ಮುಂಬೈ ದಾಳಿ

Author : ಡಿ.ವಿ. ಗುರುಪ್ರಸಾದ್

Pages 192

₹ 100.00




Year of Publication: 2021
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020

Synopsys

ಹಿರಿಯ ಪೊಲೀಸ್ ಅಧಿಕಾರಿ ಡಿ.ವಿ. ಗುರುಪ್ರಸಾದ್ ಅವರ ’ಮುಂಬೈ ದಾಳಿ’ ಕೃತಿಯು ಅನುಭವ ಕಥನವಾಗಿದೆ. ಈ ಕೃತಿ ಅಜ್ಮಲ್ ಕಸಬ್ ಎಂಬೊಬ್ಬ ಪಾತಕಿ ಜೀವಂತ ಸೆರೆಸಿಕ್ಕ ರಹಸ್ಯ ಕಾರ್ಯಚರಣೆ ಕುರಿತು ವಿವರಿಸುತ್ತದೆ. ಪಾಕಿಸ್ತಾನವು ಮುಂಬೈ ನಗರದ ಮೇಲೆ ದಾಳಿ ಮಾಡಲು ತೆಗೆದುಕೊಂಡ ಕ್ರಮಗಳನ್ನು ಎಳೆಎಳೆಯಾಗಿ ಅಜ್ಮಲ್ ಬಿಚ್ಚಿಡುವ ಮಾತುಗಳು ಇಲ್ಲಿ ರೋಚಕವೆನ್ನಿಸುತ್ತದೆ. ಅಜ್ಮಲ್ ಕಸಬ್ ಕೇವಲ 21 ವರ್ಷ ವಯಸ್ಸಿನ ಯುವಕನಾಗಿದ್ದ. ಅವನಿಗೆ ಆಮಿಷಗಳನ್ನು ತೋರಿಸಿ ಪಾಕಿಸ್ತಾನವು ಹೇಗೆ ಅವನನ್ನು ಒಬ್ಬ ಆತಂಕವಾದಿಯನ್ನಾಗಿ ಪರಿವರ್ತಿಸಿತು ಮತ್ತು ಈ ಮುಂಬೈ ದಾಳಿ ನಡೆಸಲು ಪಾಕಿಸ್ತಾನದ ಗೂಢಚಾರ ಸಂಸ್ಥೆ, ಸೈನ್ಯಾಧಿಕಾರಿಗಳು ಯಾವ ರೀತಿ ಯೋಜನೆ ಮಾಡಿದರು ಎನ್ನುವುದೇ ಇಲ್ಲಿ ವಿಶೇಷವೆನ್ನಿಸುತ್ತದೆ. ಭಾರತದ ವಿರುದ್ದ ಪಾಕ್ ಸರಕಾರ ಮತ್ತು ಇಸ್ಲಾಮ್ ಉಗ್ರಗಾಮಿಗಳು ತಮ್ಮಂಥವರನ್ನು ಸೇರಿಸಿಕೊಂಡು ತರಬೇತಿ ಕೊಡುವ ವಿಧಾನದಿಂದ ಮೊದಲಾಗಿ,ಎಲ್ಲ ಪಾತಕಿ ಕೃತ್ಯವನ್ನೂ ಬಿಚ್ಚಿ ಹೇಳಿದ ಕರಾಳ ಕಥೆಯ ಯಥಾವತ್ ವರದಿಯ ಕೃತಿ ಇದಾಗಿದೆ.

 

About the Author

ಡಿ.ವಿ. ಗುರುಪ್ರಸಾದ್

ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ.  ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...

READ MORE

Related Books