ಉರಿಯ ನೆಳಲು

Author : ಬಿ. ಸುಜ್ಞಾನಮೂರ್ತಿ

Pages 164

₹ 120.00




Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ವೈಚಾರಿಕ ನೆಲೆಯಲ್ಲಿ ಸಮಾಜದ ಊನಗಳನ್ನು ಪ್ರಶ್ನಿಸಿದ ತೆಲುಗಿನ ಮೊದಲ ಕವಿ ವೇಮನ. ಕನ್ನಡದ ಸರ್ವಜ್ಞನನಂತೆ, ಸಂತ ಶಿಶುನಾಳ ಶರೀಫರಂತೆ ಯಾವತ್ತೂ ಆತ ಜನರ ಮಧ್ಯದಿಂದಲೇ ಅರಳಿದವನು. ಮೇಲ್ಜಾತಿಯ ಬಲ, ರಾಜಾಶ್ರಯದ ಬೆಂಬಲ ಎರಡೂ ಇಲ್ಲದೆ ಬದುಕಿದ ಆತನ ವಚನಗಳು ಮೌಢ್ಯ, ಜಾತಿ ಪದ್ದತಿ, ಅಸಮಾನತೆ, ಅಸ್ಪೃಶ್ಯತೆಯನ್ನು ಕಟುವಾಗಿ ಟೀಕಿಸಿದವು. 

ಆ ವಚನಗಳನ್ನು ಕನ್ನಡಿಗರೂ ಓದಲಿ ಎಂಬ ಸದುದ್ದೇಶದಿಂದ ಲಡಾಯಿ ಪ್ರಕಾಶನ ಪ್ರಕಟಿಸಿದೆ. ಕೃತಿಯ ಹೆಸರು ’ಉರಿಯ ನೆಳಲು’. ತೆಲುಗಿನ ಡಾ. ಎನ್. ಗೋಪಿ ಅವರು ಬರೆದ ಪುಸ್ತಕವನ್ನು ಹಿರಿಯ ಅನುವಾದಕ ಬಿ. ಸುಜ್ಞಾನ ಮೂರ್ತಿ ಕನ್ನಡೀಕರಿಸಿದ್ದಾರೆ. ವೇಮನನ ವಚನಗಳ ಹಿನ್ನೆಲೆ, ಸಾಮಾಜಿಕ ಸಂದರ್ಭವನ್ನು ವಿವರಿಸುತ್ತದೆ. ಅಲ್ಲದೆ ವಚನಗಳ ಸಾಮಾಜಿಕ ಮೌಲ್ಯವನ್ನೂ ತಿಳಿಸಲಾಗಿದೆ. ಆತನ ವಚನಗಳನ್ನೂ ಜೊತೆಯಲ್ಲಿಯೇ ಪ್ರಕಟಿಸಲಾಗಿದೆ. 

About the Author

ಬಿ. ಸುಜ್ಞಾನಮೂರ್ತಿ
(06 July 1960)

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...

READ MORE

Related Books