ಗೃಹ ವೈದ್ಯ ಕೈಪಿಡಿ

Author : ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)

Pages 104

₹ 180.00




Year of Publication: 1996
Published by: ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿ
Address: ಮಲ್ಲಾಡಿಹಳ್ಳಿ- 577531

Synopsys

‘ಕೊನೆಯ ಗುಟುಕು’ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ) ಅವರ ಕಾದಂಬರಿಯಾಗಿದೆ. ದಿನಚರ್ಯೆ, ಋತುಚರ್ಯೆ, ಸತ, ಸ್ವಚ್ಛವೃತ್ತಗಳ ಸೂಕ್ಷ್ಮ ಪರಿಚಯ, ಶರೀರ ವಿಜ್ಞಾನ (ಸೂಕ್ಷ್ಮ ಪರಿಚಯ), ರೋಗನಿದಾನದ ಸೂಕ್ಷ್ಮ ಪರಿಚಯದಲ್ಲಿ ಅನುಸರಿಸಬೇಕಾದ ವಿಧಾನ, ರೋಗಿಗಳ ಶುಶೂಷೆಯಲ್ಲಿ ಅನುಸರಿಸಬೇಕಾದ ನಿಯಮ ವನೌಷಧಿಗಳ ಪರಿಚಯ, ಔಷಧ ದ್ರವ್ಯಗಳ ಸಂಕೇತ ನಾಮಗಳು ರೋಗೋಕ್ತ ಔಷಧ ರಚನಾ ಪರಿಭಾಷಾ ಯಾವ ಔಷಧಿಯ ಯಾವ ಭಾಗ, ದ್ರವ್ಯಶುದ್ಧಿ, ಪಥ್ಯಾಪಥ್ಯ ವಿಚಾರವನ್ನು ಕೃತಿಯು ಒಳಗೊಂಡಿದೆ. ದಿನಚರ್ಯೆ ಋತುಚರ್ಯೆ, ಸ್ವಸ್ಥ ವೃತ್ರಗಳ ವಿವರವಾದ ಪರಿಚಯವನ್ನಿಲ್ಲಿ ನಾನು ನೀಡಲು ಇಚ್ಛಿಸುವುದಿಲ್ಲ. ಅದು ಶಾಸ್ತ್ರದ ಗಂಟು: ಕೇವಲ ವೈದ್ಯಕೀಯ ಶಿಕ್ಷಣ ಪಡೆದು ತಮ್ಮ ಜೀವನದಲ್ಲಿ ವೈದ್ಯಕೀಯ ವೃತ್ತಿಯನ್ನೇ ಅವಲಂಬಿಸತಕ್ಕವರಿಗೆ ಇವುಗಳೆಲ್ಲ ಅಗತ್ಯ- -ವಾದರೂ ಗೃಹವೈದ್ಯದ ಶಿಬಿರಾರ್ಥಿಗಳಿಗೆ ಇಷ್ಟೆಲ್ಲ ಕೇವಲ ಹೊರೆ. ಆದರೂ ಮೇಲೆ ಹೇಳಿರುವ ಎಲ್ಲವುಗಳಲ್ಲಿ ಮುಖ್ಯವಾದ ವಿಚಾರಗಳನ್ನಷ್ಟೇ ಇಲ್ಲಿ ಸಂಗ್ರಹಿಸಲಾಗಿದೆ ಎಂಬುವುದನ್ನು ತಿಳಿಯಬಹುದು.

About the Author

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)
(18 March 1891 - 04 August 1996)

ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ.  ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...

READ MORE

Related Books