ಮುಂಬಯಿ ಮಿಂಚು

Author : ಶ್ರೀನಿವಾಸ ಜೋಕಟ್ಟೆ

Pages 368

₹ 300.00




Year of Publication: 2020
Published by: ಶ್ರೀ ರಾಮ ಪ್ರಕಾಶನ
Address: ಸಂಖ್ಯೆ 893 / ಡಿ, 3ನೇ ಕ್ರಾಸ್ ಬಡಾವಾಣೆ, ನೆಗ್ರು ನಗರ, ಮಂಡ್ಯ - 571401
Phone: 9448768567

Synopsys

‘ಮುಂಬಯಿ ಮಿಂಚು’ ಶ್ರೀನಿವಾಸ ಜೋಕಟ್ಟೆ ಅವರ ಅನುಭವಕಥನವಾಗಿದೆ.ಈ ಕೃತಿಯಲ್ಲಿ ಜೋಕಟ್ಟೆ ಅವರು ಮುಂಬೈಯಲ್ಲಿ ಕಂಡುಂಡ ಸಂಗತಿಗಳನ್ನು, ತನಗೆ ದಕ್ಕಿದ ಮಹಾನಗರವನ್ನು ಕಟ್ಟಿಕೊಟ್ಟಿದ್ದಾರೆ. ಆರಂಭದಲ್ಲಿ ಮುಂಬೈಯ ಇತಿಹಾಸ, ಕನ್ನಡದೊಂದಿಗೆ ಅದಕ್ಕಿರುವ ಕುತೂಹಲಕಾರಿ ನಂಟನ್ನು ವಿವರಿಸುತ್ತಾರೆ. ಅದಾದ ಬಳಿಕವೇ ಮುಂಬೈಯ ಋಣಾತ್ಮಕ, ಧನಾತ್ಮಕವಾಗಿರುವ ಒಂದೊಂದೇ ವೈಶಿಷ್ಟಗಳನ್ನು ಪರಿಚಯಿಸುತ್ತಾ ಹೋಗುತ್ತಾರೆ. ಅಷ್ಟೇ ಅಲ್ಲದೇ ಅಲ್ಲಿನ ನಗರಗಳನ್ನು ಪರಿಚಯಿಸುವ ಲೇಖಕರು, ಮುಂಬೈಯಲ್ಲಿ ಟ್ರಾಮ್ ಯುಗ, ಮುಂಬೈಯ ಲೋಕಲ್ ರೈಲುಗಳು, ಸ್ಲಮ್ ಕ್ಷೇತ್ರ ಧಾರಾವಿ, ದಕ್ಷಿಣ ಮುಂಬೈಯ ವೈಭವ, ವಾಟ್ಸನ್ ಹೊಟೇಲ್, ಮುಂಬೈಯ ಅಸ್ಮಿತೆಗಳಾಗಿದ್ದ ಸಿನೆಮಾ ಟಾಕೀಸ್‌ಗಳು, ಮುಂಬೈಯ ಆರ್ಥಿಕತೆಗೆ ಅಫೀಮಿನ ಕೊಡುಗೆ, ಪಶ್ಚಿಮ ನಲಂದಾ ಕನ್ಹೇರಿ ಗುಹೆಗಳು, ಸಂಜಯ್‌ಗಾಂಧಿ ನೇಶನಲ್ ಪಾರ್ಕ್, ಅತಿ ದೊಡ್ಡ ಫುಟ್‌ಪಾತ್ ಬಜಾರ್ ‘ಫ್ಯಾಶನ್ ಸ್ಟ್ರೀಟ್’, ಮುಂಬೈಯ ಕುಖ್ಯಾತ ಚೋರ್‌ಬಝಾರ್, ಪಾರ್ಸಿಗಳ ಪ್ರಪಂಚ, ವಿಲ್ಸನ್ ಕಾಲೇಜ್ ಹೀಗೆ ಮೊಗೆದಷ್ಟೂ ಮುಗಿಯದ ವಿವರಗಳನ್ನು ಕೊಡುತ್ತಲೇ ಹೋಗುತ್ತಾರೆ. ಕೃತಿಯು ಕೇವಲ ಮುಂಬೈಯ ಮೇಲ್ಮೈ ಸಂಗತಿಗಳನ್ನು ಮಾತ್ರವಲ್ಲ, ಅದರೊಳಗಿನ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಕುರಿತಂತೆಯೂ ಜನರಿಗೆ ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡುತ್ತದೆ.

About the Author

ಶ್ರೀನಿವಾಸ ಜೋಕಟ್ಟೆ

ಸಾಹಿತಿ, ಪತ್ರಕರ್ತ 'ಶ್ರೀನಿವಾಸ ಜೋಕಟ್ಟೆ’ ಅವರು 1964 ಜುಲೈ 4 ಮಂಗಳೂರು ಜೋಕಟ್ಟೆಯಲ್ಲಿ ಜನಿಸಿದರು. ಪ್ರಸ್ತುತ ಮುಂಬಯಿ ನಗರದಲ್ಲಿ ವಾಸವಿದ್ದು, ಕನ್ನಡದ ದಿನಪತ್ರಿಕೆ 'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಜೋಶ್ರೀ', 'ಶ್ರೀಜೋ', ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಹಿಮವರ್ಷ, ಊರಿಗೊಂದು ಆಕಾಶ, ಒತ್ತಿ ಬರುವ ಕತ್ತಲ ದೊರೆಗಳು. ಇವರ ಗದ್ದರ್‌ ಕವನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಕ್ಕೆ ಆಯ್ಕೆಯಾಗಿದೆ.  ...

READ MORE

Related Books