ಮಧುಶಾಲೆ

Author : ಲಕ್ಕೂರು ಆನಂದ

Pages 80

₹ 120.00




Year of Publication: 2021
Published by: ಚಂದ್ರಮ ಜಾಲ ವಾಹಿನಿ
Address: ಬೆಂಗಳೂರು
Phone: 9141122910

Synopsys

‘ಮಧುಶಾಲೆ’ ಡಾ. ದೇವರಾಜು ಮಹಾರಾಜು ಅವರು ತೆಲುಗಿಗೆ ಅನುವಾದಿಸಿದ್ದ ಹಿಂದಿಯ ಪ್ರಸಿದ್ಧ ಸಾಹಿತಿ ಡಾ. ಹರಿವಂಶರಾಯ ಬಚ್ಚನ ಅವರ ಕವಿತೆಗಳ ಕನ್ನಡಾನುವಾದ. ಲೇಖಕ ಲಕ್ಕೂರು ಆನಂದ ತೆಲುಗಿನಿಂದ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅನುವಾದದ ಕುರಿತು ಬರೆಯುತ್ತಾ ‘ಈ ಹಿಂದೆ ಅನೇಕ ಕವಿಗಳನ್ನು ಕಾವ್ಯದ ಮೂಲಕವೇ ಕನ್ನಡ ಸಾಹಿತ್ಯ ಲೋಕಕ್ಕೆ ಅನುವಾದಿಸಿದ ನಂತರ, ಮತ್ತೆ ನನ್ನ ಕಣ್ಣು ಅನುವಾದದ ಕಡೆಗೆ ಹೊರಳಲಿಲ್ಲ, ಆ ಸಮಯದಲ್ಲಿ ಯಾದೃಚ್ಛಿಕವಾಗಿ ಮಧುಶಾಲೆ ನನ್ನನ್ನು ಆಕರ್ಷಿಸಿತು ಮಧುವನ್ನು ಇತಿವೃತ್ತವಾಗಿ ದೊಡ್ಡ ಕಾವ್ಯವನ್ನು ಓದುಗರಿಗೆ ಉಣಬಡಿಸಿದ ಹರಿವಂಶ್ ರಾಯ್ ಕುಡಿತಕ್ಕೆ ಗುಲಾಮನಾಗಲಿಲ್ಲ. ಮಧುಶಾಲೆಯನ್ನು ಬರೆಯುವ ಕಾಲಘಟ್ಟದಲ್ಲಿ ಆತನಿಗೆ ಮಧುವಿನ ರುಚಿಯೂ ಕೂಡ ತಿಳಿಯದೆಂಬ ವಿಷಯವನ್ನು ತಿಳಿದುಕೊಂಡ ಮೇಲೆ ಆತನ ಕುರಿತು ಒಂದು ಗೌರವ ಭಾವ ಉಂಟಾಯಿತು, ಅದಕ್ಕೆ ಅನುವಾದ ಮಾಡಲು ಮುಂದಾದೆ’ ಎನ್ನುತ್ತಾರೆ ಕವಿ ಲಕ್ಕೂರು ಆನಂದ. ಕನ್ನಡ ಸಾಹಿತ್ಯ ಲೋಕಕ್ಕೆ ಪದ್ಮಭೂಷಣ ಹರಿವಂಶ್ ರಾಯ್ ಅವರನ್ನು ಪರಿಚಯ ಮಾಡಿಸುವ ಸಲುವಾಗಿ ಮಾಡಿದ ಸಣ್ಣ ಪ್ರಯತ್ನವಿದು ಎನ್ನುತ್ತಾರೆ. ಹಿಂದಿಯಿಂದ ಇಂಗ್ಲಿಷಿಗೆ, ಇಂಗ್ಲಿಷಿನಿಂದ ತೆಲುಗಿಗೆ ನಂತರ ಕನ್ನಡಕ್ಕೆ ನೇರವಾಗಿ ಮಾಡಿದ ಅನುಸೃಜನೆಯೇ ಈ ಕೃತಿ.

About the Author

ಲಕ್ಕೂರು ಆನಂದ

ಲಕ್ಕೂರು ಸಿ. ಆನಂದ ಅವರು ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ- ಬಂಡಾಯ ಕಾವ್ಯ ಮಾರ್ಗದ ಮೂರನೇ ತಲೆಮಾರಿನವರಾದ ಅವರು ಸೃಜನಶೀಲ ಬರಹಗಾರ. ಕವಿ, ವಿಮರ್ಶಕ, ಅನುವಾದಕರಾಗಿಯೂ ಗುರುತಿಸಿಕೊಂಡಿರುವ ಆನಂದ ಅವರ ಮಾತೃಭಾಷೆ ತೆಲುಗು. ಪ್ರಸ್ತುತ ಕೆಂಗೇರಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಕ್ಕೂರು ಆನಂದ ಅವರು ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ. ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಆನಂದ ಅವರು ಆಳವಾದ ಅಧ್ಯಯನ ನಡೆಸಿದ್ದಾರೆ. ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ಅತ್ಯುತ್ತಮ ಆತ್ಮ ...

READ MORE

Related Books