ಎಷ್ಟೊಂದು ದೋಣಿಗಳಲ್ಲಿ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 120

₹ 90.00




Year of Publication: 2013
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-4
Phone: 08362462718

Synopsys

ಹಿಂದಿಯ ಪ್ರಮುಖ ಕವಿಗಳ ಕವಿತೆಗಳನ್ನು ಕವಿ-ಅನುವಾದಕ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಅನುವಾದಿಸಿದ್ದಾರೆ. ಈ ಸಂಕಲನದಲ್ಲಿ 54 ಕವಿತೆಗಳಿವೆ.  ಹಿಂದಿಯ ಪ್ರಸಿದ್ಧ ಕವಿಗಳಾದ ಅಜೇಯ್, ಹರಿವಂಶರಾಯ್ ಬಚ್ಚನ್, ದಿನಕರ್, ಧರ್ಮವೀರ್‌ ಭಾರತೀ, ನೀರಜ್ ಮುಂತಾದವರ ಕವಿತೆಗಳು ಇಲ್ಲಿವೆ. - ತಮ್ಮ ಸೃಜನಶೀಲ ಪ್ರತಿಭೆಯಿಂದ ಪಟ್ಟಣಶೆಟ್ಟರು ಹಿಂದಿಯ ಹಲವಾರು ಶ್ರೇಷ್ಠ ಕೃತಿಗಳನ್ನು ಅನುವಾದಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಆಯ್ಕೆಯ ಉತ್ಕೃಷ್ಟತೆಯ ಜೊತೆಗೆ ಅವರು ಮಾಡುವ ಅನುವಾದವು ಅನುಸೃಷ್ಟಿಯೇ ಆಗಿರುತ್ತದೆ. ಅವರು ಕನ್ನಡದ ಅತ್ಯಂತ ಸಂವೇದನಶೀಲ ಕವಿಯಾಗಿರುವುದರಿಂದ ಇಲ್ಲಿಯ ಕವಿತೆಗಳು ಕನ್ನಡದ್ದೇ ಅನ್ನಿಸುವಂತಿವೆ... '

ಭಾಷೆಯ ವಿಷಯದಲ್ಲಿ ಅವರು ವಹಿಸುವ ಎಚ್ಚರ, ನುಡಿಗಟ್ಟುಗಳ ಬಳಕೆ ಮತ್ತು ಅಭಿವ್ಯಕ್ತಿಯ ಅನನ್ಯತೆಯಿಂದಾಗಿ ಅನುವಾದಕ್ಕೆ ವಿಶೇಷ ಸೌಂದರ್ಯ ಸಿದ್ದಿಸುವುದಕ್ಕೆ ಪ್ರಸ್ತುತ ಕವಿತೆಗಳು ಸಾಕ್ಷಿಯಾಗಿವೆ. ಅಲ್ಲದೆ ಹಿಂದೀ ಭಾಷೆಯ ಲಯ ಬಾಧಿಸದಂತೆ, ಅದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಲಯ ವಿನ್ಯಾಸ ಕಟ್ಟಿಕೊಟ್ಟಿರುವುದು ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಸ್ಪೋಪಜ್ಞತೆಯಿಂದ ಮಾತ್ರ ಸಾಧ್ಯವಾಗಿದೆ.

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books