ಚಿಣ್ಣರ ಚೈತ್ರ

Author : ಬಾಪು ಗ. ಖಾಡೆ

Pages 62

₹ 80.00




Year of Publication: 2020
Published by: ರನ್ನ ಸಾಹಿತ್ಯ ಬಳಗ
Address: ಮುಧೋಳ, ಜಿಲ್ಲೆ: ಬಾಗಲಕೋಟ

Synopsys

‘ಚಿಣ್ಣರ ಚೈತ್ರ’ ಲೇಖಕ ಬಾಪು ಗ. ಖಾಡೆ ಅವರು ಬರೆದ ಮಕ್ಕಳ ಕವಿತೆಗಳು. ಈ ಕೃತಿಗೆ ಹಿರಿಯ ಸಾಹಿತಿಗಲಾದ ಡಾ. ಆನಂದ. ಪಾಟೀಲ ಮತ್ತು ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯಲ್ಲಿ 32 ಪದ್ಯಗಳಿವೆ. ಛಂದೋಬದ್ಧವಾದ, ನವುರಾದ, ಕಲ್ಪಕತೆಯ, ಹಾಡಬಹುದಾದ ಬಾಪು ಅವರ ಕವಿತೆಗಳು ನನಗೆ ಇಷ್ಟವಾಗಿವೆ’  ಎನ್ನುತ್ತಾರೆ.

ಬಾಪು ಅವರ ಕವಿತೆಗಳು ಕಟೆದಿಟ್ಟ ಸುಂದರ ಶಿಲ್ಪಗಳಂತಿವೆ. ಲಯ ಶುದ್ಧವಿಲ್ಲದ ಒಂದೇ ಪದ್ಯವನ್ನು ಅವರು ಬರೆದಿಲ್ಲ. ಕೆಲವು ಪದ್ಯಗಳಲ್ಲಿ ಕಾವ್ಯದ ಮಿಂಚಿನ ಹೊಳವುಗಳಿವೆ. ವಸ್ತು ವೈವಿಧ್ಯ ಕೂಡಾ ಮೆಚ್ಚಬೇಕಾದ್ದು. ಅವರ ಪದ್ಯಗಳಲ್ಲಿ ಕಿವಿ ಮತ್ತು ಸ್ಪರ್ಶದ ಗ್ರಹಿಕೆಗಳು ಬಹು ಸುಂದರವಾಗಿ ಮೂರ್ತಗೊಂಡಿವೆ. ಕನ್ನಡ ಮಕ್ಕಳ ಸಾಹಿತ್ಯದ ಬೆಳೆಗೆ ಬಾಪು ಅವರದ್ದು ಚೆಲುವಾದ ಅರ್ಥ ಸಂಪನ್ನ ಕೊಡುಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

About the Author

ಬಾಪು ಗ. ಖಾಡೆ
(28 December 1972)

ಲೇಖಕ ಬಾಪು ಗ. ಖಾಡೆ ಅವರು ಮೂಲತಃ ಬಾಗಲಕೋಟ ಜಿಲ್ಲೆ ಜಮಖಂಡಿ ತಾಲೂಕಿನ ತೊದಲಬಾಗಿಯವರು. ಸದ್ಯ ಮುಧೋಳದಲ್ಲಿ ನೆಲೆಸಿದ್ದು, ಮಕ್ಕಳ ಸಾಹಿತ್ಯ ರಚನೆಯಲ್ಲಿ  ಆಸಕ್ತಿ. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದು, ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಕೆಲವು ಕಾಲ ಉಪನ್ಯಾಸಕರಾಗಿದ್ದರು. ಅವರ ಕವಿತೆಗಳು ಆಕಾಶವಾಣಿ ಧಾರವಾಡ, ಬೆಂಗಳೂರು ನಿಲಯಗಳಿಂದ ಪ್ರಸಾರವಾಗಿವೆ. 2017ರಲ್ಲಿ ಧಾರವಾಡದ ಚಿಲಿಪಿಲಿ ಪ್ರಕಾಶನದ ಮೂಲಕ ‘ಮಕ್ಕಳ ಜಾತ್ರೆ ’(ಕವಿತಾ ಸಂಕಲನ) ಹಾಗೂ 2020ರಲ್ಲಿ ‘ಚಿಣ್ಣರ ಚೈತ್ರ ’ (ಮಕ್ಕಳ ಕವಿತಾ ಸಂಕಲನ) ಪ್ರಕಟವಾಗಿದೆ. ‘ಮಕ್ಕಳ ಜಾತ್ರೆ’ಗೆ 2017ನೇ ಸಾಲಿನ ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ ಲಭಿಸಿದೆ.  ...

READ MORE

Related Books