ರವೀಂದ್ರನಾಥ ಠಾಕೂರ್ ಕವನಗಳ ಓದು

Author : ಸಿ.ಪಿ. ನಾಗರಾಜ

Pages 76

₹ 100.00




Year of Publication: 2024
Published by: ನಾಗು ಸ್ಮಾರಕ ಪ್ರಕಾಶನ
Address: 75, 5ನೆಯ ಕ್ರಾಸ್, ಎ ಬ್ಲಾಕ್, ಕ್ರಿಷ್ಣ ಗಾರ್ಡನ್, ಆರ್.ವಿ. ಕಾಲೇಜು ಪೋಸ್ಟ್, ಬೆಂಗಳೂರು - 560059
Phone: 9986347521

Synopsys

‘ರವೀಂದ್ರನಾಠ ಠಾಕೂರ್ ಕವನಗಳ ಓದು’ ಲೇಖಕ ಸಿ.ಪಿ. ನಾಗರಾಜ ಅವರ ಕೃತಿ. ಕೃತಿಯ ಕುರಿತು ಬರೆದಿರುವ ಅವರು ‘ರವೀಂದ್ರನಾಥ ಠಾಕೂರ್ ಅವರ ಕವನ ಸಂಕಲನಗಳಿಂದ ಆಯ್ದ ಹದಿನಾರು ಕವನಗಳನ್ನು ಓದುಗರ ಗಮನಕ್ಕೆ ತರಬೇಕೆಂಬ ಆಸೆಯಾಯಿತು. ಠಾಕೂರ್ ಅವರ ಕವನಗಳನ್ನು ಮೊದಲ ಬಾರಿ ಓದುವವರಿಗೆ ನೆರವಾಗಲೆಂಬ ಉದ್ದೇಶದಿಂದ ಕವನದಲ್ಲಿ ಜತೆಗೂಡಿರುವ ಪದಗಳನ್ನು ಬಿಡಿಸಿ ಬರೆದು, ಪದಗಳಿಗೆ ತಿರುಳನ್ನು ತಿಳಿಸಿ, ಕವನದಲ್ಲಿ ನಿರೂಪಣೆಗೊಂಡಿರುವ ಸಂಗತಿಗಳನ್ನು ವಿವರಿಸಿದ್ದೇನೆ ಎಂದಿದ್ದಾರೆ.

ಜೊತೆಗೆ ಗುರುಗಳಾದ ಕೆ.ವಿ.ನಾರಾಯಣ ಅವರು ಈ ಬರಹವನ್ನು ನೋಡಿ 'ಹೊಸ ತಲೆಮಾರಿನ ಓದುಗರಿಗೆ ಈ ರೀತಿಯ ಬರಹ ಉಪಯೋಗಕ್ಕೆ ಬರಬಹುದು' ಎಂದು ಹೇಳಿ, ನನ್ನ ಬರವಣಿಗೆಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ. 

ಈ ಕೃತಿಯಲ್ಲಿನ ಕವನಗಳನ್ನು 1. ಜಿ.ರಾಮನಾಥ ಭಟ್ (ಅನುವಾದಕರು): ರವೀಂದ್ರ ಕಾವ್ಯ ಸಂಚಯ 2. ಜೆ.ರಾಮಲಿಂಗೇಗೌಡ (ಅನುವಾದಕರು): ಗುರುದೇವ ರವೀಂದ್ರ ಗೀತಾಂಜಲಿ 3. ಕುವೆಂಪು (ಅನುವಾದಕರು): ಕುಟೀಚಕ ಕವನ ಸಂಕಲನ, ಈ ಮೂರು ಕೃತಿಗಳಿಂದ ಆಯ್ದುಕೊಂಡಿದ್ದಾರೆ.

About the Author

ಸಿ.ಪಿ. ನಾಗರಾಜ

ಬರಹಗಾರ ಸಿ.ಪಿ ನಾಗರಾಜು ಅವರು 1945ರಲ್ಲಿ ಪುಟ್ಟೇಗೌಡ-ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಜನಿಸಿದರು. ಎಂ.ಎ, ಪಿಎಚ್.ಡಿ ವ್ಯಾಸಂಗ ಮಾಡಿ ಸ್ತುತ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುದ್ರಿತ ನಾಟಕ ಕೃತಿಗಳು: ಭಾಗೀರಥಿ, ಅಂಬೆ, ಹಾವು, ಅಂಗಿಬಟ್ಟೆ, ಒಂದು ರೂಪಾಯಿ, ಕಳ್ಳರಿದ್ದಾರೆ ಎಚ್ಚರಿಕೆ, ಹೆಣದ ಹಣ, ಮೂರು ಸಾಮಾಜಿಕ ನಾಟಕಗಳು. ಮುದ್ರಿತ ಗದ್ಯ ಕೃತಿಗಳು: ಕರಿಯನ ಪುರಾಣ, ಕನಕನ ಅವ್ವ, ಹಳ್ಳಿಗಾಡಿನ ರೂವಾರಿ, ಡಾ.ಬಂದೀಗೌಡ, ಆಣೆ ಪ್ರಮಾಣಗಳು, ಬಯ್ಗುಳ, ಸರ್ವಜ್ಞ ವಚನಗಳ ಓದು, ಅಲ್ಲಮ ವಚನಗಳ ಓದು, ಶಿವಶರಣೆಯರ ವಚನಗಳ ಓದು, ಶಿವಶರಣರ ವಚನಗಳ ಓದು, ಬಸವಣ್ಣನ ...

READ MORE

Related Books