ಮಂಗಟ್ಟೆಯ ತೋಟದಲ್ಲಿ...!

Author : ಮನೋಹರ ಜನ್ನು

Pages 112

₹ 100.00




Year of Publication: 2020
Published by: ಶ್ರಿ ಗಣೇಶ ಪ್ರಕಾಶನ
Address: # IB-785,  ಅಝಾದ ನಗರ, ಶಿವಾಜಿಗಲ್ಲಿ, ದಾಂಡೇಲಿ-581325 ಜಿಲ್ಲೆ ಉತ್ತರ ಕನ್ನಡ
Phone: 9036149971

Synopsys

ಮಂಗಟ್ಟೆಯ ತೋಟದಲ್ಲಿ -ಮನೋಹರ ಜನ್ನು ಅವರ ಕವಿತೆಗಳ ಸಂಕಲನ. ವಿಶೇಷವಾಗಿ ಪ್ರಕೃತಿ, ಪರಿಸರ ಪ್ರೀತಿ, ನೀತಿ ಇತ್ಯಾದಿ ಅಂಶಗಳನ್ನು ಒಳಗೊಂಡಿರುವ  ಒಟ್ಟು 69 ಮಕ್ಕಳ ಕವಿತೆಗಳಿವೆ. ಮಕ್ಕಳ ಹನಿಗಳು, ಚುಟುಕುಗಳು ಸರಳ ಸುಮನದ ಭಾಷೆಯಲ್ಲಿ ಪರಿಸರ ಮತ್ತು ಜೀವ ಜಂತುಗಳ ಪರಿಚಯ ಮತ್ತು ಅವುಗಳ ಜೀವನ ಕುರಿತು ಮನೋಜ್ಞ ಕವನಗಳು ಗಮನ ಸೆಳೆಯುತ್ತವೆ. ಹಸಿರು ನೀರು ಮಾನವನ ಬದುಕಿಗೆ ಅದರಿಂದಾಗುವ ಲಾಭ, ಅರಣ್ಯ ಉಳಿಸಬೇಕಾದ ಅನಿವಾರ್ಯತೆಯನ್ನು ಮಕ್ಕಳಿಗೆ ಸಲಹೆ ರೂಪದಲ್ಲಿ ಉಪದೇಶದ ರೂಪದಲ್ಲಿ ನೀತಿ ಬೋಧಕವಾಗಿ ಈ ಕವಿತೆಗಳು ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತುತ್ತವೆ. 

About the Author

ಮನೋಹರ ಜನ್ನು
(25 December 1953)

ಲೇಖಕ ಮನೋಹರ ಜನ್ನು ಅವರು ಮೂಲತಃ ಗೋಕರ್ಣ ಬಳಿಯ ಬಂಕಿಕೊಡ್ಲ ಗ್ರಾಮದವರು. ತಂದೆ ಜನಾರ್ದನ ಜನ್ನು ಹಾಗೂ ತಾಯಿ ವತ್ಸಲಾ ಜನ್ನು. 25-12-1953 ರಂದು ಜನನ. ಸ್ನಾತಕೋತ್ತರ ಪದವೀಧರರು. ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಕಾರ್ಖಾನೆಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಗಣಕಯಂತ್ರ ಬರಹಗಾರರಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತರು. ಪರಿಸರ ಹೋರಾಟಗಾರರು.  ಕೃತಿಗಳು: ಇವರ ಮಕ್ಕಳ ಕವನ ಸಂಕಲನ- ‘ಚುಕ್ಕಿ ಚಿತ್ತಾರ’. ರಾಜ್ಯ ಪ್ರಕಾಶಕ ಬರಹಗಾರ ಸಂಘದಿಂದ (2094) ಮೊದಲ ಬಹುಮಾನ ಪುರಸ್ಕಾರ ಲಭಿಸಿದೆ. ಕಾಲನ ತಂಬೂರಿ (ಕವನ ಸಂಕಲನ), ಚೈತ್ರಯಾತ್ರೆ,ಚುಟುಕುಮಾಲೆ-೧ (ಕಥಾ ಸಂಕಲನ), ಪರಿಷತ್ತಿಗೆ ಶಾಪವಾಗದಿರಿ (ವೈಚಾರಿಕ), ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನ, ಕತೆ,ಕವನಗಳು ಪ್ರಕಟವಾಗಿವೆ. ...

READ MORE

Related Books