ಬೆತ್ತಲೆ ಫಕೀರ

Author : ಜ.ನಾ. ತೇಜಶ್ರೀ

Pages 168

₹ 100.00




Year of Publication: 2011
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಉರ್ದು ಕವಿ ಅಲಿ ಸರ್ದಾರ್ ಜಾಫ್ಹ್ರಿಯವರ ಉರ್ದು ಕವಿತೆಗಳನ್ನು ಕನ್ನಡಕ್ಕೆ  ಜ.ನಾ.ತೇಜಶ್ರೀಯವರು ತಂದಿದ್ದಾರೆ.  ಇವರೂ ಸ್ವತಃ ಕವಿಯಾಗಿರುವುದರಿಂದ ಅಲಿ ಸರ್ದಾರ್ ಜಾಫ್ರಿಯವರನ್ನು ಕನ್ನಡ ಜಾಯಮಾನಕ್ಕೆ ಸಲ್ಲುವಂತೆಯೂ, ಉರ್ದು ಭಾಷೆಯ ಕೆಲವು ಗುಣಗಳು ಕನ್ನಡಕ್ಕೆ ದಕ್ಕುವಂತೆಯೂ ’ಬೆತ್ತಲೆ ಫಕೀರ’  ಕೃತಿಯಲ್ಲಿ ಅನುವಾದಿಸಿದ್ದಾರೆ.

ಸಾಮಾನ್ಯವಾಗಿ ಉರ್ದು ಲೇಖಕರಿಗೆ ತಾವು ಭಾರತೀಯ ಲೇಖಕರೆಂಬುದೂ, ಏಷ್ಯಾ ಖಂಡಕ್ಕೆ ಸೇರಿದವರೆಂಬುದೂ ಲೇಖಕರಿಗಿಂತ ಹೆಚ್ಚು ಮುಖ್ಯವಾದ ಸಂಗತಿಯಾಗಿರುತ್ತದೆ. ಮಾರ್ಕ್ಸ್ ವಾದದಿಂದ ಪ್ರಭಾವಿತರಾದ ಪ್ರಗತಿಶೀಲ ಲೇಖಕ ಅಲಿ ಸರ್ದಾರ್ ಜಾಫ್ರಿಯವರಿಗಂತೂ ಹೋರಾಟಗಾರರ ಪರವಾಗಿರುವ ವಿಶ್ವಮಾನವತ್ವದ ಕಲ್ಪನೆ ಬಹಳ ಮುಖ್ಯವಾಗುವ ಹೊತ್ತಿಗೆ ಹುಟ್ಟಿದ ಅನೇಕ ರಚನೆಗಳು ಈ ಕೃತಿಯಲ್ಲಿದೆ. 

About the Author

ಜ.ನಾ. ತೇಜಶ್ರೀ

ಎಂ.ಎ. (ಇಂಗ್ಲಿಷ್) ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ ಆಗಿರುವ ತೇಜಶ್ರೀ ಅವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 'ಟ್ಯಾಗೋರ್ ಪೀಠ'ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿ‌ದ್ದಾರೆ. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸುಬುಂಡೆ, ಮಾಗಿಕಾಲದ ಸಾಲುಗಳು (ಕವನ ಸಂಕಲನಗಳು) ಭಾರತ ರಾಷ್ಟ್ರೀಯ ಚಳುವಳಿ, ಚೀನಿ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ, ಬೆತ್ತಲೆ ಫಕೀರ, ಇರುವೆ ಮತ್ತು ಪಾರಿವಾಳ (ಅನುವಾದಿತ ಕೃತಿಗಳು) ’ನೀನಾಸಂ'ಗಾಗಿ ವೋಲೆ ಸೋಯಿಂಕಾನ ಸಾವು ಮತ್ತು ರಾಜನ ಕುದುರೆ ಸವಾರ' ನಾಟಕದ ಅನುವಾದ. ಕವಿ ರವೀಂದ್ರ, ...

READ MORE

Related Books