ನರಿಯಣ್ಣನ ಅಂಗಡಿ

Author : ಟಿ. ಎಸ್. ನಾಗರಾಜಶೆಟ್ಟಿ

Pages 118

₹ 140.00




Year of Publication: 2022
Published by: ವಸಂತ ಪ್ರಕಾಶನ
Address: 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011

Synopsys

ಮಕ್ಕಳ ಸಾಹಿತ್ಯ ಅವಗಣನೆಗೆ ತುತ್ತಾಗಿದ್ದ ಕಾಲದಲ್ಲಿ ವಿಫುಲವಾಗಿ ಮಕ್ಕಳ ಸಾಹಿತ್ಯವನ್ನು ಸೃಷ್ಟಿಸಿ ಆ ಅರಣೆಯನ್ನು ತುಂಬಿಕೊಟ್ಟವರು ಟಿ.ಎಸ್. ನಾಗರಾಜಶೆಟ್ಟಿ, ತಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಮಕ್ಕಳ ಸಾಹಿತ್ಯ ನಿರ್ಮಿತಿಗೇ ಮುಡುಪಾಗಿಟ್ಟವರು. ಅವರು ಮಕ್ಕಳಿಗಾಗಿ ಬರೆದ ಕಥನಾತ್ಮಕ ಕವಿತೆಗಳು ಆಕರ್ಷಕವಾಗಿವೆ. ಅಂಥ ಅನೇಕ ಆಕರ್ಷಕ ಕವಿತೆಗಳು ಪ್ರಸ್ತುತ ಸಂಗ್ರಹದಲ್ಲಿವೆ. ಪ್ರಚಲಿತದಲಿದ್ದ ಅನೇಕ ಗದ್ಯ ಕಥೆಗಳನ್ನು ಸುಂದರ ಪದ್ಯರಚನೆಗಳಾಗಿ ಪರಿವರ್ತಿಸಿದ್ದು ಶ್ರೀಯುತರ ಗಮನಾರ್ಹ ಕಾಣಿಕೆ ಎಂದು ಡಾ. ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಟಿ. ಎಸ್. ನಾಗರಾಜಶೆಟ್ಟಿ
(16 April 1953)

ಕನ್ನಡದ ಪ್ರಮುಖ ಮಕ್ಕಳ ಸಾಹಿತಿಗಳಲ್ಲಿ ನಾಗರಾಜಶೆಟ್ಟರು ಒಬ್ಬರು. ಕೋಲಾರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಚಾಕವೇಲು ಗ್ರಾಮದಲ್ಲಿ ಜನಿಸಿದರು. ತಂದೆ ಶ್ರೀರಾಮಯ್ಯ, ತಾಯಿ ವನಲಕ್ಷಮ್ಮ. ಬಿ.ಎ. ಹಾಗೂ ಸ್ನಾತಕೋತ್ತರ ಪದವೀಧರರು. ನಂತರ ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತಿ ಪಡೆದರು. ಬರೆದ ಮೊದಲ ಕವನ ‘ಮೇಕೆ ಮರಿ’. ಇವರ ಮೊದಲ ಕಥಾ ಸಂಕಲನ 1979ರಲ್ಲಿ ಪ್ರಕಟಣೆ ಕಂಡ ನಂತರ ಬಾಲ್ಯ ಸಾಹಿತ್ಯದತ್ತ ಹೆಜ್ಜೆ ಹಾಕಿದರು. ‘ನವಿಲು ಗರಿ’, ‘ಸಕ್ಕರೆ ಬೊಂಬೆ’, ‘ಆಮೆ ಮತ್ತು ಹಂಸಗಳು’, ‘ಚಂದ್ರನ ಶಾಲೆ’, ‘ಮಕ್ಕಳನೆಹರುಸು’, ‘ಕೋತಿ ಮರಿ ಸೈಕಲ್ ...

READ MORE

Related Books