ಎಲ್ಲಿಂದಲೋ ಬಂದವರು

Author : ಭಾರತಿ ಬಿ ವಿ

Pages 164

₹ 160.00




Year of Publication: 2021
Published by: ಸಾವಣ್ಣ ಪ್ರಕಾಶನ
Address: #12, ಬೈರಸಂದ್ರ ಮುಖ್ಯ ರಸ್ತೆ, ಜಯನಗರ, 1ನೇ ಬ್ಲಾಕ್ ಪೂರ್ವ , ಬೆಂಗಳೂರು -560011
Phone: 9036312786

Synopsys

‘ಎಲ್ಲಿಂದಲೋ ಬಂದವರು’ ಕೃತಿಯು ಭಾರತಿ ಬಿ.ವಿ ಅವರ ಅನುಭವ ಕಥನವಾಗಿದೆ. ಕೃತಿಯ ಕುರಿತು ಟಿ.ಎನ್ ಸೀತಾರಾಮ್ ಅವರು, `ಈ ಪುಸ್ತಕ ಓದುತ್ತಾ ಹಲವಾರು ಘಟನೆಗಳು ನಮ್ಮನ್ನು ತಲ್ಲಣಗೊಳಿಸಿದರೆ, ಕೆಲವು ನಮ್ಮ ಮುಖದಲ್ಲೊಂದು ಮುಗುಳ್ನಗೆ ಮೂಡಿಸುತ್ತವೆ. ಜೊತೆಗೆ ಈ ಕಥಾಹಂದರದಲ್ಲಿ ನಮ್ಮ ಬದುಕಿನ ಪುಟಗಳು ತೆರೆಯುತ್ತ ಹೋಗುತ್ತವೆ ಎಂದಿದ್ದಾರೆ. ಲೇಖಕಿ ಈ ಪುಸ್ತಕದಲ್ಲಿ ತಮ್ಮ ಅನುಭವದ ಮೂಸೆಯಲಲ್ಲಿನ ವಿಚಾರಗಳನ್ನು ಬಿತ್ತುತ್ತಾ ಹೋಗುತ್ತಾರೆ. ಈ ವ್ಯವಹಾರಿಕ ಜಗತ್ತಿನಲ್ಲಿ ಇದ್ದಕ್ಕಿದ್ದಂತೆ ಯಾರೋ ಎದುರಾಗಿ ನಮಗೆ ಸಹಾಯ ಹಸ್ತ ಚಾಚುತ್ತಾರೆ, ಯಾರೋ ನಾನಿದ್ದೇನೆ ಸುಮ್ಮನಿರು ಎಂದು ಭರವಸೆ ಕೊಟ್ಟು ಬಿಡುತ್ತಾರೆ. ಯಾರೋ this too shall pass ಎನ್ನುವ ಆತ್ಮೀಯ ನುಡಿಗಳನ್ನು ಆಡಿಬಿಡುತ್ತಾರೆ. ಅದು ಮಳೆಯಾಗುವ ಮುನ್ನ ಗಂಟೆಗಟ್ಟಲೆ ಕಟ್ಟುವ ಮೋಡದಂತಲ್ಲ.. ಕಗ್ಗತ್ತಲಿನ ಹಾದಿಯಲ್ಲಿ ಒಬ್ಬೊಂಟಿ ನಡೆವಾಗ ಸುಮ್ಮನೆ ಸುಳಿದು ಮಾಯವಾಗುವ ಕೋಲ್ಮಿಂಚಿನಂತೆ. ಕಣ್ಣು ಕೋರೈಸುವ ಬೆಳಕು ನೀಡಿ ಮಾಯವಾದ ನಂತರ ಹಾದಿ ತುಸು ನಿಚ್ಛಳವಾಗಿ ನಡೆಯಲು ಸುಗಮವಾಗಿ ಬಿಡುತ್ತದೆ. ಆ ಕ್ಷಣದಲ್ಲಿ ಅವರು ಸಹಾಯ ಮಾಡುವ ಅಗತ್ಯವೇನೂ ಇರುವುದಿಲ್ಲ..ಆದರೂ ಮಾಡುತ್ತಾರೆ. ಕೇಳಿದರೇ ಕೊಡಲು ಕೈ ತಡೆಯುವವರ ಜಗತ್ತಿನಲ್ಲಿ ಇಂಥ ಅಪರೂಪದವರೂ ಎದುರಾಗುವುದು ನನ್ನನ್ನು ಯಾವತ್ತೂ ವಿಸ್ಮಯಳಾಗಿಸುತ್ತದೆ. ಹೂ ಗುಚ್ಛವನ್ನು ಒಂದು ಹೂದಾನಿಯಲ್ಲಿಟ್ಟು, ಭರ್ತಿ ನೀರು ತುಂಬಿಸಿ ಕಾಂಡದ ತುದಿ ಮಾತ್ರ ದಿನವೂ ತುಸುವೇ ಕತ್ತರಿಸುತ್ತಿದ್ದರೆ ಎಷ್ಟೋ ಕಾಲ ಹೂವು ಬಾಡದೇ ಉಳಿಯುತ್ತದೆ. ನೆನಪುಗಳೂ ಹಾಗೆಯೇ ಆಗಿದ್ದು ‘ಎಲ್ಲಿಂದಲೋ ಬಂದವರು’ ಅಂಥವರ ನೆನಪಿನ ಗುಚ್ಛದ ಕೃತಿಯಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಭಾರತಿ ಬಿ ವಿ

ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ.  ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್‌ ಕವಿತೆಗಳು', 'ಜಸ್ಟ್‌ ಮಾತ್‌ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ. ...

READ MORE

Related Books