ಪುಟಾಣಿ ಚಿಲಿಪಿಲಿ

Author : ಬಾಗೂರು ಮಾರ್ಕಾಂಡೇಯ

Pages 16

₹ 18.00




Year of Publication: 2006
Published by: ಧೃತಿ ಪ್ರಕಾಶನ
Address: 191/22, ಜಿ-2, 2ನೇ ಕ್ರಾಸ್, ವಿದ್ಯಾನಗರ, ಕುರುಬರಹಳ್ಳಿ ಮುಖ್ಯರಸ್ತೆ, ಪಿ. ಅಂಡ್ ಟಿ. ಎಂಪ್ಲಾಯಿಸ್ ಕಾಲೋನಿ, ಬೆಂಗಳೂರು-86
Phone: 9845313583

Synopsys

ಕವಿ ಬಾಗೂರು ಮಾರ್ಕಾಂಡೇಯ ಅವರು ಮಕ್ಕಳಿಗಾಗಿ ಬರೆದ ಕವನ ಸಂಕಲನ-ಪುಟಾಣಿ ಚಿಲಿಪಿಲಿ. ಮಕ್ಕಳಿಗೆ ಬಲು ಇಷ್ಟವಾಗುವ ಅನೇಕ ಕವಿತಗಳಿವೆ. ‘.. ಢಕ್ಕೆಯ ಬಡಿದರು ಢಂಢಂ ಎಂದು ಪೂಜಾ ಸಮಯದ ವೇಳೆಯ ಸಮಯದಲಿ ಭಕ್ತಿಯಲಿ ಕೈ ಮುಗಿದರು ಎಲ್ಲಾ ಪ್ರಾರ್ಥನೆ ಹಾಡಿನ ಧಾಟಿಯಲಿ ಭರವಸೆ ನೆಮ್ಮದಿ ಹರಕೆಯಲಿ....’  ಎನ್ನುವ ಸಂದೇಶವಿರುವ ಪುಟ್ಟ ಕವಿತೆ. ‘. ಮತ್ತೆ... ನೊಣವು ಹಾರಿ ಬಂತು ಹಣದ ಮೇಲೆ ಕುಳಿತು ಝಣ ಝಣಿಸಿ ಕುಣಿಯುತ್ತಿತ್ತು ಎಣಿಸಿ ಬೀಗುತ್ತಿತ್ತು...’ಎನ್ನುವ ತಾರ್ಕಿಕ ಗೀತೆಯೊಂದು ಮಕ್ಕಳು ಹಾಡಿ ನಲಿಯುವಂತಿದೆ. 

About the Author

ಬಾಗೂರು ಮಾರ್ಕಾಂಡೇಯ
(28 June 1966)

ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ,  ಚೈತ್ರ ಚೆಲುವು, ಸುವರ್ಣಪುತ್ಥಳಿ,  ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...

READ MORE

Related Books