ಮಂಗಳಮುಖಿಯರ ಸಂಗದಲ್ಲಿ…

Author : ಸಂತೋಷ್ ಕುಮಾರ ಮೆಹೆಂದಳೆ

₹ 230.00




Year of Publication: 2022
Published by: ಸ್ನೇಹ ಬುಕ್ ಹೌಸ್
Address: ಶ್ರೀ ನಗರ, ಬೆಂಗಳೂರು
Phone: 9845031335

Synopsys

ಲೇಖಕ ಸಂತೋಷಕುಮಾರ ಮೆಹೆಂದಳೆ ಅವರು ಬರೆದಿರುವ ಹಿಜಡಾ ಜಗತ್ತಿನ ಅನುಭವ ಕಥನ ಮಂಗಳಮುಖಿಯರ ಸಂಗದಲ್ಲಿ…ಲೇಖಕರು ಹೇಳುವಂತೆ ನೀವು ಗಂಡು ಅಥವಾ ಹೆಣ್ಣಾಗಿ ಹುಟ್ಟಿದ್ದರೆ, ನಿಖರ ದೇಹ ಹಾಗೂ ಮನಸ್ಥಿತಿ ಕೊಟ್ಟಿದ್ದರೆ ಈ ಜೀವನ ಪೂರ್ತಿ ನೀವು ದೇವರಿಗೆ ಕೃತಜ್ಞರಾಗಿರಲೇಬೇಕು. ಇದು ದೇವರು ಕೊಟ್ಟ ಅತಿ ದೊಡ್ಡ ಕೊಡುಗೆ.ಮಂಗಳಮುಖಿಯರ ಬದುಕು ಎಷ್ಟು ತಲ್ಲಣ, ಅಸಹನೀಯವೋ ಅದಕ್ಕಿಂತ ಭೀಕರ ದೇಹದ ಕಂಪನ ತಣಿಯದ ಭಾವ ಮತ್ತು ಮನಸ್ಸಿಗೆ ಇಲ್ಲದೆ ಅನುಭೂತಿ, ನೀರು ಕುಡಿದ ಮೇಲೆ ಆಯಾಸ ಪರಿಹಾರ ಎನ್ನಬಹುದೇ ಹೊರತಾಗಿ ವಿವರಿಸಬಲ್ಲ ಭಾಷೆ ನಮ್ಮಲ್ಲಿಲ್ಲ. ಅದೊಂದು ಅನುಭವ.ಹಾಗೆಯೇ ಕಾಮದ ಅನುಭವಕ್ಕೆ ಪಕ್ಕಾದರೆ ಅದ್ಭುತ ಅನುಭವ ಎನ್ನಬಹುದೇ ವಿನಃ ಇದ್ದಮಿತ್ಥಂ ಎಂದು ವರ್ಣಿಸಲಾರ. ಇವೆರಡಕ್ಕೂ ವಂಚಿತನಾಗಿ ಬದುಕು ಭರಿಸಬೇಕಾದ ಪರಿಸ್ಥಿತಿ. ಈ ತ್ರಿಶಂಕು ಸ್ಥಿತಿ ಯಾರಿಗೂ ಬೇಡ, ಮನಸ್ಸಿಗೆ ಹೆಣ್ಣಿನ ಹಂಬಲ, ದೇಹ ಮಾತ್ರ ಗಂಡಸಿನ ಬಿರುಸು. ಭಾವಗಳಂತೂ ಅಲ್ಲೋಲ ಕಲ್ಲೋಲ. ಇತ್ತಾಗೆ ಇದೂ ಇಲ್ಲ. ಅತ್ತಾಗೆ ಅದೂ ದಕ್ಕುತ್ತಿಲ್ಲ. ಸಮಾಜ ಎಲ್ಲಕ್ಕಿಂತ ಮೊದಲು ಅವರನ್ನು ರಸ್ತೆಗೆ ಇಳಿಸಿರುತ್ತದೆ. ಅದು ಓಜಡಾಗಳ ಜಗತ್ತು ಎಂಬುದಾಗಿ ಬೆನ್ನುಡಿಯಲ್ಲಿ ಹೇಳಲಾಗಿದೆ.

About the Author

ಸಂತೋಷ್ ಕುಮಾರ ಮೆಹೆಂದಳೆ

ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು. " ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ...

READ MORE

Related Books