ಆಧುನಿಕ ಮಾಂತ್ರಿಕರ ಜಾಡಿನಲ್ಲಿ

Author : ಅಗ್ನಿ ಶ್ರೀಧರ್

Pages 225

₹ 296.00




Year of Publication: 2018
Published by: ಅಂಕಿತ ಪುಸ್ತಕ
Address: #ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು-560004,
Phone: 26617100

Synopsys

‘ಆಧುನಿಕ ಮಾಂತ್ರಿಕರ ಜಾಡಿನಲ್ಲಿ’ ಕೃತಿಯು ಅಗ್ನಿ ಶ್ರೀಧರ್ ಅವರ ಅನುಭವ ಕಥನವಾಗಿದೆ. ಈ ಕೃತಿಯು ವೈಜ್ಞಾನಿಕ ತಳಹದಿಯ ಹಿನ್ನೆಲೆಯಲ್ಲಿ ರೂಪುಗೊಂಡ ಅನುಭವ ಕಥನವಾಗಿದ್ದು, ಮಾಂತ್ರಿಕತೆ, ಮಾಟ-ಕೂಟಗಳಲ್ಲಿ, ಮನಸ್ಸಿನ ಆಳ ಮತ್ತು ವ್ಯಾಪ್ತಿಗಳನ್ನು ಅರಿಯಲು ಮನುಷ್ಯ ಬೆಳೆಸಿಕೊಂಡಿರುವ ಶಿಸ್ತು ಇವುಗಳೇ ಇಲ್ಲಿನ ಕಥಾವಸ್ತುಗಳಾಗಿವೆ. ವಿಜ್ಞಾನಮಾಂತ್ರಿಕತೆ ಎರಡರ ತಳಹದಿಯೂ ಒಂದೇ ಆಗಿದ್ದು ಅದು ವಸ್ತು ಮತ್ತು ಚೈತನ್ಯವಾಗಿದೆ ಹಾಗೂ ವಿಜ್ಞಾನ ವಸ್ತುವನ್ನು ಬಳಸಿ ಚೈತನ್ಯವನ್ನು ಅರಿಯುತ್ತದೆ; ಮಾಂತ್ರಿಕತೆಗೆ ಅದು ಜೀವಂತ ದ್ರವ್ಯವಾಗಿದೆ. ನಮ್ಮ ನಡುವೆಯೆ ಜೀವಿಸುತ್ತಾ ಸಾವಿನೊಡನೆ ಒಡನಾಟ ಬೆಳೆಸಿಕೊಂಡಿರುವವರ ವರ್ತನೆಯ ದಾಖಲೆಯೇ ’ ಆಧುನಿಕ ಮಾಂತ್ರಿಕರ ಜಾಡಿನಲ್ಲಿ ’ ಕೃತಿಯಾಗಿದೆ.

About the Author

ಅಗ್ನಿ ಶ್ರೀಧರ್

ಅಗ್ನಿ ಶ್ರೀಧರ್ ಪತ್ರಕರ್ತರು, ಲೇಖಕರು, ಚಲನಚಿತ್ರ ಸಂಭಾಷಣೆಗಾರರು ಹಾಗೂ ನಿರ್ದೇಶಕರು. ಅಗ್ನಿ ಎಂಬ ವಾರಪತ್ರಿಕೆಯನ್ನು ನಡೆಸುತ್ತಿದ್ದಾರೆ. ಅವರು ಕರುನಾಡ ಸೇನೆಯ ಸ್ಥಾಪಕರೂ ಸಹ ಆಗಿದ್ದಾರೆ. ನಂತರ ಅವರು ಸಾಪ್ತಾಹಿಕ ಕನ್ನಡ ವೃತ್ತಪತ್ರಿಕೆ, ಅಗ್ನಿಯನ್ನು ಸ್ಥಾಪಿಸಿದರು ಮತ್ತು ವೃತ್ತಿಪರ ಬರಹಗಾರರಾಗಿದ್ದಾರೆ. "ದಾದಗಿರಿಯ ದಿನಗಳು" ಎಂಬ ಪುಸ್ತಕವನ್ನು ಬರೆದಿದ್ದಾರೆ. ಅಗ್ನಿ ಅಸ್ತ್ರ ಎಂಬ ಯು- ಟ್ಯೂಬ್ ಚಾನಲ್‌ನಲ್ಲೂ ತಮ್ಮ ವಿಮರ್ಷೆಗಳನ್ನು ಪ್ರಕಟಿಸಿದ್ದಾರೆ. ಅವರ ಪುಸ್ತಕಗಳು- ಆಧುನಿಕ ಮಾಂತ್ರಿಕರ ಜಾಡಿನಲ್ಲಿ, ಕ್ವಾಂಟಂ ಜಗತ್ತು, ಟಿಬೇಟಿಯನ್ನರ ಸತ್ತವರ ಪುಸ್ತಕ, ಕಾಡುವ ಸಾಧಕರು, ಸಂಗತಿಗಳು, ತೊಟ್ಟಿಕ್ಕುತ್ತಲೇ ಇದೆ ನೆತ್ತರು, ಎದೆಗಾರಿಕೆ, ದಾದಾಗಿರಿಯ ದಿನಗಳು ಭಾಗ-1, ...

READ MORE

Related Books