ಕರ್ನಾಟಕ ಜನಗಣತಿ 2011

Author : ಟಿ.ಆರ್‌. ಚಂದ್ರಶೇಖರ

Pages 130

₹ 80.00




Year of Publication: 2012
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ - 583 276, ಹೊಸಪೇಟೆ(ತಾಲ್ಲೂಕು), ಬಳ್ಳಾರಿ (ಜಿಲ್ಲೆ) ಪ್ರಾದೇಶಿಕ ಕಚೇರಿ ಕನ್ನಡ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ ನಂ. 1, ಹಳೆಯ ಕಾನೂನು ಕಾಲೇಜು ಕಟ್ಟಡ ಮೈಸೂರು ಬ್ಯಾಂಕ್ ವೃತ್ತ, ಅರಮನೆ ರಸ್ತೆ ಬೆಂಗಳೂರು- 560009
Phone: 9449262647/080-22372388

Synopsys

‘ಕರ್ನಾಟಕ ಜನಗಣತಿ 2011’ ಕೃತಿಯು ಟಿ.ಆರ್. ಚಂದ್ರಶೇಖರ ಅವರ ಅಧ್ಯಯನ ಕೃತಿಯಾಗಿದೆ. ಜಗತ್ತಿನಾದ್ಯಂತ ಶ್ರೀಮಂತ ರಾಷ್ಟ್ರಗಳು ತಮ್ಮದು ಕಡಿಮೆ ಜನಸಂಖ್ಯೆಯೆಂಬ ಕಾರಣಕ್ಕೆ ಹೆಚ್ಚು ಹೆಚ್ಚು ಪ್ರಾಕೃತಿಕ ಸಂಪನ್ಮೂಲಗಳನ್ನು ಮಿತಿಮೀರಿ ಕಬಳಿಸುತ್ತಿವೆ. ಬಡರಾಷ್ಟ್ರಗಳಲ್ಲಿ ಬಂಡವಾಳ ಹೂಡಿ ಜನರನ್ನು ದುಡಿಸಿ ಸಂಪತ್ತನ್ನು ದೋಚುವ ರಾಷ್ಟ್ರಗಳು ಜನಸಂಖ್ಯಾ ಬಾಹುಳ್ಯವಿರುವ ದೇಶಗಳನ್ನು ಆಯ್ಕೆಮಾಡಿ ಶೋಷಣೆ ಮಾಡುತ್ತಿವೆ. ಜನಸಂಖ್ಯೆ ಬೆಳವಣಿಗೆ ಮತ್ತು ತತ್ಸಂಬಂಧಿತ ಸಮಸ್ಯೆಗಳ ಬೆಳವಣಿಗೆ ಏಕಕಾಲದಲ್ಲಿ ಸಮಾನಾಂತರವಾಗಿ ಸಾಗುತ್ತಿದ್ದರೆ, ಸಮಾಜ ಶಾಸ್ತ್ರಜ್ಞರು ಕೈ ಚೆಲ್ಲಿ ಕುಳಿತರೆ ಅಭಿವೃದ್ಧಿ ಸಾಧ್ಯವೇ ? ಇಂಥ ಹಲವಾರು ಪ್ರಶ್ನೆಗಳಲ್ಲಿ ಚರ್ಚಿಸಲಾಗಿದೆ. ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಅಂಕಿಅಂಶಗಳ ಸಹಿತ ಈ ಪುಸ್ತಕದಲ್ಲಿ ನೀಡಲಾಗಿದೆ.

About the Author

ಟಿ.ಆರ್‌. ಚಂದ್ರಶೇಖರ
(07 April 1951)

ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಟಿ.ಆರ್‌. ಚಂದ್ರಶೇಖರ್‌ ಅವರು ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ಅವರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಕೂಡ ಆಗಿದ್ದರು. 2103ರಲ್ಲಿ ನಿವೃತ್ತರಾದ ನಂತರ ಬೆಂಗಳೂರು ನಿವಾಸಿಯಾಗಿದ್ದಾರೆ. ಅಭಿವೃದ್ಧಿ ಅದರ ಪರಿಕಲ್ಪನೆ ಹಾಗೂ ಯೋಜನೆಗಳ ಜಾರಿ, ನೀತಿ-ನಿರೂಪಣೆಗಳಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳ ವರದಿ ಸಿದ್ಧಪಡಿಸಿದ್ದಾರೆ. ...

READ MORE

Reviews

(ಹೊಸತು, ಜುಲೈ 2012, ಪುಸ್ತಕದ ಪರಿಚಯ)

ಕರ್ನಾಟಕ ರಾಜ್ಯದ 2011ರ ಜನಗಣತಿಯಿಂದ ಲಭ್ಯವಾದ ಮಾಹಿತಿ ನಮ್ಮನ್ನು ಹಲವು ಬಗೆಯಲ್ಲಿ ಯೋಚಿಸುವಂತೆ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿನ ಸಫಲತೆ- ವಿಫಲತೆಗಳನ್ನು ಜನಸಂಖ್ಯೆಯೆಂಬ ಮಾನದಂಡದಿಂದ ಅಳೆದಾಗ ನಾವು ಎಡವಿದ್ದು ಸ್ಪಷ್ಟವಾಗುತ್ತದೆ. ಜನಸಂಖ್ಯಾ ಸ್ಫೋಟ ಮಾರಕವೆಂದು ಚಿತ್ರಿಸುತ್ತ ಕುಟುಂಬಯೋಜನೆ ಕಡ್ಡಾಯ ಮಾಡಿದರೆ ಸಾಧನೆಯೆಂದು ತಿಳಿದದ್ದೇ ತಪ್ಪು. ಜನಸಂಖ್ಯಾ ಬೆಳವಣಿಗೆಯನ್ನು ಗೇಲಿಮಾಡದೆ ಜನರ ಶಕ್ತಿಯನ್ನು ದೇಶದ ಅಭಿವೃದ್ಧಿಯ ಪಥದಲ್ಲಿ, ಸಮರ್ಥವಾಗಿ ಬಳಸಿಕೊಳ್ಳಬೇಕಿತ್ತು ನಮ್ಮಲ್ಲಿ ಆಹಾರದ ಕೊರತೆಯಿದ್ದು ಉದ್ಯೋಗದ ಖಾತರಿ ಇಲ್ಲದಿರುವುದರಿಂದ 'ಚಿಕ್ಕ ಕುಟುಂಬ'ದ ವ್ಯಾಖ್ಯೆ ಆಪ್ಯಾಯಮಾನವಾಗಿತ್ತು ಜಗತ್ತಿನಾದ್ಯಂತ ಶ್ರೀಮಂತ ರಾಷ್ಟ್ರಗಳು ತಮ್ಮದು ಕಡಿಮೆ ಜನಸಂಖ್ಯೆಯೆಂಬ ಕಾರಣಕ್ಕೆ ಹೆಚ್ಚು ಹೆಚ್ಚು ಪ್ರಾಕೃತಿಕ ಸಂಪನ್ಮೂಲಗಳನ್ನು ಮಿತಿಮೀರಿ ಕಬಳಿಸುತ್ತಿವೆ. ಬಡರಾಷ್ಟ್ರ ಗಳಲ್ಲಿ ಬಂಡವಾಳ ಹೂಡಿ ಜನರನ್ನು ದುಡಿಸಿ ಸಂಪತ್ತನ್ನು ದೋಚುವ ರಾಷ್ಟ್ರಗಳು ಜನಸಂಖ್ಯಾ ಬಾಹುಳ್ಯವಿರುವ ದೇಶಗಳನ್ನು ಆಯ್ಕೆಮಾಡಿ ಶೋಷಣೆ ಮಾಡುತ್ತಿವೆ. ಜನಸಂಖ್ಯೆ ಬೆಳವಣಿಗೆ ಮತ್ತು ತತ್ಸಂಬಂಧಿತ ಸಮಸ್ಯೆಗಳ ಬೆಳವಣಿಗೆ ಏಕಕಾಲದಲ್ಲಿ ಸಮಾನಾಂತರವಾಗಿ ಸಾಗುತ್ತಿದ್ದರೆ, ಸಮಾಜ ಶಾಸ್ತ್ರಜ್ಞರು ಕೈ ಚೆಲ್ಲಿ ಕುಳಿತರೆ ಅಭಿವೃದ್ಧಿ ಸಾಧ್ಯವೇ ? ಇಂಥ ಹಲವಾರು ಪ್ರಶ್ನೆಗಳಲ್ಲಿ ಚರ್ಚಿಸಲಾಗಿದೆ. ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಅಂಕಿಅಂಶಗಳ ಸಹಿತ ಈ ಪುಸ್ತಕದಲ್ಲಿ ನೀಡಲಾಗಿದೆ.

 

Related Books