ಏಕೋರಾಮೇಶ್ವರ ಪುರಾಣ

Author : ವೈ. ಸಿ. ಭಾನುಮತಿ

Pages 444

₹ 196.00




Year of Publication: 1985
Published by: ಕನ್ನಡ ಅಧ್ಯಯನ ಸಂಸ್ಥೆ
Address: ಗುಲ್ಬರ್ಗ ವಿಶ್ವವಿದ್ಯಾಲಯ, ಕಲಬುರ್ಗಿ

Synopsys

‘ಏಕೋರಾಮೇಶ್ವರ ಪುರಾಣ’ ಕೃತಿಯು ವೈ.ಸಿ. ಭಾನುಮತಿ ಅವರ ಗ್ರಂಥವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಹರದನಹಳ್ಳಿಯಲ್ಲಿ ದಿವ್ಯಲಿಂಗೇಶ್ವರ ದೇವಾಲಯವಿದೆ. ದಿವ್ಯಲಿಂಗೇಶ್ವರನಿಗೆ ಅಣಿಲೇಶ್ವರ, ಅಮೃತೇಶ್ವರ ಎಂಬ ಬೇರೆಬೇರೆ ಹೆಸರುಗಳೂ ಇವೆ. ಈ ದೇವಾಲಯವನ್ನು ಪುರುಸಗೌಡನ ಮಗ ಮಾರಗೌಡನು ಕ್ರಿ. ಶ. 1316ರಲ್ಲಿ ಕಟ್ಟಿಸಿದನು. 1 ಮಾರಗೌಡನು ಮಾಧವದಣ್ಣಾಯಕನ ಮನೆಗೂಡು ಆಗಿದ್ದನೆಂದು ತಿಳಿದು ಬರುತ್ತದೆ. ದಿವ್ಯಲಿಂಗೇಶ್ವರ ದೇವಾಲಯವು ವಿಸ್ತಾರವಾಗಿದ್ದು ಕಾಲದಿಂದ ಕಾಲಕ್ಕೆ ನವೀನ ಸೇರ್ಪಡೆಗಳಾಗಿವೆ. ಆದ್ದರಿಂದ ಇಲ್ಲಿನ ಶಿಲ್ಪದಲ್ಲಿ ಹೊಯ್ಸಳ ವಿಜಯನಗರ ಮೊದಲಾದ ಶೈಲಿಗಳನ್ನು ಗುರುತಿಸಬಹುದು. ದೇವಾಲಯದ ದಕ್ಷಿಣದಿಕ್ಕಿನ ಪೌಳಿಯಲ್ಲಿ ಅನೇಕ ಶಾಸನಗಳಿವೆ. ಇವು ದೇವಾಯಲದ ಇತಿಹಾಸವನ್ನು ರೂಪಿಸಲು ಸಹಾಯಕವಾಗಿವೆ. ದಿವ್ಯಲಿಂಗೇಶ್ವರ ದೇವಾಲಯವು ಗರ್ಭಗೃಹ, ಸುಖನಾಶಿ ಮತ್ತು ನವರಂಗಗಳನ್ನು ಒಳಗೊಂಡಿದೆ. ನವರಂಗದಲ್ಲಿ ನಾಲ್ಕು ಕಂಭಗಳಿವೆ. ಇವುಗಳ ಮೇಲೆ ಶಾಸನಗಳಿವೆ. ಈ ಕಂಭಗಳು ದೇವಾಲಯಕ್ಕೆ ಸಂದ ಕೊಡುಗೆಗಳಾಗಿವೆ. ದೇವಾಲಯದ ಒಳಗೆ ಬಲಭಾಗದಲ್ಲಿ ಸೂರ್ಯನ ಚಿತ್ರವಿದೆ. ಉತ್ತರ ಭಾಗದಲ್ಲಿ ಪಾರ್ವತಿಯ ಗುಡಿ ಇದೆ. ಇದು ಆ ಬಳಿಕದ ರಚನೆ. ಹೊರಗಿನ ನವರಂಗ, ಕಟಕಟೆ, ಕಂಭಗಳು, ದ್ವಾರಪಾಲಕರು, ವೀರಭದ್ರ ಪ್ರತಿಮೆ, ಒಳಛಾವಣಿಯ ತಾಂಡವೇಶ್ವರ, ಮುಖಮಂಟಪ, ಅಂಕಣ ಗಳಂ ಇವೇ ಮೊದಲಾದುವುಗಳು ಕ್ರಿ. ಶ. 1340-1370ರ ಅವಧಿಯಲ್ಲಿ ನಿರ್ಮಾಣವಾಗಿವೆ. ವೀರಭದ್ರನ ಪ್ರತಿಮೆ ಸುಂದರವಾಗಿದೆ.

About the Author

ವೈ. ಸಿ. ಭಾನುಮತಿ
(14 January 1953)

ಲೇಖಕಿ ವೈ.ಸಿ. ಭಾನುಮತಿಯವರು ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಯಮಸಂಧಿ ಗ್ರಾಮದವರು. ವೈ.ಸಿ. ಭಾನುಮತಿಯವರು ಪ್ರಾಚೀನ ಸಾಹಿತ್ಯ ಮತ್ತು ಜಾನಪದ ಗ್ರಂಥ ಸಂಪಾದನೆ ಜೊತೆಗೆ ಸಂಶೋಧನ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಜೈನ ಕವಿ ಶ್ರುತಕೀರ್ತಿಯ ಸ್ರ್ತೀಯೋರ್ವಳ ಕತೆಯನ್ನು ಆಧರಿಸಿ ರಚಿಸಿದ ಮೊದಲ ಜೈನ ಕೃತಿ ವಿಜಯ ಕುಮಾರಿ ಚರಿತೆ, ಸುಕುಮಾರ ಚರಿತೆ, ಪುರಾತನರರ ಚರಿತೆ ಮತ್ತು ಶರಣ ನಿಜಚಿಕ್ಕಲಿಂಗಯ್ಯ ಸಾಂಗತ್ಯ ಸೇರಿದಂತೆ ಸುಮಾರು 30 ಮಹತ್ವದ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಜಾನಪದ ಕ್ಷೇತ್ರದಲ್ಲಿಯೂ ಆಸಕ್ತರಾಗಿದ್ದ ಅವರು ಇಬ್ಬೀಡಿನ ಜನಪದ ಕಥೆಗಳು, ಮಲೆನಾಡ ಶೈವ ಒಕ್ಕಲಿಗರು, ಜಾನಪದೀಯ ಅಧ್ಯಯನ, ...

READ MORE

Related Books