ಉಭಯವಾಣಿ

Author : ಸಿ. ನಾಗಣ್ಣ

Pages 80

₹ 40.00




Year of Publication: 2003
Published by: ಅಭಿರುಚಿ ಪ್ರಕಾಶನ
Address: ನಂ- 386, 14ನೇ ಮುಖ್ಯರಸ್ತೆ, 3ನೇ ತಿರುವು, ಸರಸ್ವತಿಪುರಂ, ಮೈಸೂರು- 570009
Phone: 9980560013

Synopsys

‘ಉಭಯವಾಣಿ’ ಸಿ. ನಾಗಣ್ಣ ಅವರ ಅನುವಾದಿತ ಕವನಗಳಾಗಿವೆ. ಜಗತ್ತಿನ ಯಾವ ಮೂಲೆಯಲ್ಲೇ ಕುಳಿತು ಸಾಹಿತಿ ಕವಿಗಳು ಸಾಹಿತ್ಯರಚನೆಗೈದರೂ ಎಲ್ಲೆಡೆ ಅದರ ಧ್ವನಿ ಕಳಕಳಿ ಒಂದೇ ಆಗಿರುತ್ತದೆಂಬ ಅಂಶವನ್ನು ಅನುವಾದಿತ ಸಾಹಿತ್ಯದಲ್ಲಿ ಧಾರಾಳ ವಾಗಿ ಕಾಣಬಹುದು.

About the Author

ಸಿ. ನಾಗಣ್ಣ

ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...

READ MORE

Reviews

ಹೊಸತು-2004- ಸೆಪ್ಟಂಬರ್‌

ಪ್ರಮುಖವಾಗಿ ಇಂಗ್ಲಿಷ್ ಭಾಷೆಯಿಂದ ಮತ್ತು ಭಾರತೀಯ ಭಾಷೆಗಳಿಂದ ಅನುವಾದಿಸಲಾದ ಕವನಗಳು. ಆ ದನಿ' ಎಂಬ ಮೊದಲ ಭಾಗದಲ್ಲಿ ಪಾಶ್ಚಾತ್ಯ ಹಾಗೂ ಈ ದನಿ'' ವಿಭಾಗದಲ್ಲಿ ದೇಶೀಯವಾದ ಗುರುತುಗಳು ಸ್ಪಷ್ಟವಾಗಿ ಕಂಡುಬರುತ್ತಿವೆ. ಕವನಗಳ ಸ್ವರೂಪ ನಿರ್ಗತಿಕ ಜನಾಂಗ ಮತ್ತು ಕ್ರೌರ್ಯಕ್ಕೆ ಬಲಿಯಾದ ಜನತೆಯ ಪರವಾಗಿದೆ. ಜಗತ್ತಿನ ಯಾವ ಮೂಲೆಯಲ್ಲೇ ಕುಳಿತು ಸಾಹಿತಿ ಕವಿಗಳು ಸಾಹಿತ್ಯರಚನೆಗೈದರೂ ಎಲ್ಲೆಡೆ ಅದರ ಧ್ವನಿ ಕಳಕಳಿ ಒಂದೇ ಆಗಿರುತ್ತದೆಂಬ ಅಂಶವನ್ನು ಅನುವಾದಿತ ಸಾಹಿತ್ಯದಲ್ಲಿ ಧಾರಾಳ ವಾಗಿ ಕಾಣಬಹುದು. ಮಿಡಿಯುವ ಮನಸ್ಸು ಅಲ್ಲಿ ಮಾನವತೆ ರೂಪಧಾರಣೆ ಮಾಡಿರುತ್ತದೆ. ಎಲ್ಲ ಕಡೆಯೂ ಜನಪರ ನೀತಿ ಧೋರಣೆಗಳು ಒಂದೇ ಆಗಿರುತ್ತವೆ ಎಂಬುದು ಜಗತ್ತಿನ ಸಾಹಿತ್ಯ ತೋರಿಸುತ್ತಿದೆ. ಕನ್ನಡದ ಜಾಯಮಾನಕ್ಕೆ ಒಗ್ಗುವಂತಹ ಅನುವಾದ.

Related Books