನ ಬಣ್ಣಬಣ್ಣದ ಚಿತ್ತಾರದ ಭಾವಾಂತರಂಗವನ್ನು ಬಿಚ್ಚಿಡುತ್ತವೆ. ಇಲ್ಲಿ ಶ್ರೀಯುತರೆ ಮಕ್ಕಳಾಗಿ ರಚಿಸಿದ ಪದ್ಯದ ಪ್ರತಿಯೊಂದು ಪದಗುಚ್ಛಗಳಲ್ಲಿಯೂ ಸ್ವಚ್ಛಂದತೆಯನ್ನು ಕಾಯ್ದುಕೊ೦ಡ೦ತಿದೆ.ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯ ರಚನೆ ಅತೀ ವಿರಳ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಶಂಕರದೇವರು ಹಿರೇಮಠರವರಿಂದ ರಚಿತವಾಗಿರುವ ಈ ಮಕ್ಕಳ ಸಾಹಿತ್ಯ ಕರುನಾಡ ಚಂದದ ಚಿಣ್ಣರ ಮನಸೂರೆಗೊಳ್ಳುವುದು ಖಂಡಿತ, ಮುಂದೆಯೂ ಹೆಚ್ಚು ಹೆಚ್ಚು ಮಕ್ಕಳ ಸಾಹಿತ್ಯ ರಚಿತವಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

About the Author

ಶಂಕರದೇವರು ಹಿರೇಮಠ

ಶಂಕರದೇವರು ಹಿರೇಮಠ ಅವರು ಜನಿಸಿದ್ದು 1985ರಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಇವರ ತಂದೆ ಕಂಬಸಯ್ಯ ಸ್ವಾಮಿ ಹಿರೇಮಠ ಮತ್ತು ತಾಯಿ ಶ್ರೀಮತಿ ಗಿರಿಜಾದೇವಿ ಹಿರೇಮಠ, ಶಂಕರದೇವರು ಹಿರೇಮಠ ಅವರು 14 ವರ್ಷದಿಂದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆಯವರು ಭಾಮಿನಿಷಟ್ನದಿಯಲ್ಲಿ ಪುರಾಣಗಳು ಸೇರಿದಂತೆ 16 ಸಾಹಿತ್ಯ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯಸೇವೆಯಲ್ಲಿ ತೊಡಗಿದ್ದಾರೆ. ತಾಯಿಯವರು ಶ್ರೀ ಶಾರದಾ ಪ್ರಕಾಶನದ ಅಡಿಯಲ್ಲಿ ಸಾಹಿತ್ಯಕೃತಿಗಳನ್ನು ಮುದ್ರಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇವರ ಶ್ರೀಮತಿ ಅಶ್ವಿನಿ ವಿಹಿರೇಮಠ ಅವರು ಬಣ್ಣದ ಬುಗುರಿ ಎಂಬ ಶಿಶುಗೀತೆಗಳ ಸಂಕಲನ ಪ್ರಕಟಿಸಿ ಮಕ್ಕಳ ...

READ MORE

Related Books