ವಿದ್ಯಾಪತಿಯ ಗೀತೆಗಳು

Author : ಓ. ಎಲ್. ನಾಗಭೂಷಣಸ್ವಾಮಿ

Pages 180

₹ 175.00




Year of Publication: 2021
Published by: ಸಾಹಿತ್ಯ ಅಕಾಡೆಮಿ
Address: ಮುಖ್ಯ ಕಛೇರಿ: ರವೀಂದ್ರ ಭವನ, 35, ಫಿರೋಜಶಾಹ ರಸ್ತೆ, ನವದೆಹಲಿ-110001

Synopsys

‘ವಿದ್ಯಾಪತಿಯ ಗೀತೆಗಳು’ ದೇಬೆನ್ ಭಟ್ಟಾಚಾರ್ಯ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದ ಕೃತಿಯ ಕನ್ನಡಾನುವಾದ ಲೇಖಕ ಓ.ಎಲ್. ನಾಗಭೂಷಣ ಸ್ವಾಮಿ ಅವರು ಕನ್ನಡೀಕರಿಸಿದ್ದಾರೆ. ವಿದ್ಯಾಪತಿ ಮೈಥಿಲೀ ಭಾಷೆಯ 14ನೇ ಶತಮಾನದ ಮಹಾಕವಿ. ಅವರ ನೂರು ಪ್ರೇಮಕವಿತೆಗಳ ಸಂಕಲನದ ಕನ್ನಡಾನುವಾದವಿದು. ನಿಸರ್ಗದ ಅಂಶಗಳಾದ ಮಿಂಚು, ಮೋಡ, ಚಂದ್ರ, ಇರುಳು, ತಾವರೆ, ದುಂಬಿ, ಮಹಾನ್ ಪ್ರೇಮಿಗಳಾದ ರಾಧಾ ಕೃಷ್ಣರೊಡನೆ ಅವರ ಪ್ರೀತಿ, ವಿರಹ, ಆವೇಗ, ಉದ್ವೇಗ, ದುಃಖ, ಸಂತೋಷಗಳೊಡನೆ ಬೆಸುಗೆ ಮಾಡಿರುವುದೇ ವಿದ್ಯಾಪತಿ ಕವಿತೆಗಳ ವೈಶಿಷ್ಟ್ಯವಾಗಿದೆ. ಜಯದೇವನ ಗೀತಗೋವಿಂದದ ಪ್ರಭಾವವನ್ನು ಕಾಣಬಹುದಾಗಿದೆ. ಮಹಾಕವಿ ವಿದ್ಯಾಪತಿ ಹುಟ್ಟಿದ್ದು ಇಂದಿನ ಬಿಹಾರದ ಮಧುಬನಿಯಲ್ಲಿರುವ ಚಶಾಪಿ ಎಂಬ ಹಳ್ಳಿಯಲ್ಲಿ. ಆತ ಮಿಥಿಲಾ ಪ್ರಾಂತ್ಯದಲ್ಲಿ ತನ್ನ ಬಹುಭಾಗವನ್ನು ಕಳೆದನೆಂದು, ಮಿಥಿಲಾದ ರಾಜ ಕೀರ್ತಿಸಿಂಹನ ಆಶ್ರಯದಲ್ಲಿದ್ದು, ‘ಕೀರ್ತಿಲತಾ’ ಎಂಬ ಕಾವ್ಯ ರಚಿಸಿದನೆಂಜು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಸಾಹಿತ್ಯದ ಮಾರ್ಗ ಶೈಲಿಗೆ ಭಿನ್ನವಾಗಿ ಛಂದೋಬದ್ಧ ಕಾವ್ಯಕ್ಕೆ ಹೊರತಾಗಿರುವ ವಿದ್ಯಾಪತಿಯ ಈ ಪ್ರೇಮಗೀತೆಗಳು ಅತ್ಯಂತ ವಿಶಿಷ್ಟವಾಗಿವೆ. ಮೂಲ ಕವಿತೆಗಳಿಗೆ ದಕ್ಕೆಯಾಗದಂತೆ ಅಷ್ಟೇ ಸರಳ ಭಾಷೆಯಲ್ಲಿ ಓ.ಎಲ್. ನಾಗಭೂಷಣಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಓ. ಎಲ್. ನಾಗಭೂಷಣಸ್ವಾಮಿ
(22 September 1953)

ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953,  ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್  (1873) , ಎಂ.ಎ. ಕನ್ನಡ(1975)ಪದವಿ,  ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ,  ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998).  ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...

READ MORE

Related Books