
ಲೇಖಕ ಡಾ. ಅನಂದ ಋಗ್ವೇದಿ ಅವರ ಸಂಶೋಧನಾ ಅಧ್ಯಯನ ಕೃತಿ ‘ಅನುಭವದ ಅಮೃತತ್ವ’. ಕವಿ ಮಹಾಲಿಂಗರಂಗರ ‘ಅನುಭವಾಮೃತ ಕಾವ್ಯ ಮತ್ತು ಅವಧೂತ ಅದ್ವೈತ ಪರಂಪರೆಯ ದಾರ್ಶನಿಕತೆ: ಒಂದು ಅಧ್ಯಯನ’ ಕೃತಿ ಇದು. ಅಕಾಡೆಮಿ ಅಧ್ಯಕ್ಷ ಮಾಲತಿ ಪಟ್ಟಣಶೆಟ್ಟಿ ಕೃತಿಗೆ ಬೆನ್ನುಡಿ ಬರೆದು ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಉಳಿದೆಲ್ಲ ಪ್ರಕಾರಗಳು ಸಮೃದ್ಧವಾಗಿ ಬೆಳೆದಿದ್ದು, ಸಂಶೋಧನಾತ್ಮಕ ಕೃತಿಗಳ ಕೊರತೆ ಸಮಗ್ರ ಸಾಹಿತ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಇದನ್ನು ಅನುಲಕ್ಷಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ತಜ್ಞರಿಂದ ಸಂಶೋಧನಾ ಸಂಪ್ರಬಂಧಗಳ ಬರವಣಿಗೆ ಮಾಡಿದ್ದರ ಫಲವೇ ಈ ಸರಣಿ ಸಂಪ್ರಬಂಧಗಳ ಪ್ರಕಟಣೆ. ಆ ಪೈಕಿ ‘ ಅನುಭವದ ಅಮೃತತ್ವ’ ಕೃತಿ
©2025 Book Brahma Private Limited.