ಮಾಯಿ ಕೆಂದಾಯಿ

Author : ಜಯಶ್ರೀ ದೇಶಪಾಂಡೆ

Pages 220

₹ 150.00




Published by: ಮಾಧ್ಯಮ ಅನೇಕ
Phone: 9902997431

Synopsys

ಜಯಶ್ರೀ ದೇಶಪಾಂಡೆ ತಮ್ಮ ಕುಟುಂಬದ ಕೆಲವು ನೆನಪುಗಳನ್ನು ಹಂಚಿಕೊಂಡಿರುವ ಕೃತಿ ಇದು. ಒಂದೆಡೆ ಆತ್ಮಕತೆಯ ಸ್ವರೂಪದಲ್ಲಿಯೂ, ಇನ್ನೊಂದೆಡೆ ಅನುಭವ ಕಥನದ ರೂಪದಲ್ಲಿಯೂ ಮತ್ತೊಂದೆಡೆ ಕಥಾ ಸಂಕಲನದಂತೆಯೂ ಕಾಣುವ ’ಮಾಯಿ ಕೆಂದಾಯಿ’ ಕರುಳು- ಬಳ್ಳಿ ಸಂಬಂಧವನ್ನು ರೂಪಕ ಭಾಷೆಯಲ್ಲಿ ಮಾತನಾಡಲು ತೊಡಗುತ್ತದೆ. 

ಉತ್ತರ ಕರ್ನಾಟಕದ ಅದರಲ್ಲಿಯೂ ಧಾರವಾಡ ಸೀಮೆಯ ಕೌಟುಂಬಿಕ ವ್ಯವಸ್ಥೆಯನ್ನು ಅತ್ಯಂತ ಭಾವನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ಜಯಶ್ರೀ. ಅವರು ಸ್ವತಃ ಸೃಜನಶೀಲ ಲೇಖಕರೂ ಆಗಿರುವುರದಿಂದ ಇಲ್ಲಿನ ಅನುಭವ ಕಥನಗಳಿಗೆ ಸಣ್ಣ ಕತೆಗಳ ವಿಸ್ತಾರವೂ ದಕ್ಕಿದೆ. 

About the Author

ಜಯಶ್ರೀ ದೇಶಪಾಂಡೆ

ಲೇಖಕಿ ಜಯಶ್ರೀ ದೇಶಪಾಂಡೆ  ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ.  ಕೃತಿಗಳು : ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ ಹಾಗೂ ಉತ್ತರಾರ್ಧ (ಕಥಾ ಸಂಕಲನಗಳು), ಯತ್ಕಿಂಚಿತ್ (ಕವನ ಸಂಕಲನ),ಮಾಯಿ   ಕೆಂದಾಯಿ  ಸ್ಮೃತಿ ಲಹರಿ (ಲಲಿತ ಪ್ರಬಂಧ ಸಂಕಲನ)  ಹೌದದ್ದು ಅಲ್ಲ‌ ಅಲ್ಲದ್ದು ಹೌದು (ಹಾಸ್ಯಲೇಖನ ಸಂಕಲನ), ಕಾಲಿಂದಿ (ಮಯೂರ), ಕೆಂಪು ಹಳದಿ ಹಸಿರು (ತರಂಗ), ದೂರ ದಾರಿಯ ತೀರ (ತರಂಗ) , ಬೇವು‌ (ವಿಜಯ ಕರ್ನಾಟಕ),  ಚಕ್ರವಾತ (ನೂತನ), ಸರಸ್ವತಿ ಕಾಯದ ದಿನವಿಲ್ಲ. (ಉದಯವಾಣಿ)   ಇವು ಧಾರಾವಾಹಿಯಾಗಿ ...

READ MORE

Related Books