ಕಾವ್ಯೋದ್ಯಾನ

Author : ಎಲ್.ಎಸ್. ಶೇಷಗಿರಿರಾವ್

Pages 192

₹ 195.00




Year of Publication: 2018
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026617100/ 26617755

Synopsys

ವಿಮರ್ಶಕ, ಲೇಖಕ ಪ್ರೋ. ಎಲ್. ಎಸ್. ಶೇಷಗಿರಿ ರಾವ್ ಅವರ ಕೃತಿ ’ ಕಾವ್ಯೋದ್ಯಾನ’.

ಪ್ರಸ್ತುತ ಈ ಸಂಗ್ರಹದಲ್ಲಿ ಇಂಗ್ಲಿಷ್ ಮತ್ತು ಅಮೆರಿಕದ ಕವಿಗಳ ಕವನಗಳನ್ನು ಆರಿಸಿ ಕನ್ನಡಕ್ಕೆ ತರಲಾಗಿದೆ. ಕವಿಗಳ ಜೀವನ ಪರಿಚಯ, ಕಾವ್ಯದ ಚರಿತ್ರೆಯ ಬೇರೆ ಬೇರೆ ಭಾಗಗಳ ಪರಿಚಯ ಎರಡನ್ನೂ ಈ ಕೃತಿ ಪರಿಚಯಿಸುತ್ತದೆ.

ಜೆಫ್ರಿ ಛಾಸರ್‍ : ’ದಿ ಪ್ರಲೋಗ್’ , ವಿಲಿಯಂ ಶೇಕ್ಸ್ ಪಿಯರ್‍ : ಸುನೀತಗಳು, ಜಾನ್ ಡನ್ : ಕೆಲವು ಕವನಗಳು, ಜಾರ್ಜ್ ಹರ್ಬರ್ಟ್ : ದಿ ಕಾಲರ್‍, ಥಾಮಸ್ ಗ್ರೇ : ಎನ್ ಎಲಿಜಿ ರಿಟನ್ ಇನ್ ಎ ಕನ್ ಟ್ರಿ ಚರ್ಚ್‌ಯಾರ್ಡ್, ವಿಲಿಯಂ ಬ್ಲೇಕ್ : ದಿ ಟೈಗರ್‍, ಪರ್ಸಿ ಬಿಸೆ ಷೆಲಿ : ಕೆಲವು ಕವನಗಳು, ಜಾನ್ ಕೀಟ್ಸ್ : ಲ ಬೆಲ್ ಡೇಮ್ ಸ್ಯಾನ್ಸ್ ಮರ್ಸಿ, ಕೆಲವು ಪ್ರಗಾಥಗಳು, ಎಸ್.ಟಿ.ಕೋಲ್ ರಿಜ್ :  ದಿ ರೈಮ್ ಆಫ್ ದಿ ಏನ್ ಷಂಟ್ ಮ್ಯಾರಿನರ್‍, ಎಮಿಡಿ ಡಿಕಿನ್ ಸನ್ : ಸಾವಿನ ಕವನಗಳು, ಟಿ.ಎಸ್.ಎಲಿಯಟ್ : ದಿ ವೇಸ್ಟ್ ಲ್ಯಾಂಡ್, ಡಬ್ಲ್ಯೂ ಎಚ್. ಆಡೆನ್ : ಇನ್ ಮೆಮರಿ ಆಫ್ ಡಬ್ಲ್ಯೂ ಬಿ.ಯೇಟ್ಸ್, ಮುಂತಾದ ಕವಿಗಳ ಕವನಗಳ ಕನ್ನಡಾನುವಾದದ ಸಂಗ್ರಹ ಈ ಪುಸ್ತಕದಲ್ಲಿದೆ.

About the Author

ಎಲ್.ಎಸ್. ಶೇಷಗಿರಿರಾವ್
(16 February 1925 - 20 December 2019)

ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಲ್.ಎಸ್. ಶೇಷಗಿರಿರಾವ್ ಅವರು ಪ್ರಬುದ್ಧ ವಿಮರ್ಶಕರೆಂದೇ ಖ್ಯಾತರು. ತಂದೆ ಸ್ವಾಮಿರಾವ್- ತಾಯಿ ಕಮಲಾಬಾಯಿ. 1925ರ ಫೆಬ್ರುವರಿ 16ರಂದು ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೊನೆಯಲ್ಲಿ ಕೆಲವುಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 1947-50ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ...

READ MORE

Related Books