ಕಾವೇರಿ ಮಹಾತ್ಮೆ

Author : ಎಂ.ಪಿ. ಮಂಜಪ್ಪ ಶೆಟ್ಟಿ

Pages 928

₹ 400.00




Year of Publication: 2001
Published by: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು
Address: ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ- 570001\n
Phone: 0821-2419872

Synopsys

‘ಕಾವೇರಿ ಮಹಾತ್ಮೆ’ ಎಂ.ಪಿ. ಮಂಜಪ್ಪ ಶೆಟ್ಟಿ ಅವರ ಸಂಪಾದಿತ ಕೃತಿಯಾಗಿದೆ. 'ಕಾವೇರಿ ಮಾಹಾತ್ಮ' ಪ್ರಾಚ್ಯಕಾವ್ಯಮಾಲೆಯ 121ನೆಯ ಕೃತಿ. ಒಂದು ಸಾವಿರಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ಈ ಗ್ರಂಥ ಬೃಹತ್ತು, ಮಹತ್ತುಗಳೆರಡರಲ್ಲಿಯೂ ವಿಶಿಷ್ಟವಾಗಿದೆ; ಬಹುಶಃ ಸಂಸ್ಥೆಯ ಪ್ರಾಚ್ಯ ಕಾವ್ಯಮಾಲೆಯಡಿಯಲ್ಲಿ ಇಲ್ಲಿಯವರೆಗೆ ಪ್ರಕಟವಾಗಿರುವ ಕೃತಿಗಳಲ್ಲೆಲ್ಲ ಇದು ಬೃಹತ್ತಾದುದಾಗಿದೆ. ಕಾವ್ಯದ ಹೆಸರೇ ಹೇಳುವಂತೆ ಇದು, ಕಾವೇರಿ ನದಿಯ ಮಹಿಮಾತಿವಹಿನಗಳನ್ನು ವರ್ಣಿಸುವುದಲ್ಲದೆ, ಅದು ಜನ್ಮತಾಳುವಲ್ಲಿಂದ ತೊಡಗಿ ಸವಂದ್ರವನ್ನು ಸೇರುವವರೆಗಿನ ಜಾಡಿನಲ್ಲಿನ ಪುಣ್ಯ ಕ್ಷೇತ್ರಗಳು, ಅವುಗಳ ಸ್ಥಳ ವರ್ಣನೆ : ಸಾಂಸ್ಕೃತಿಕ ವೈಭವಗಳ ಚಿತ್ರಣವನ್ನು ನೀಡುವ ಅಮೌಲ್ಯ ಕೃತಿಯಾಗಿದೆ. ಸಂಪಾದನಾ ವಿಭಾಗದ ಮುಖ್ಯರಾದ ಡಾ. ಬೈಲಹಳ್ಳಿ ರೇವಣ್ಣ ಅವರ ನೇತೃತ್ವದಲ್ಲಿ, ಸಹಾಯಕ ನಿರ್ದೇಶಕರಾದ ಡಾ. ಎಂ. ಪಿ. ಮಂಜಪ್ಪ ಶೆಟ್ಟಿ ಅವರು ಇದನ್ನು ಉಪಯುಕ್ತ ಪ್ರಸ್ತಾವನೆ, ಅಗತ್ಯ ಅನುಬಂಧಗಳೊಂದಿಗೆ ಶಾಸ್ತ್ರೀಯವಾಗಿ ಸಂಪಾದಿಸಿ ಕೊಟ್ಟಿದ್ದಾರೆ.

About the Author

ಎಂ.ಪಿ. ಮಂಜಪ್ಪ ಶೆಟ್ಟಿ

ಎಂ.ಪಿ.ಮಂಜಪ್ಪ ಶೆಟ್ಟಿ ಚಿಕ್ಕಮಗಳೂರು ಜಿಲ್ಲೆಯ ಮಸಗಲಿಯವರು. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೃಷಿಯನ್ನು ಮಾಡಿರುವ ಅವರು ವ್ಯಕ್ತಿಚಿತ್ರಗಳನ್ನು ರಚಿಸಿರುತ್ತಾರೆ. ಕೃತಿಗಳು: ನನ್ನಯ್ಯ ಚಾರಿತ್ರ, ಗುರುದತ್ತ ಚರಿತ್ರೆ, ಕೃಷ್ಣರಾಜ ವಿಲಾಸ, ಕಾವೇರಿ ಮಹಾತ್ಮೆ, ಚೆಲುವಾಂಬೆಯ ಕೃತಿಗಳು, ...

READ MORE

Related Books