ಕರುನಾಡ ಸಿರಿ

Author : ಅಕಬರ ಎ ಸನದಿ

Pages 60

₹ 40.00




Year of Publication: 2006
Published by: ಇಂಚರ ಸಾಹಿತ್ಯ ಪ್ರಕಾಶನ
Address: # 4846, ಆದರ್ಶ ನಗರ, ಸಂಕೇಶ್ವರ, ಬೆಳಗಾವಿ ಜಿಲ್ಲೆ.
Phone: 8123813290

Synopsys

ಕವಿ ಅಬಕರ ಎ. ಸನದಿ ಅವರ ಮಕ್ಕಳ ಕವನ ಸಂಕಲನ “ಕರುನಾಡ ಸಿರಿ”. ಇಲ್ಲಿಯ ಕವನಗಳು ಮಕ್ಕಳ ಭಾವನಾ ಪ್ರಪಂಚವನ್ನು ಪ್ರವೇಶಿಸಿವೆ. ಮಕ್ಕಳ ಕನಸುಗಳಿಗೂ ಅರ್ಥ ತಂದುಕೊಟ್ಟಿವೆ. ನಾಡು-ನುಡಿ, ದೇಶ ಭಕ್ತಿ, ಆಕಾಶ, ಪರಿಸರ, ಸಂಸ್ಕಾರ ಮತ್ತು ಏಕ್ಯತೆ ಕುರಿತ ಕವನಗಳು ಸರಳ ಶಬ್ದಗಳಿಂದ ಕೂಡಿದ್ದು, ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ. ಮಕ್ಕಳು ಲಯಬದ್ಧವಾಗಿ ಹಾಡಿ ಕುಣಿದು ನಲಿಯುವಂತೆ ಕವನಗಳನ್ನು ಹೆಣೆಯಲಾಗಿದೆ ಎಂದು ಸ್ವತಃ ಗಾಯಕರಾಧ ಕವಿಗಳು ಹೇಳುತ್ತಾರೆ. ಅಗತ್ಯಕ್ಕೆ ಅನುಗುಣವಾಗಿ ಕವಿತೆಗಳಿಗೆ ಚಿತ್ರಗಳ ಮೆರಗು ದೊರೆತಿದೆ. 

About the Author

ಅಕಬರ ಎ ಸನದಿ

ಕವಿ ಅಕಬರ ಎ. ಸನದಿ ಅವರು ಬೆಳಗಾವಿ ತಾಲುಕಿನ ಶಿಂದೋಳ್ಳಿ ಗ್ರಾಮದವರು. ಸಂಕೇಶ್ವರದ ಹಿಂದೂಸ್ಥಾನ್‌ ಲೇಟೆಕ್ಸ್‌ ಕಾರ್ಖಾನೆಯಲ್ಲಿ ತಾಂತ್ರಿಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಕನ್ನಡ ಹೋರಾಟಗಾರರು.  ಕೃತಿಗಳು: ನಮ್ಮ ದೇಶ ಭಾರತ, ಗಿಲ್‌ ಗಿಲ್‌ ಗೆಜ್ಜೆ, ಕರುನಾಡ ಸಿರಿ, ಹಾಗೂ ಚೆಲುವ ಕನ್ನಡ ನಾಡು (ಮಕ್ಕಳ ಕವನ ಸಂಕಲನಗಳು) ನನ್ನವಳಿಗಾಗಿ (ಪ್ರೇಮದ ಮುಕ್ತಕಗಳ ಸಂಕಲನ) ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿದ್ದು,  ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ...

READ MORE

Related Books