ನಡುಗನ್ನಡ ಸಾಹಿತ್ಯ: ದೇಸಿ ಚಿಂತನೆಯ ನೆಲೆಗಳು

Author : ಡಿ.ಕೆ. ಚಿತ್ತಯ್ಯ ಪೂಜಾರ್

Pages 260

₹ 300.00




Year of Publication: 2020
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ. 277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು- 560058

Synopsys

‘ನಡುಗನ್ನಡ ಸಾಹಿತ್ಯ: ದೇಸಿ ಚಿಂತನೆಯ ನೆಲೆಗಳು’ ಲೇಖಕ ಡಾ.ಡಿ.ಕೆ. ಚಿತ್ತಯ್ಯ ಪೂಜಾರ್ ಅವರ ಕೃತಿ. ಈ ಕೃತಿಗೆ ಡಾ.ಕರೀಗೌಡ ಬೀಚನಹಳ್ಳಿ ಹಾಗೂ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರು ಬೆನ್ನುಡಿ ಬರೆದಿದ್ದಾರೆ. ‘ಕನ್ನಡ ಸಾಹಿತ್ಯ, ಸಂಸ್ಕೃತಿ, ಚರಿತ್ರೆಯಲ್ಲಿ ಮಧ್ಯಕಾಲೀನ ಸಂದರ್ಭದಲ್ಲಿ ಸೃಷ್ಟಿಯಾದ ಕನ್ನಡ ಸಾಹಿತ್ಯಿಕ ರಚನೆಗಳಿಗೆ ತನ್ನದೇ ಆದ ಅನನ್ಯತೆ ಇದೆ. ಹಾಗಾಗಿ ನಡುಗನ್ನಡ ಸಾಹಿತ್ಯ ದೇಸಿ ಚಿಂತನೆಯ ನೆಲೆಗಳು ಎನ್ನುವ ಈ ಕೃತಿ ಅದರ ಪ್ರತಿಬಿಂಬದಂತಿದೆ. ಈ ಕೃತಿಯಲ್ಲಿ ಸುಮಾರು ಮುವತ್ತೈದು ಲೇಖನಗಳಿದ್ದು ವಚನ, ರಗಳೆ, ಷಟ್ಪದಿ, ಸಾಂಗತ್ಯ, ಕೀರ್ತನೆ, ತತ್ವಪದ, ಜನಪದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಅಭಿವ್ಯಕ್ತಗೊಂಡ ಮನುಷ್ಯನ ಬದುಕಿನ ವಿವಿಧ ನೆಲೆಗಳನ್ನು ಗಂಭೀರವಾಗಿ ರಚಿಸಲಾಗಿದೆ’ ಎನ್ನುತ್ತಾರೆ ಡಾ. ಕರೀಗೌಡ ಬೀಚನಹಳ್ಳಿ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿನ ಮಧ್ಯಕಾಲೀನ ಯುಗದ ಸಾಹಿತ್ಯ ಮಾರ್ಗ ಪರಂಪರೆಗಿಂತ ಭಿನ್ನವಾದ ಅನೇಕ ದೇಸೀ ಅಭಿವ್ಯಕ್ತಿಗಳ ಅಮೂಲ್ಯ ಅನನ್ಯ ಕಾಲಘಟ್ಟ: ಬಹುಮುಖಿ ಚಿಂತನೆಗಳ ದೇಸಿ ಪ್ರಯೋಗಶಾಲೆ ಕನ್ನಡ ಸಾಹಿತ್ಯವನ್ನು ಹೊಸ ನಿಟ್ಟಿನಲ್ಲಿ ನೋಡುವ, ಚಿಂತಿಸುವ ವ್ಯಾಖ್ಯಾನಿಸುವ ಅನೇಕ ಪ್ರಕತ್ನಗಳು ಈ ಕೃತಿಯಲ್ಲಿವೆ.

About the Author

ಡಿ.ಕೆ. ಚಿತ್ತಯ್ಯ ಪೂಜಾರ್

ಲೇಖಕ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್ ಅವರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ದವಡ ಬೆಟ್ಟಗ್ರಾಮದವರು. ದವಡಬೆಟ್ಟ, ಮಧುಗಿರಿ, ಚನ್ನಪಟ್ಟಣ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, 1996-97 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವೀಧರರು. 2001ರಲ್ಲಿ ಡಾ.ಜಿ.ಆರ್. ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ  ‘ನಿಡುಗಲ್ಲು:ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧವನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, ಡಾಕ್ಟರೇಟ್ ಪದವೀಧರರು. ಚಿತ್ತಯ್ಯ ಅವರು ಶಾಸ್ತ್ರೀಯ ಭಾಷೆಯಲ್ಲಿಅಧ್ಯಯನ ನಡೆಸಿದ್ದು, ಸೃಜನಶೀಲ ಮತ್ತು ಸಂಶೋಧನಾ ಬರಹಗಳಾಗಿ 29 ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ಅಕ್ಷರ ಮಂದಿರದ ಅಪೇಕ್ಷೆಯಂತೆ ಮಕ್ಕಳಿಗೆ ಮೀಸಲಾದ 50 ಪುಸ್ತಕಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಇವರಿಗೆ 2017ನೇ ಸಾಲಿನ ರಾಜ್ಯಮಟ್ಟದ ‘ಶ್ರೀವಿಜಯಾ ಸಾಹಿತ್ಯ ...

READ MORE

Related Books