ಕನ್ನಂಬಾಡಿಯ ಚಿಣ್ಣರು

Author : ಮಾಯಾ.ಬಿ.ನಾಯರ್

Pages 184

₹ 180.00




Year of Publication: 2021
Published by: ಸ್ನೇಹ ಬುಕ್ ಹೌಸ್
Address: 163, 10 ನೇ ಮುಖ್ಯ ರಸ್ತೆ, ಶ್ರೀನಗರ, ಬೆಂಗಳೂರು -560050
Phone: 9845031335

Synopsys

ಕೇರಳದ ಮಕ್ಕಳ ಸಾಹಿತಿ ಡಾ.ರೆಜಿ ಡಿ. ನಾಯರ್ ಅವರ ಕೃತಿಯನ್ನು ‘ಕನ್ನಂಬಾಡಿಯ ಚಿಣ್ಣರು’ ಶಿರ್ಷಿಕೆಯಡಿ ಲೇಖಕಿ ಮಾಯಾ ಬಿ. ನಾಯರ್  ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶೋಚನೀಯ ಸ್ಥಿತಿಯಲ್ಲಿರುವ 48 ಸಾವಿರ ಸರಕಾರಿ ಶಾಲೆಗಳಲ್ಲಿನ ಶಿಕ್ಷಕರ ಮುಂದೆ ಸಮಸ್ಯೆಗಳ ಸರಮಾಲೆ ಇದೆ ಎನ್ನುವುದನ್ನು ಇಲ್ಲಿ ಹೇಳುತ್ತಾರೆ. ಸಾಮಾಜಿಕ, ಮಾನಸಿಕ, ಆರ್ಥಿಕ, ಸಾಂಸ್ಕೃತಿಕ ಸಮಸ್ಯೆಗಳನ್ನು ಮೆಟ್ಟಿನಿಂತು ಸಮಸ್ಯೆಗಳನ್ನು ಸೋಪಾನ ಮಾಡಿಕೊಂಡು ಸಾಧನೆಗೈದ ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಮೇಷ್ಟು ಮತ್ತು ಮಕ್ಕಳ ನಡುವಿನ ಸಂವಾದದ ಮುಖಾಂತರ ಚಿಂತೆಗಳನ್ನು ಚಿಂತನೆಯನ್ನಾಗಿ ಪರಿವರ್ತಿಸಿ, ಪರಿಹಾರ ಸೂಚಿಸುವ ಈ ಸಾಹಿತ್ಯ ಮಕ್ಕಳಿಗೂ ಶಿಕ್ಷಕರಿಗೂ ಹಿತವಾಗಿದೆ. ಉದಾಹರಣೆಗೆ ಅಜ್ಜಿಗೆ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದ ವಿದ್ಯಾರ್ಥಿ ರಾಹುಲ್ ಪಾತ್ರದ ಮುಖಾಂತರ ಮಕ್ಕಳಲ್ಲಿ ಹಿರಿಯರ ಬಗ್ಗೆ ಪ್ರೀತಿ, ಗೌರವ, ಕನಿಕರ ತೋರಿಸುವ ಸದ್ಗುಣವನ್ನು ಮಕ್ಕಳ ಮನದಲ್ಲಿ ತುಂಬಲಾಗಿದೆ. ಮಕ್ಕಳಲ್ಲಿ ಕುಟುಂಬದ ಅನ್ಯೋನ್ಯತೆ ಕುಟುಂಬದ ಸದಸ್ಯರಲ್ಲಿ ಸುಮಧುರ ಸಂಬಂಧ, ಸಹಕಾರ, ಸಹಾನುಭೂತಿ, ಸಂತೋಷಗಳ ಸಮ್ಮಿಶ್ರಣವನ್ನು ಹದವಾಗಿ ಬಿಂಬಿಸಿದ್ದಾರೆ. ಚಿಕ್ಕಮ್ಮ ಅರಿಶಿಣದ ಎಲೆಯಲ್ಲಿ ಮಾಡಿದ ಕಡುಬು ಕೊಡುವುದು ಇತ್ಯಾದಿ ಮಕ್ಕಳನ್ನು ಮುದಗೊಳಿಸುವ ತಿಂಡಿಗಳ ಮಹತ್ವ ತಿಳಿಸುತ್ತದೆ. ಮನಸ್ಸಿಗೆ ಯಾವುದೇ ಹೊಸ ಆಲೋಚನೆ ಬಂದರೆ ಒಂದು ನೋಟ್ ಬುಕ್ ಇಲ್ಲವೇ ಡೈರಿಯಲ್ಲಿ ಬರೆದಿಡಬೇಕು ಎಂದು ಹಿತವಾಗಿ ಮನದಟ್ಟು ಮಾಡುವ ಲೈಬ್ರರಿಯಲ್ಲಿನ ರಂಗಸ್ವಾಮಿ ಮಾಸ್ತರು, ಮಕ್ಕಳಲ್ಲಿ ಉತ್ತಮ ಹವ್ಯಾಸ ಬೆಳೆಸುವುದನ್ನು ಸೂಚಿಸುತ್ತದೆ. ಜೊತೆಗೆ ಓದದೇ ಧೂಳು ಹಿಡಿದ ಪುಸ್ತಕಗಳನ್ನು ಓದುಗರಿಗೆ ತಲುಪಿಸ ಬೇಕೆಂಬ ಕ್ರಮ ಓದಿನ ಮಹತ್ವ ತಿಳಿಸುತ್ತದೆ. ಧಾರಾಕಾರವಾಗಿ ಸುರಿಯುವ ಮಳೆಯಲ್ಲೂ ಅಮ್ಮ ಕೆಲಸಕ್ಕೆ ಹೋಗುವುದರಿಂದ ಸ್ತ್ರೀಶಕ್ತಿ ಗುಂಪು ಹೇಗೆ ಅಮ್ಮನಿಗೆ ಆಶ್ರಯ ಎಂದು ಸಮಾಜಿಕ ಸಹಕಾರದ ಮಹತ್ವ ತಿಳಿಸಿ, ಮಗನು 'ಅಮ್ಮ ನಾನು ಓದಿ ದೊಡ್ಡವನಾದ ಮೇಲೆ ನೀನು ಕೆಲಸಕ್ಕೆ ಹೋಗ ಬೇಕಾಗಿಲ್ಲ' ಎಂದು ಮಮಕಾರದಿಂದ ಹೇಳುವುದು, ಮಕ್ಕಳ ಮನದಲ್ಲಿ ಮಮತೆ ಮೊಳಕೆ ಒಡೆಯುವಂತೆ ಮಾಡುತ್ತದೆ.

About the Author

ಮಾಯಾ.ಬಿ.ನಾಯರ್

ಲೇಖಕಿ ಮಾಯಾ.ಬಿ.ನಾಯರ್ ಅವರು ಮೂಲತಃ ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ಕಾಜಿರಪ್ಪಳ್ಳಿ ತಾಲ್ಲೂಕಿನ ತಂಬಲಕ್ಕಾಡ್ ಗ್ರಾಮದವರು. ಡಿ.ಸಿಪಿ, ಬಿ.ಕಾಂ. ಎಂ.ಎ (ಸಮಾಜಶಾಸ್ತ್ರ), ಎಂ.ಎ (ಗ್ರಾಮೀಣಾಭಿವೃದ್ದಿ), ಎಂ.ಎ(ಪಬ್ಲಿಕ್ ಅಡ್ಮಿನಿಸ್ಟ್ರೇಷನ್), ಹಿಂದಿ (ರಾಷ್ಟಭಾಷಾ) ಪದವೀಧರರು. ತಂದೆ ಎ.ಆರ್. ಭಾಸ್ಕರನ್ ನಾಯರ್, ತಾಯಿ ಇಂದಿರಾ ದೇವಿ. ಕರ್ನಾಟಕದ ಜಿಲ್ಲಾ ಪಂಚಾಯತ್‌, ಸಚಿವಾಲಯ, ಉಪ ಮುಖ್ಯಮಂತ್ರಿಗಳ ಸಚಿವಾಲಯಗಳಲ್ಲಿ ಹಿರಿಯ ಅಧಿಕಾರಿಗಳ ಆಪ್ತಸಹಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಕಾವೇರಿ ನೀರಾವರಿ ನಿಗಮ ನಿಯಮಿತ, ವ್ಯವಸ್ಥಾಪಕ ನಿರ್ದೆಶಕರ ಆಪ್ತ ಕಾರ್ಯದರ್ಶಿ (ಬೆಂಗಳೂರು) ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: ಶ್ರೀ ಇನ್ನಸೆಂಟ್, ಮಲಯಾಳ ಚಿತ್ರರಂಗದ ಹಾಸ್ಯ ಸಾಮ್ರಾಟ ಹಾಗೂ ಮಾಜಿ ಸಂಸದರು, ಸಾವಿನ ಮನೆಯ ಕದವ ತಟ್ಟಿ( ...

READ MORE

Related Books