ಕಪ್ಪು ಕವಿತೆ

Author : ಎಚ್.ಎಸ್. ರಾಘವೇಂದ್ರರಾವ್

Pages 264

₹ 200.00




Year of Publication: 2013
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಆಫ್ರಿಕನ್ ಖ್ಯಾತ ಕವಿಗಳ ಕವಿತೆಗಳನ್ನು ಎಚ್.ಎಸ್. ರಾಘವೇಂದ್ರ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನೋವನ್ನೇ ಉಂಡು ಬೆಳೆದ ಆಫ್ರಿಕಾದ ಕವಿಗಳು ನೋವಿನೆಳೆ ಹಿಡಿದೇ ನೇಯುವ ಕಾವ್ಯದ ಘಮಲಿಗೆ ಅದರದೇ ಆದ ಮಹತ್ವವಿದೆ. ಆದರೆ ಕನ್ನಡಕ್ಕೆ ಇಂಗ್ಲಿಷ್ ನಿಂದ ಬಂದ ಸಾಹಿತ್ಯದಷ್ಟು ಆಫ್ರಿಕನ್ ಸಾಹಿತ್ಯ ಬಂದದ್ದು ಅತೀ ಕಡಿಮೆ. ಸಂಸ್ಕೃತದಿಂದ ಅನುವಾದಗೊಂಡ ಸಾಹಿತ್ಯದಷ್ಟು ಸಹ ಆಫ್ರಿಕಾ ಸಾಹಿತ್ಯ ಕನ್ನಡಕ್ಕೆ ಅನುವಾದಗೊಂಡಿಲ್ಲ. ಆಫ್ರಿಕಾ ಮತ್ತು ನಮ್ಮ ಹಾಡುಪಾಡುಗಳಲ್ಲಿ ಎಷ್ಟೋ ಹೋಲಿಕೆಗಳಿವೆ. ಆದರೆ, ಅವರ ನೋವು-ನಷ್ಟಗಳು ನಮ್ಮದಕ್ಕಿಂತ ಗಾಢವಾದವು, ಹಾಗಾಗಿಯೇ ಆಫ್ರಿಕನ್ ಸಾಹಿತ್ಯಕ್ಕೆ ಮತ್ತಷ್ಟು ಸತ್ವವಿದೆ. ಆ ಕಾರಣದಿಂದಲೇ ಆಫ್ರಿಕನ್ ಪ್ರಮುಖ ಕವಿಗಳ ಕವಿತೆಗಳನ್ನು ’ಕಪ್ಪು ಕವಿತೆ’ ಕೃತಿಯಲ್ಲಿ  ಎಚ್.ಎಸ್.ರಾಘವೇಂದ್ರ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 

About the Author

ಎಚ್.ಎಸ್. ರಾಘವೇಂದ್ರರಾವ್
(01 August 1948)

ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...

READ MORE

Related Books