ಹೊಸದಿಕ್ಕಿನ ಹಾಡು

Author : ಕಬ್ಬಿನಾಲೆ ವಸಂತ ಭಾರದ್ವಾಜ್

₹ 120.00




Year of Publication: 2022
Published by: ಸಾಹಿತ್ಯ ಪ್ರಕಾಶನ,
Address: ಹುಬ್ಬಳ್ಳಿ: 580 020

Synopsys

ಲೇಖಕ ಕಬ್ಬಿನಾಲೆ ವಸಂತ ಭಾರದ್ವಾಜ ಅವರ ಅನುವಾದಿತ ಕವನ ಸಂಕಲನ ಹೊಸದಿಕ್ಕಿನ ಹಾಡು. ಪದ್ಮಶ್ರೀ ಕವಿಗಳು ಡಾ. ದೊಡ್ಡರಂಗೇಗೌಡ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ‘ಹೊಸದಿಕ್ಕಿನ ಹಾಡು ಮೂಲಕೃತಿಯನ್ನು ಸೃಜಿಸಿದ ಮಹನೀಯರು ನಮ್ಮ ಭವ್ಯ ಭಾರತದ ಮಹಾನ್ ಪ್ರಧಾನಿ ನರೇಂದ್ರ ಮೋದಿ ಅವರು. ಮೂಲತಃ ಕವಿ ಮನೋಧರ್ಮದವರು. ಸಂಸ್ಕೃತಿಯ ಸಾರಸರ್ವಸ್ವವನ್ನು ಅರಿತವರು. ಜಗತ್ತಿನ ಇಂದಿನ ರಾಜಕಾರಣದಲ್ಲಿ ಅಗ್ರಮಾನ್ಯ ಪಂಕ್ತಿಯಲ್ಲಿ ತಮ್ಮ ವಿನೂತನ ಕಾಣ್ಕೆಗಳಿಂದ ಹೆಸರು ಪಡೆದವರು. ಅವರು ಆಧುನಿಕ ಚಾಣಕ್ಯ!ವೈಜ್ಞಾನಿಕ ಭಾರತದ ರೂವಾರಿ, ದಾರ್ಶನಿಕ! ನವಭಾರತದ ನಿಂಆðಣದ ಕನಸನ್ನು ಸಾಕಾರ ಮಾಡಲು ಹೊರಟ ರಾಜಕೀಯ ಮುತ್ಸದ್ದಿ. ಅಂಥ ಹಿರಿಯ ಜೀವ ಆಗಾಗ ಬಿಡುವಿನ ವೇಳೆಯಲ್ಲಿ ಕವಿತೆಗಳನ್ನು ಬರೆದಿದ್ದಾರೆ ಎಂಬುದೇ ಹೆಮ್ಮೆಯ ವಿಷಯ. ಈ ಕವಿತೆಗಳನ್ನು ಅನುವಾದಿಸಿದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಮೂಲತಃ ಒಳ್ಳೆಯ ಕವಿಗಳು; ವಿದ್ವನ್ಮಣಿಗಳು. ಕನ್ನಡ ಭಾಷೆಯ ಆಮೂಲಾಗ್ರ ಸತ್ವವನ್ನು ತಿಳಿದವರು. ಕಾವ್ಯಪರಂಪರೆಯನ್ನು ಚೆನ್ನಾಗಿ ಬಲ್ಲವರು. ನಮ್ಮ ಪ್ರೀತಿಯ ಕನ್ನಡದ ಜಾಯಮಾನವನ್ನು ಅರಿತ ನುಡಿನಿಮಣರು, ಅವಧಾನಕಲಾಪ್ರವೀಣರು. ಛಂದಸ್ಸಿನ ಬಗೆಗೆ ತಲಸ್ಪರ್ಶಿ ಜ್ಞಾನಹೊಂದಿದೆ. ಬಹುಶ್ರುತ ಪಂಡಿತರು. ಮೂರು ಮಹಾಕಾವ್ಯಗಳನ್ನು ಸೃಷ್ಟಿಸಿದ ಮಹಾಕವಿಗಳು. ನಮ್ಮ ಕನ್ನಡದ ಕಣ್ವರ್ಷಿ ಬಿ.ಎಂ.ಶ್ರೀ ಅವರು 'ಇಂಗ್ಲಿಷ್ ಳನ್ನು ಕನ್ನಡಕ್ಕೆ ಸಮರ್ಪಕವಾಗಿ ಕೊಟ್ಟಂತೆ ಇಲ್ಲೂ ಡಾ. ಕಬ್ಬಿನಾಲೆ ಅವರು 'ಶ್ರೀ' ಅವರು ಸಾಧಿಸಿದ ಔನ್ನತ್ಯವನ್ನೇ ಮೆರೆದಿದ್ದಾರೆ ಎಂಬುದಾಗಿ ಬೆನ್ನುಡಿಯಲ್ಲಿ ಬರೆದಿದ್ದಾರೆ.

About the Author

ಕಬ್ಬಿನಾಲೆ ವಸಂತ ಭಾರದ್ವಾಜ್
(04 December 1961)

ಸಾಹಿತಿ, ಸಂಶೋಧಕ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು 1961 ಡಿಸೆಂಬರ್ 5ರಂದು ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಕಬ್ಬಿನಾಲೆಯಲ್ಲಿ ಜನಿಸಿದರು.  ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ. ಸಾಹಿತ್ಯ ರಚನೆ ಹಾಗೂ ಅಷ್ಟಾವಧಾನ ಕಾರ್ಯಕ್ರಮನಿರತರು.  ಪ್ರಮುಖ ಕೃತಿಗಳು: ನುಡಿಸು ಬಾ ಇಂಚರವ, ಮತ್ತೆ ಬರಲಿ ಭಾವಗೀತೆ (ಕವನ), ಯಕ್ಷಗಾನ ಛಂದೋಗತಿ; ಯಕ್ಷಗಾನ ಛಂದಸ್ಸು; ಪಳಂತುಳುಕಾವ್ಯ (ಸಂಶೋಧನೆ) ಪುರಂದರ ದಾಸರ ಪದೊಕುಲು (ತುಳುವಿಗೆ) ಅನುವಾದ. ಯಕ್ಷಗಾನ ಸಾಹಿತ್ಯ ಚರಿತ್ರೆ. ಇವರಿಗೆ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಬಹುಮಾನ, ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  ...

READ MORE

Related Books