ರಂಜೇರಿನ ಸಿಂದರು

Author : ಸೂಗಯ್ಯ ಹಿರೇಮಠ

Pages 104

₹ 60.00




Year of Publication: 2002
Published by: ಶ್ರೀಸಿದ್ದೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮು, ಗುಲಬರ್ಗಾ- 585101
Phone: 0872460431

Synopsys

‘ರಂಜೇರಿನ ಸಿಂಧರು’ ಕನ್ನಡ ಸಾಹಿತ್ಯಕ್ಕೆ ಐತಿಹಾಸಿಕವಾಗಿ ಅವರು ನೀಡಿರುವ ಕೊಡುಗೆಗಳ ಕುರಿತು ವಿಶ್ಲೇಷಿಸಿದ ಕೃತಿ. ಲೇಖಕ ಸೂಗಯ್ಯ ಹಿರೇಮಠ ಅವರು ರಚಿಸಿದ್ದಾರೆ. ಸಿಂಧರು ಯಾರು, ಎಂಬುದು ಗೊತ್ತಿಲ್ಲದ ಸಾಹಿತಿಗಳಿಗೆ, ಸಂಶೋಧಕರಿಗೆ ಮತ್ತು ಚರಿತ್ರೆಕಾರರಿಗೆ ಲೇಖಕರು ಒಂದು ಹೊಸ ಹಾದಿಯನ್ನೇ ತೆರೆದಿಟ್ಟಿದ್ದಾರೆ. ಕನ್ನಡ ಸಾಹಿತ್ಯ ಸಂಸ್ಕೃತಿ ಚರಿತ್ರೆಯನ್ನು ಕಟ್ಟುವುದಲ್ಲಿ ಸಾಮಂತರಾಗಿದ್ದುಕೊಂಡು ಸಿಂಧರು ನೀಡಿದ ಕೊಡುಗೆ ಈವರೆಗೆ ಚರಿತ್ರೆ ಗುರುತಿಸಿಲ್ಲ. ಈ ಕೆಲಸವನ್ನು ಲೇಖಕರು ಮಾಡಿದ್ದಾರೆ. ಸಿಂದರ ಸಂಪೂರ್ಣ ಇತಿಹಾಸ ಸಂಶೋಧನೆಗೆ ಈ ಕೃತಿ ಪ್ರೇರಣೆ ನೀಡುತ್ತದೆ.

About the Author

ಸೂಗಯ್ಯ ಹಿರೇಮಠ
(09 May 1950 - 21 November 2017)

ಪ್ರೊ. ಸೂಗಯ್ಯ ಹಿರೇಮಠ ಅವರು 09-05-1950ರಂದು ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಿಂಗನಹಳ್ಳಿಯಲ್ಲಿ ಜನಿಸಿದರು. ತಂದೆ ಶರಣಯ್ಯ ಹಿರೇಮಠ, ತಾಯಿ ಶಾಂತಮ್ಮ ಹಿರೇಮಠ. ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಜಾನಪದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.  ಕರ್ನಾಟಕ ವಿದ್ಯಾಲಯ ಹಾಗೂ ಗುಲಬರ್ಗಾ ಯು.ಜಿ.ಸಿ. ಅಡಿಯಲ್ಲಿ ಉತ್ತರ ಕರ್ನಾಟಕದ ಜನಪದ ಸಾಹಿತ್ಯ, ಸಂಗ್ರಹ ಮಾಡಿದ್ದಾರೆ. ಜನಪದ ವೈದ್ಯಕೋಶ ಗುಲಬರ್ಗಾ ಜಿಲ್ಲೆಯ ಸಂಗ್ರಹ ಮಾಡಿರುವ ಇವರು ವೃತ್ತಿಯಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಶ್ರೀಮತಿ ಚನ್ನಮ್ಮ ಬಸಪ್ಪ ...

READ MORE

Related Books