ಕನಕ ಪುರಂದರ

Author : ಶಿವಪ್ರಸಾದ್‌ ವೈ.ಎಸ್.‌

Pages 399

₹ 200.00




Year of Publication: 2017
Published by: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ
Address: ಕಾಗಿನೆಲೆ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ

Synopsys

ಲೇಖಕ ಶಿವಪ್ರಸಾದ್‌ ವೈ.ಎಸ್.‌ ಅವರ ಸಂಶೋಧನಾ ಪ್ರಬಂಧ ಕೃತಿ ʻಕನಕ ಪುರಂದರ: ಇಹ-ಪರಗಳ ಮುಖಾಮುಖಿʼ. ಹದಿನಾರನೇ ಶತಮಾನದ ಭಕ್ತಿ ಪರಂಪರೆಯಲ್ಲಿ ಸಾಹಿತ್ಯ ವಿಚಾರಗಳ ಸಮನ್ವಯತೆಯಿಂದ ಕನಕದಾಸರು ಮತ್ತು ಪುರಂದರದಾಸರು ಎಂಬ ಎರಡು ಹೆಸರುಗಳು ಎದ್ದು ಕಾಣುತ್ತವೆ. ಅವರ ಸಾಹಿತ್ಯದಲ್ಲಿನ ವಿಚಾರಧಾರೆಗಳು ಆಧ್ಯಾತ್ಮ, ವೈಚಾರಿಕ, ಸಾಮಾಜಿಕ ಕಳಕಳಿಯನ್ನು ಹೊಂದಿರುವಂತವು. ಯಾವುದೇ ಒಂದು ಜಾತಿ-ಮತ-ಪಂಥ ಪ್ರದೇಶಕ್ಕೆ ಸೀಮಿತವಾಗಿರದೆ, ವೀಶ್ವದ ಒಳಿತನ್ನು ಸದಾ ಬಯಸುತ್ತಿದ್ದ ಕನಕದಾಸರು ಹಾಗೂ ಪುರಂದರದಾಸರ ವೈಚಾರಿಕ ಹಾಗೂ ತೌಲನಿಕ ಕುರಿತ ಅಧ್ಯಯನಗಳನ್ನು ನಡೆಸಿ ಪುಸ್ತಕ ಹೊರತರಲಾಗಿದೆ. ಜೊತೆಗೆ ನೂರಕ್ಕೂ ಅಧಿಕ ಅಂಶಗಳನ್ನು ತೌಲನಿಕ ಅಧ್ಯಯನದ ದಿಕ್ಸೂಚಿಯಲ್ಲಿ ನೀಡಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ; ಹರಿದಾಸ ಸಾಹಿತ್ಯ, ಜೀವನ ಮತ್ತು ಪರಿಸರ, ತೌಲನಿಕ ಅಧ್ಯಯನ, ಕನಕ ಪುರಂದರರು ಕಂಡ ಆದರ್ಶ ಭಕ್ತರು, ಕನಕದಾಸರ ಕೃತಿಗಳ ವಿವೇಚನೆ, ದಾಸಕೂಟ-ವ್ಯಾಸಕೂಟ, ಕೀರ್ತನೆಗಳಲ್ಲಿ ಸಾಮಾಜಿಕ ತಾತ್ವಿಕ ಆಯಾಮಗಳು, ಹಾಗೂ ಸಮಕಾಲೀನ ಸಂದರ್ಭದಲ್ಲಿ ಕನಕ ಪುರಂದರರು ಸೇರಿ ಒಟ್ಟು 8 ಅಧ್ಯಯಗಳಿವೆ.

About the Author

ಶಿವಪ್ರಸಾದ್‌ ವೈ.ಎಸ್.‌

ಶಿವಪ್ರಸಾದ್‌ ವೈ.ಎಸ್.‌ ಅವರು ಆಚಾರ್ಯ ಪಾಠಶಾಲಾ ಕಲೆ, ವಿಜ್ಞಾನ ಮತ್ತು ವಾಣಿಜ್ಯ  ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಐಚ್ಛಿಕ ಕನ್ನಡ ವಿಷಯದ ಸಂಯೋಜನೆಯೊಡನೆ ಅಧ್ಯಯನ ಮಾಡಿದ್ದಾರೆ. ಪ್ರಸ್ತುತ ಕ್ರೈಸ್ಟ್‌ ಯೂನಿವರ್ಸಿಟಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: ಕನಕ ಪುರಂದರ ...

READ MORE

Related Books