ಷಾಜಹಾನರ ನಖಾಬ್

Author : ಸ. ರಘುನಾಥ

Pages 64

₹ 50.00




Year of Publication: 2011
Published by: ವಿಹಾ ಪುಸ್ತಕ

Synopsys

’ಷಾಜಹಾನರ ನಖಾಬ್’ ತೆಲುಗು ಕವಯಿತ್ರಿ ಷಾಜಹಾನರ ನಖಾಬ್‌ನ ಹಸ್ತಪ್ರತಿಯ ಕನ್ನಡ ರೂಪ.ಒಂದು ಭಾಷಾ ಸಂಸ್ಕೃತಿಗೆ 'ಅಪರಿಚಿತ'ವಾದ ಕೃತಿಯನ್ನು 'ಸುಪರಿಚಿತ'ವನ್ನಾಗಿ ಮಾಡುವುದೆ ಅನುವಾದ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಸ. ರಘುನಾಥ ಅವರ ಶ್ರಮ ಯಶಸ್ಸು ಕಂಡಿದೆ.

ಸಮಕಾಲೀನ ಸಂದರ್ಭದಲ್ಲಿ  ಸ್ತ್ರೀವಾದಿ ವಿಚಾರಧಾರೆಯ ಹಿನ್ನೆಲೆಯಿಂದ ತಮ್ಮ ಕೃತಿಯಲ್ಲಿ ಷಾಜಹಾನ್ ಧಾರ್ಮಿಕ ಪ್ರತಿವಾದಿಯಾಗಿಯೆ ತಮ್ಮ ಗಟ್ಟಿ ದನಿಯನ್ನು ಎತ್ತಿದ್ದಾರೆ. ವಿಶ್ವದ ಪ್ರಮುಖ ಧರ್ಮಗಳಲ್ಲಿ ಇಸ್ಲಾಂ ಧರ್ಮ ಮಾತ್ರ ಹೆಣ್ಣಿನ ಮೇಲೆ ಹೆಚ್ಚು ನಿರ್ಬಂಧಗಳನ್ನು ಹೇರದೆ ಅವಳಿಗೆ ಸ್ವಾತಂತ್ರ್ಯವನ್ನು ನೀಡಿ ಉದಾರವಾಗಿ ನಡೆದುಕೊಂಡಿದೆ ಎಂದು ಹೇಳಲಾಗುತ್ತದೆ. ಇಂಥ ಅಭಿಪ್ರಾಯಗಳ ವಿರುದ್ಧ ಸೆಡ್ಡುಹೊಡೆದು ನಿಂತಿರುವ ಷಾಜಹಾನ್ ಹೇಳುತ್ತಾಳೆ: ಹುಟ್ಟಿದಂದಿನಿಂದ ಚಾಂದನಿಯ ರುಚಿಯರಿಯದೆ, ಮಳೆಯ ರುಚಿ ತಿಳಿಯದೆ, ವಸಂತದ ರುಚಿಯನ್ನೂ ನೋಡದೆ ಬೆಳೆದು, ನಿರ್ಬಂಧಗಳ ಸರಹದ್ದುಗಳಲ್ಲಿ ಗುಲಾಮಳಾಗಿ ಬೆಳೆದ ಹೆಣ್ಣು, ಮುಸ್ಲಿಂ ಮಹಿಳೆ ಹಲವು ನಿರ್ಬಂಧಗಳ ನಡುವೆ ಬಂಧಿಯಾಗಿದ್ದಾಳೆ. ಆಕೆ ಸ್ವಂತಿಕೆಯೆ ಇಲ್ಲದ ಗುಲಾಮಳು. ಮಾನವ ಪ್ರಕೃತಿಯ ಮಗುವಾಗಿದ್ದರೂ ಆಕೆ ನಿಸರ್ಗದೊಂದಿಗೆ ಸಂಪರ್ಕ ಪಡೆದಿಲ್ಲ. ಹಾಗಾಗಿ ಅನ್ಯಳಾಗಿ ಅನಾಥಳಾಗಿ ಬೆಳೆದಿದ್ದಾಳೆ. ಪ್ರಕೃತಿಯಲ್ಲಿನ ಬದಲಾವಣೆಗಳು ಮಾನವನಲ್ಲಿ ಉಂಟುಮಾಡುವ ಅಚ್ಚರಿ, ವಿಸ್ಮಯ, ಬೆರಗುಗಳ ಸಂಸರ್ಗದಿಂದ ದೂರವಾಗಿ ನಲಿವು ಕಾಣದ ಸೆರೆಯಲ್ಲಿ ಉಳಿದಿದ್ದಾಳೆ. 

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books