ಬಕಾಸುರನ ಹೊಟ್ಟೆ

Author : ಸಿ.ಎಂ.ಗೋವಿಂದರೆಡ್ಡಿ

Pages 103

₹ 90.00




Year of Publication: 2003
Published by: ಅಮರಾವತಿ ಪ್ರಕಾಶನ
Address: ಮಾಲೂರು
Phone: 9448587027

Synopsys

ಪ್ರಸ್ತತ ‘ಬಕಾಸುರನ ಹೊಟ್ಟೆ’ ನನ್ನ ಐದನೆಯ ಕವನ ಸಂಕಲನ. ಮಕ್ಕಳಿಗಾಗಿ ಪದ್ಯ ಬರೆಯುವುದರೆಂದರೆ ನನಗೆ ಬಹಳ ಇಷ್ಟ. ಅಧ್ಯಾಪಕನಾದ ನನ್ನ ಎದೆಯಾಳದಲ್ಲಿ ಸಹಜವಾಗಿ ಮೂಡಿಬರುವ ಕವಿತೆಗಳು ಪದ್ಯಗಳಾಗಿ ಮೂಡಿಬರುತ್ತವೆ. ಕಳೆದ ನಾಲ್ಕು ಸಂಕಲನಗಳಾದ ‘ಬಣ್ಣದ ಚಿಟ್ಟೆ’, ‘ಮಕ್ಕಳ ಮಂದಾರ’, ‘ಜಂಗಮ ಜೋಗಿ’, ‘ಕಂದನ ಕವಿತೆ’ಗಳಿಗಿಂತ ಭಿನ್ನವಾಗಿರಲೆಂದು ಈ ಸಂಕಲನಕ್ಕೆ ಹೆಚ್ಚಾಗಿ ಕಥನ ಕವನಗಳನ್ನು ಸರಳವಾದ ಪದ್ಯಗಳನ್ನಾಗಿ ಮಾಡಿ ತಮ್ಮ ಮುಂದಿಟ್ಟಿದ್ದೇನೆ. ಇನ್ನಷ್ಟು ಈ ಬಗೆಯ ಪದ್ಯಗಳು ಮುಂದಿನ ‘ ಪದ್ಯ ಹೇಳುವ ಮರ’ ಸಂಕಲನದಲ್ಲಿ ಅಳವಡಿಸಲಿದ್ದೇನೆ. ‘ಕವಿತೆಯು ಮಕ್ಕಳನ್ನು ತಲುಪುವುದರೊಂದಿಗೆ ಅವರ ಮನೋವಿಕಾಸಕ್ಕೆ ಕಾರಣವಾಗಬೇಕು’ ಎಂಬ ಆಶಯದೊಂದಿಗೆ ಪ್ರಕಟಿಸಿರುವ ಈ ಕವನ ಸಂಕಲನ ಮಕ್ಕಳಿಗಲ್ಲದೆ ಹಿರಿಯರಿಗೂ ಹಿತವಾಗುವುದೆಂದು ಭಾವಿಸಿದ್ದೇನೆ.ಇದನ್ನು ಹೇಗೆ ಸ್ವೀಕರಿಸುತ್ತೀರೋ ಅದು ನಿಮಗೆ ಬಿಟ್ಟಿದ್ದು.ಏಕೆಂದರೆ ಬರೆದಾದ ಮೇಲೆ ಅದು ನನ್ನದಲ್ಲ, ನಿಮ್ಮದು ಮತ್ತು ಸಮುದಾಯದ್ದು. ನನ್ನ ಕವಿತೆಗಳನ್ನು ಓದಿ ಖುಷಿ ಪಡುವ ಕನ್ನಡದ ಕಂದಮ್ಮಗಳಿಗೆ ಹಾಗೂ ಅವುಗಳನ್ನು ಮಕ್ಕಳಿಗೆ ಕೊಡಿಸಿ ಓದಲು ಪ್ರೇರೇಪಿಸುತ್ತಿರುವ ತಂದೆ ತಾಯಿಯರಿಗೆ ನನ್ನ ಮೊದಲ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Related Books