ಜೀರೋ ಪಾಯಿಂಟ್

Author : ಎಲ್. ಎನ್. ಮುಕುಂದರಾಜ್

Pages 48

₹ 60.00




Year of Publication: 2001
Published by: ಅರ್ಕಾವತಿ ಪ್ರಕಾಶನ
Address: ನಂ. 83/2, 1 ನೆ ಮುಖ್ಯರಸ್ತೆ, ರಹೇಜ ಉದ್ಯಾನವನದ ಎದುರು, ಗೋವಿಂದರಾಜ ನಗರ, ಬೆಂಗಳೂರು -560040

Synopsys

ಆಧುನಿಕೋತ್ತರ ಬಂಗಾಲಿ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿರುವ ಮೂವರು ಹೆಸರಾಂತ ಸಾಹಿತಿಗಳೂ, ಅನುವಾದಕರೂ, ಕವಿಗಳೂ ಆಗಿರುವ ಮೀರಾ ಚಕ್ರವರ್ತಿ, ಎಂ.ಆರ್‍. ಕಮಲ, ಎಲ್.ಎನ್. ಮುಕುಂದರಾಜ್ , ಅನುವಾದಿಸಿದ್ದಾರೆ.

’ಜೀರೋ ಪಾಯಿಂಟ್’ ಕೃತಿಯು ಮೂಲ ಬಂಗಾಲಿ ಕಾವ್ಯದ ಕನ್ನಡ ರೂಪಾಂತರ. ಇಲ್ಲಿರುವ ಎಲ್ಲಾ ಕವಿತೆಗಳು ಪ್ರಸಿದ್ದ ಬಂಗಾಲಿ ಸಾಹಿತಿಗಳಾದ ರಜತ್ ಶುಭ್ರ ಗುಪ್ತಾ, ಪ್ರಭಾತ್ ಚೌಧುರಿ, ರತನ್ ದಾಸ್, ಕಾಜಲ್ ಸೇನ್, ರಾಮ್ ಕಿಶೋರ್‍ ಭಟ್ಟಾಚಾರ್‍ಯ, ಅಮಿತಾಬ್ ಗುಪ್ತಾ, ಸುಜೀತ್ ಸರ್ಕಾರ್‍ , ನಾಸೀರ್‍ ಹುಸೇನ್ , ರಮಾ ಘೋಷ್, ಮತಿ ಮುಖ್ಯೋಪಾಧ್ಯಾಯ , ಇನ್ನೂ ಅನೇಕರ ರಚನೆಯನ್ನು ಕನ್ನಡೀಕರಿಸಲಾಗಿದೆ.  

ಪುಸ್ತಕ ಶೀರ್ಷಿಕೆಯನ್ನು ಹೊತ್ತ ’ಜೀರೊ ಪಾಯಿಂಟ್’ ಈ ಪುಸ್ತಕದ ಮೊದಲ ಕಾವ್ಯವಾಗಿದೆ.

ಬಯಕೆಯ ಭಾಷೆ, ಮೀನಿನ ಅನ್ನ ಜೀವನ, ನಕ್ಷತ್ರ ನಗರಿಯ ಕಿನ್ನರಿ ಕಥೆ, ಸನ್ಯಾಸ, ಬೇಜವಬ್ದಾರಿಯ ಮಾತು, ತನ್ನದೇ ಆದ ಬಿಸಿಲಿಗಾಗಿ, ಪಿಕ್ ನಿಕ್ ಪಾರ್ಟಿ, ಪದಾವಳಿ ಒಪ್ಪಂದ, ಬೆಂಕಿಯ ರುಜು, ಹೀಗೆ ಸುಮಾರು ನಲವತ್ತೊಂಭತ್ತು ಕವಿತೆಗಳ ಗುಚ್ಛ ಇಲ್ಲಿದೆ.

About the Author

ಎಲ್. ಎನ್. ಮುಕುಂದರಾಜ್

ಎಲ್. ಎನ್. ಮುಕುಂದರಾಜ್  ಹೊಸ ತಲೆಮಾರಿನ ಹೆಸರಾಂತ ಲೇಖಕರು, ಕನ್ನಡ ಎಂ.ಎ. ಪಡೆದ ಇವರು ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. - ದೇಶ ಕೋಶ ದಾಸವಾಳ, ನಿರಂಕುಶ ಮುಂತಾದ ಕವನ ಸಂಕಲನಗಳು, ವೈಶಂಪಾಯನ ತೀರ, ಇಗೋ ಪಂಜರ ಅಗೋ ಮುಗಿಲು, ಸಂಗ್ರಾಮ ಭಾರತ ಮುಂತಾದ ನಾಟಕಗಳು, ಅನೇಕ ಜೀವನ ಚರಿತ್ರೆಗಳು ಹಾಗೂ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ ನಟಿಸಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಲ್ಲದೆ, ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಸುವರ್ಣ ಸಂಭ್ರಮಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಶಿಕ್ಷಕ ...

READ MORE

Related Books