ಅಂತರಾಳ

Author : ಸರ್ಜಾಶಂಕರ ಹರಳಿಮಠ

Pages 50

₹ 10.00




Year of Publication: 1993
Published by: ಸಹ್ಯಾದ್ರಿ ಪ್ರಕಾಶನ
Address: ತೀರ್ಥಹಳ್ಳಿ

Synopsys

‘ಅಂತರಾಳ’ ಲೇಖಕ, ಕತೆಗಾರ ಸರ್ಜಾಶಂಕರ್ ಹರಳಿಮಠ ಅವರ ಸಾಹಿತ್ಯ ಸಂಕಲನ. ವಿದ್ಯಾರ್ಥಿದೆಸೆಯಲ್ಲಿ ರಚಿಸಿದ ಈ ಕಾವ್ಯ ಸಂಕಲನಕ್ಕೆ ತುಂಗಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಜೆ.ಕೆ. ರಮೇಶ ಅವರ ಬೆನ್ನುಡಿ ಬರಹವಿದೆ. ಸಾಹಿತ್ಯದ ಫಲವತ್ತಾದ ನೆಲ ತೀರ್ಥಹಳ್ಳಿಯಲ್ಲೀಗ ಮತ್ತೊಂದು ಮೊಳಕೆಯೊಡೆದಿದೆ. ಮೊಳಕೆಯಲ್ಲೇ ಬೆಳೆಯುವ ಪೈರು ಕಾಣುತ್ತಿದೆ. ಕಿರಿಯ ಮಿತ್ರ ಸರ್ಜಾಶಂಕರ್ ವಿದ್ಯಾರ್ಥಿದೆಸೆಯಲ್ಲಿಯೇ ಅನೇಕ ಕಿರುಲೇಖನ, ವ್ಯಂಗ್ಯಚಿತ್ರಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ, ಕಥೆಗಳನ್ನು ಬಾನುಲಿಯಿಂದ ಬಿತ್ತರಿಸಿ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ ಎಂದು ರಮೇಶ ಅವರು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಸರ್ಜಾಶಂಕರ ಹರಳಿಮಠ
(04 June 1971)

ಲೇಖಕ, ಚಿಂತಕ, ಡಾ. ಸರ್ಜಾಶಂಕರ್ ಹರಳಿಮಠ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಪದವಿ ಮುಗಿಸಿ ಉದ್ಯೋಗವರಸಿ ಬೆಂಗಳೂರಿಗೆ ತೆರಳಿದರು. ಅಲ್ಲಿ ಬಹುರಾಷ್ಟ್ರೀಯ ಕಂಪನಿ ಸೇರಿದಂತೆ ಕೆಲವು ಕಂಪನಿಗಳಲ್ಲಿ ಒಂದು ದಶಕದ ಕಾಲ ಸೇವೆ ಸಲ್ಲಿಸಿದ ನಂತರ ಹುದ್ದೆಗೆ ರಾಜೀನಾಮೆ ನೀಡಿ ಊರಿಗೆ ಮರಳಿ ಶಿವಮೊಗ್ಗದಲ್ಲಿ  ಗ್ರಾಮೀಣ ಮಹಿಳೆಯರು ಉತ್ಪಾದಿಸುವ ಕೈಮಗ್ಗದ ಉಡುಪುಗಳೂ ಸೇರಿದಂತೆ ಗೃಹ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ‘ದೇಸಿ ಸಂಸ್ಖೃತಿ’ ಎಂಬ ಮಾರುಕಟ್ಟೆ ಕೇಂದ್ರವನ್ನು ಆರಂಭಿಸಿದರು. ಜತೆ ಜತೆಗೆ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಲೇ ಕುವೆಂಪು ...

READ MORE

Related Books