ಹತ್ತು ಲಕ್ಷರೂಪಾಯಿ ಜ್ಯೋತಿಷಕ್ಕೆ ಸವಾಲು

Author : ಆಗುಂಬೆ ಎಸ್. ನಟರಾಜ್‌

Pages 408

₹ 250.00




Year of Publication: 2002
Published by: ರಾಜ್‌ ವೈಚಾರಿಕ ವೇದಿಕೆ
Address: ಬೆಂಗಳೂರು

Synopsys

‘ಹತ್ತುಲಕ್ಷರೂಪಾಯಿ ಜ್ಯೋತಿಷಕ್ಕೆ ಸವಾಲು’ ಎ. ಎಸ್‌. ನಟರಾಜ್‌ ವೈಚಾರಿಕ ಬರಹಗಳಾಗಿವೆ. ಶೂನ್ಯ ಫಲಿತಾಂಶ ಕೊಡುವ ಫಲಜ್ಯೋತಿಷವು ಅವೈಜ್ಞಾನಿಕವೆಂದು ವಾದಿಸಿರುವ ವಿಚಾರವೂರಿತ ಗ್ರಂಥ. ಅಷ್ಟೇ ಅಲ್ಲ; ಜ್ಯೋತಿಷ - ಜಾತಕದ ಮೇಲೆ ಹತ್ತು ಪ್ರಶ್ನೆಗಳನು ನೀಡಿ ನಿಖರ ಆಧಾರ ಸಹಿತ ಸಾಬೀತುಪಡಿಸಿದವರಿಗೆ. ಹತ್ತು ಲಕ್ಷ ರೊಪಾಯಿಗಳ ಸವಾಲನ್ನೂ ಎಸೆದ ಹಿರಿಮೆ ಈ ಕೃತಿಗಿದೆ.

About the Author

ಆಗುಂಬೆ ಎಸ್. ನಟರಾಜ್‌
(20 November 1939)

ಲೇಖಕ ನಟರಾಜ್, 1939 ನವೆಂಬರ್‌ 20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹುಟ್ಟಿದರು. ತಂದೆ ಎ. ಎಸ್. ಭಟ್, ತಾಯಿ ಲಕ್ಷ್ಮಮ್ಮ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಬಗ್ಗೆ ಒಲವಿದ್ದು, ನಿವೃತ್ತಿಯ ನಂತರ ಈಗ ಪೂರ್ಣ ಪ್ರಮಾಣದ ಬರಹಗಾರರು. ಸದಾ ಒಂದಿಲ್ಲೊಂದು ಕಡೆ ಪ್ರವಾಸ ಅಥವಾ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾರೆ. ಅವರ ಪ್ರವಾಸಾನುಭವದ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಬಾತುಕೋಳಿ’ ಮತ್ತು ‘ಆತಂಕ’ ಎಂಬ ಎರಡು ಕಾದಂಬರಿಗಳು. ‘ಚಕ್ಕಂದ’ ಎಂಬ ಹನಿಗವನ ಸಂಕಲನ, ‘ರಸನಿಮಿಷ’ ಎಂಬ ಹಾಸ್ಯಕಥೆಗಳ ಸಂಗ್ರಹ. ‘ರಸ ವೈಚಾರಿಕತೆ’ ಎಂಬ ವೈಚಾರಿಕ ...

READ MORE

Reviews

ಹೊಸತು- 2003-ಫೆಬ್ರವರಿ

ಅಂಧಶ್ರದ್ಧೆಯ ಕೂಪವಾಗಿರುವ ಹಾಗೂ ಮುಗ್ಧ ಮನಸ್ಸುಗಳನ್ನು ವಂಚಿಸುತ್ತ ಹೊಟ್ಟೆಪಾಡು ನೋಡಿಕೊಳ್ಳುವ ದುರ್ವಿದ್ಯೆಯಾಗಿ ಜ್ಯೋತಿಷ್ಯಕ್ಕೆ ಸವಾಲು ಶೂನ್ಯ ಫಲಿತಾಂಶ ಕೊಡುವ ಫಲಜ್ಯೋತಿಷವು ಅವೈಜ್ಞಾನಿಕವೆಂದು ವಾದಿಸಿರುವ ವಿಚಾರಪೂರಿತ ಗ್ರಂಥ. ಅಷ್ಟೇ ಅಲ್ಲ ; ಜ್ಯೋತಿಷ - ಜಾತಕದ ಮೇಲೆ ಹತ್ತು ಪ್ರಶ್ನೆಗಳನ್ನು ನೀಡಿ ನಿಖರ. ಆಧಾರ ಸಹಿತ ಸಾಬೀತುಪಡಿಸಿದವರಿಗೆ ಹತ್ತು ಲಕ್ಷ ರೂಪಾಯಿಗಳ ಸವಾಲನ್ನೂ ಎಸೆದ ಹಿರಿಮೆ ಈ ಪುಸ್ತಕಕ್ಕಿದೆ. ಜ್ಯೋತಿಷಿಗಳ ಹೇಳಿಕೆಗಳನ್ನು ಸಾರಾ ಸಗಟಾಗಿ ಅಲ್ಲಗಳೆಯುತ್ತ ವೈಚಾರಿಕ ನಿಲುವನ್ನು ಪ್ರತಿಪಾದಿಸಿದೆ.

Related Books