ಬುತ್ತಿ

Author : ಅಮರೇಶ ನುಗಡೋಣಿ

₹ 120.00




Year of Publication: 2017
Published by: ಕಾವ್ಯ ಮನೆ
Address: ಕಲಬುರ್ಗಿ
Phone: 7829464653

Synopsys

ಖ್ಯಾತ ಕಥೆಗಾರ ಅಮರೇಶ ನುಗಡೋಣಿ ಅವರ ಅನುಭವ ಕಥನ ‘ಬುತ್ತಿ’ ಬಾಲ್ಯದ ಅನುಭವ ಕಥನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಕೆ.ವಿ ನಾರಾಯಣ ಅವರು, ‘ಅಮರೇಶ್ ನೆನಪು ಮತ್ತು ಅನುಭವಗಳನ್ನು ಬುದ್ಧಿ ಮತ್ತು ತರ್ಕಗಳ ಚೌಕಟ್ಟಿಗೆ ಒಗ್ಗಿಸದೇ ಕಾಪಿಡುವುದನ್ನು ಬಲು ನಿಕಟವಾಗಿ ಬಲ್ಲೆ ಎನ್ನುತ್ತಾರೆ. ಅವರ ಈ ಚಹರೆ ಹಲವು ಬಾರಿ ಅಚ್ಚರಿ ತಂದಿದ್ದು, ಇಲ್ಲಿನ ಬರಹಗಳಲ್ಲಿ ತಮ್ಮ ಆ ಚಹರೆಯ ಬಗೆಗೆ ಅವರೇ ಎಚ್ಚರಗೊಂಡಂತೆ ತೋರುತ್ತಿದೆ. ’ ಬುತ್ತಿ’ ಎಂಬುದು ಎಂದೋ ಎಲ್ಲೋ ಮಾಡಿದ ತಿನಿಸು. ಆ ವಿಚಾರವನ್ನೇ ಇಲ್ಲಿ ಕೇಂದ್ರೀಕರಿಸಿದ್ದಾರೆ. ನೆನಪುಗಳನ್ನು ಮಂಡಿಸುವಾಗ ಇಂದಿನ ಬೇಕುಗಳಿಗೆ ತಕ್ಕಂತೆ ರೂಪಿಸಿಕೊಳ್ಳುತ್ತದೆಯೋ ಇಲ್ಲವೇ ಆ ನೆನಪುಗಳ ಬೇರುಗಳಾಗಿರುವ ಅನುಭವಗಳನ್ನು ಮತ್ತೆ ಕಟ್ಟಿಕೊಳ್ಳುವ ಇರಾದೆಯನ್ನು ಹೊಂದಿರುತ್ತದೆಯೋ ಎಂಬುದನ್ನು ಬರೆಯುವುದು ಒಂದು ಸಮಸ್ಯೆ. ಅಮರೇಶ ಇಲ್ಲಿನ ಬರಹಗಳಲ್ಲಿ ಆ ಎರಡೂ ಹಾದಿಗಳ ನಡುವೆ ಇದ್ದೇನೆ ಎಂಬ ಎಚ್ಚರವನ್ನು ತಿಳಿಸುತ್ತಾರೆ. ಈ ಬರಹದಲ್ಲಿ ಆ ದಾರಿಯು ಸಮರ್ಪಕವಾಗಿ ಕಾಣಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಅಮರೇಶ ನುಗಡೋಣಿ
(02 June 1969)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...

READ MORE

Related Books