ಗುಬ್ಬಿ ಜಂಕ್ಷನ್‌

Author : ಎಚ್. ಎಸ್. ವೆಂಕಟೇಶಮೂರ್ತಿ

Pages 106

₹ 125.00




Year of Publication: 2022
Published by: ವಸಂತ ಪ್ರಕಾಶನ
Address: 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011

Synopsys

ಗುಬ್ಬಿ ಜಂಕ್ಷನ್‌ ಡಾ. ಎಚ್‌. ಎಸ್. ವೆಂಕಟೇಶ ಮೂರ್ತಿ ಅವರ ಕವನ ಸಂಕಲನವಾಗಿದೆ. ಡಾ. ಎಚ್ಚೆಸ್ವಿ, ಮಕ್ಕಳ ಕಲ್ಪನೆಗೆ ರೆಕ್ಕೆ ಹಚ್ಚುವ, ಅವರ ಭಾವಕೋಶದಲ್ಲಿ ಬೀಡು ಬಿಡುವ ಅವರ ವೈಚಾರಿಕತೆಗೆ ಇಂಬು ಕೊಡುವ ಸಾರ್ಥಕ ರಚನೆಗಳನ್ನು ನೀಡಿದ್ದಾರೆ. ಅವರು ಮಗುವಿನ ಮುಗ್ಧ ಲೋಕವನ್ನು ಮುನ್ನೆಲೆಗೆ ತಂದು, ಆದರ ಭಾವ ಹಾಗೂ ವ್ಯಕ್ತಿಪ್ರಧಾನ ಅಂಶಗಳಿಗೆ ಮಹತ್ವ ನೀಡಿದ್ದಾರೆ. ಮಗು ಹಾಗೂ ಅದರ ಸುತ್ತಲಿನ ಪರಿಸರವನ್ನು ಕಲಾತ್ಮಕ ನೇಯ್ಗೆಯಲ್ಲಿ ಹಾಯಿಸಿ ಹಲವು ನೆಲೆಗಳು ಒಂದೇ ಕೇಂದ್ರಕ್ಕೆ ದುಡಿಯುವಂತೆ ಮಾಡಿದ್ದಾರೆ. ಎಂದು ಬಸು ಬೇವಿನಗಿಡದ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books