ನೆರಳಲ್ಲವೇ ಕವಿತೆ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 136

₹ 130.00




Year of Publication: 2021
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಅನುವಾದಿತ ಕವನಗಳ ಸಂಕಲನ ‘ನೆರಳಲ್ಲವೇ ಕವಿತೆ’.ಈ ಸಂಕಲನದಲ್ಲಿ ಭಾರತೀಯ ಭಾಷೆಗಳ ಒಟ್ಟು 63 ಕವಿತೆಗಳಿವೆ. ಅವುಗಳನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ನೆರವಿನಿಂದ ಕನ್ನಡಿಸಲಾಗಿದೆ. ಉತ್ತರ ಭಾರತದ ಆರ್ಯ ಭಾಷೆಗಳಲ್ಲಿ ಸಹ ಭೌಗೋಲಿಕ, ಪ್ರಾದೇಶಿಕ ಸಾಮ್ಯದ ಹೊರತಾಗಿಯೂ, ಎದ್ದು ಕಾಣುವ ಅವುಗಳ ಭಿನ್ನ ಸ್ವರೂಪ ಹಾಗೂ ಅಲ್ಲಲ್ಲಿಯ ಹಿರಿಮೆಯನ್ನೂ ಇಲ್ಲಿ ಗಮನಿಸಬಹುದು. ಕೃತಿಯ ಪರಿವಿಡಿಯಲ್ಲಿ ಮಲಯಾಳಂ ಕವಿತೆಗಳು, ಉರ್ದೂ ಕವಿತೆಗಳು, ಗುಜರಾತೀ ಕವಿತೆಗಳು, ಸಿಂಧೀ ಕವಿತೆಗಳು, ಹಿಂದೀ ಕವಿತೆಗಳು, ಪಂಜಾಬೀ ಕವಿತೆಗಳು, ಮರಾಠೀ ಕವಿತೆಗಳು, ತೆಲುಗು ಕವಿತೆ, ತಮಿಳು ಕವಿತೆ, ಡೋಗರೀ ಕವಿತೆ, ಉಡಿಯಾ ಕವಿತೆ, ಅಸಮೀ ಕವಿತೆಗಳು ಎಂಬ ಮುಖ್ಯಶೀರ್ಷಿಗಳಿವೆ.

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books